Sign In

By signing in or creating an account, you agree with Associated Broadcasting Company's Terms & Conditions and Privacy Policy.

Pachnada sangam: ಐದು ನದಿಗಳ ಸಂಗಮ! ಪ್ರಪಂಚದಲ್ಲಿ ಇಲ್ಲಿ ಮಾತ್ರವೇ ಈ ಪವಾಡ ಕಾಣುವುದು.. ಎಲ್ಲೋ ಗೊತ್ತಾ?

ಈ ಐದು ನದಿಗಳ ಸಂಗಮವನ್ನು ಮಹಾತೀರ್ಥ ರಾಜ್ ಸಂಗಮ್ ಎಂದು ಕರೆಯಲಾಗುತ್ತದೆ. ಐದು ನದಿಗಳ ಸಂಗಮವು ಬುಂದೇಲ್‌ಖಂಡ್‌ನ ಜಲೌನ್‌ನಲ್ಲಿ ನಡೆಯುತ್ತದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯಂದು ಐತಿಹಾಸಿಕ ಜಾತ್ರೆ ನಡೆಯುತ್ತದೆ.

Pachnada sangam: ಐದು ನದಿಗಳ ಸಂಗಮ! ಪ್ರಪಂಚದಲ್ಲಿ ಇಲ್ಲಿ ಮಾತ್ರವೇ ಈ ಪವಾಡ ಕಾಣುವುದು.. ಎಲ್ಲೋ ಗೊತ್ತಾ?
ಐದು ನದಿಗಳ ಸಂಗಮ!
Follow us
ಸಾಧು ಶ್ರೀನಾಥ್​
|

Updated on: Jun 20, 2023 | 9:12 AM

ಉತ್ತರ ಪ್ರದೇಶದ (UIttar Pradesh) ಜಲೌನ್ ಮತ್ತು ಇಟಾವಾ ಗಡಿಯಲ್ಲಿರುವ ಪಂಚನಾದ್ ಪ್ರದೇಶವು ಪ್ರಕೃತಿಯ ಅನನ್ಯ ಕೊಡುಗೆಯಾಗಿದೆ. ಐದು ನದಿಗಳ ಸಂಗಮ ಪ್ರಪಂಚದ ಬೇರೆಲ್ಲಿಯೂ ಇಲ್ಲವಾಗಿದ್ದು, ಇಲ್ಲಿ ಮಾತ್ರ ಇದು ವಿಶಿಷ್ಟವಾಗಿದೆ. ಆದ್ದರಿಂದ ಪಂಚನಾಡು ಪ್ರದೇಶವನ್ನು ಮಹಾ ತೀರ್ಥರಾಜ್ ಎಂದು ಕರೆಯುತ್ತಾರೆ. ಐದು ನದಿಗಳು ಸಂಗಮಿಸುವ (Confluence) ಪ್ರಪಂಚದ ಏಕೈಕ ಸ್ಥಳವೆಂದರೆ ಪಂಚನಾಡು. ಇಲ್ಲಿ ಯಮುನಾ, ಚಂಬಲ್, ಸಿಂಧ್, ಪಹುಜ್ ಮತ್ತು ಕ್ವಾರಿ ನದಿಗಳು (Rivers) ಒಂದೇ ಸ್ಥಳದಲ್ಲಿ ಹರಿಯುತ್ತವೆ. ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸದಲ್ಲಿ ಈ ಪಂಚನದ ಆಸುಪಾಸಿನಲ್ಲಿ ಒಂದು ವರ್ಷ ಕಳೆದರು ಎಂದು ಹೇಳಲಾಗುತ್ತದೆ.

ಈ ಐದು ನದಿಗಳ ಸಂಗಮವನ್ನು ಮಹಾತೀರ್ಥ ರಾಜ್ ಸಂಗಮ್ ಎಂದು ಕರೆಯಲಾಗುತ್ತದೆ. ಐದು ನದಿಗಳ ಸಂಗಮವು ಬುಂದೇಲ್‌ಖಂಡ್‌ನ ಜಲೌನ್‌ನಲ್ಲಿ ನಡೆಯುತ್ತದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯಂದು ಐತಿಹಾಸಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಲೌನ್ ಜಿಲ್ಲೆಯ ಗಡಿಯಲ್ಲಿರುವ ಪಚ್ನಾಡ್ ತೀರದಲ್ಲಿ ಬಾಬಾ ಸಾಹೇಬ್ ದೇವಾಲಯ ಮತ್ತು ಇಟಾವಾ ಜಿಲ್ಲೆಯಲ್ಲಿ ನದಿಗಳಿಗೆ ಅಡ್ಡಲಾಗಿರುವ ಕಾಳೇಶ್ವರ ದೇವಾಲಯದ ಪುರಾವೆಗಳಿವೆ.

ದೇವಾಲಯದ ಬಗ್ಗೆ ಕೆಲವು ಸಂಗತಿಗಳು ಆಶ್ಚರ್ಯಕರವಾಗಿವೆ. ಇಲ್ಲಿ ತಪಸ್ಸಿನಲ್ಲಿ ತಲ್ಲೀನರಾಗಿದ್ದ ಮುಚ್ಕುಂದ್ ಮಹಾರಾಜರು ತಪಸ್ಸಿನ ಸಮಯದಲ್ಲಿ ಗುಹೆಯೊಳಗೆ ಕಣ್ಮರೆಯಾದರು. ಅವರ ಶವ ಇಂದಿಗೂ ಪತ್ತೆಯಾಗಿಲ್ಲ. ಸದ್ಯ ದೇವಾಲಯದ ಆವರಣದಲ್ಲಿ ಅವರ ಪಾದಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ