Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್​​ನೊಳಗೆ ನುಸುಳಲು ಒಂದೂವರೆ ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದರು!

Parliament security breach: ಸಂಸತ್​​ನ ಒಳಗೆ ನುಗ್ಗಲು ಸಂಚು ರೂಪಿಸಲಾಗಿತ್ತು. ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒಂದಾಗಿದ್ದರು. ಅವರು ಭಗತ್ ಸಿಂಗ್ ಅಭಿಮಾನಿಗಳ ಸಂಘವನ್ನು ರಚಿಸಿದರು. ಒಂದೂವರೆ ವರ್ಷದ ಹಿಂದೆ ಏನು ಮಾಡಬೇಕು ಎಂಬ ಬಗ್ಗೆ ಮೈಸೂರಿನಲ್ಲಿ ಸಭೆ ನಡೆಸಿದ್ದರು. ಒಂಬತ್ತು ತಿಂಗಳ ನಂತರ ಮತ್ತೆ ಸಭೆ ನಡೆಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ

ಸಂಸತ್​​ನೊಳಗೆ ನುಸುಳಲು ಒಂದೂವರೆ ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದರು!
ಸಂಸತ್​​ನ ಹೊರಗೆ ಆತಂಕ ಸೃಷ್ಟಿ,ಸಿದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿರುವುದು
Follow us
ರಶ್ಮಿ ಕಲ್ಲಕಟ್ಟ
|

Updated on: Dec 14, 2023 | 12:45 PM

ದೆಹಲಿ ಡಿಸೆಂಬರ್ 14 : ಡಿಸೆಂಬರ್ 13 ಬುಧವಾರ ಇಬ್ಬರು ಯುವಕರು ಸಂಸತ್ (Parliament) ಒಳಗೂ ಇಬ್ಬರು ಸಂಸತ್ ಹೊರಗೆ ಸ್ಮೋಕ್ ಬಾಂಬ್ (Smoke Bomb) ಸಿಡಿಸಿ ಆತಂಕ ಸೃಷ್ಟಿಸಿದ್ದರು. ಇದರಿಂದ ಯಾವುದೇ ಹಾನಿ, ಜೀವಕ್ಕೆ ಅಪಾಯ ಸಂಭವಿಸಿಲ್ಲ. ಗಮನ ಸೆಳೆಯಲು ಅವರು ಬಣ್ಣದ ಪಟಾಕಿ ಸಿಡಿಸಿ ಹಾಗೂ ಘೋಷಣೆಗಳನ್ನು ಹಾಕಿದರು. ಲೋಕಸಭೆ ಸಭಾಂಗಣ ಮತ್ತು ಸಂಸತ್ ಆವರಣದಲ್ಲಿ ಹಳದಿ ಬಣ್ಣ (Parliament security breach) ಹರಡಿತ್ತು. ಪೊಲೀಸರು ತನಿಖೆಯ ತಿರುವು ಪಡೆದ ನಂತರ ಷಡ್ಯಂತ್ರಗಳು ಬಯಲಾಗಿವೆ. ಈ ಬಣ್ಣಬಣ್ಣದ ಪಟಾಕಿಗಳನ್ನು ಅಮೋಲ್ ಶಿಂಧೆ ತಂದಿರುವುದು ಬೆಳಕಿಗೆ ಬಂದಿದೆ. ಹಲವು ದಿನಗಳಿಂದ ಈ ಒಳನುಸುಳುವಿಕೆ ಸಂಚು ರೂಪಿಸಿರುವುದು ಬಹಿರಂಗವಾಗಿದೆ.

ಒಂದೂವರೆ ವರ್ಷದ ಹಿಂದೆ ಸಭೆ ನಡೆದಿತ್ತು

ಒಂದೂವರೆ ವರ್ಷಗಳ ಹಿಂದೆಯೇ ದೇಶದ ವಿವಿಧ ಭಾಗಗಳ ಯುವಕರು ಸಂಸತ್ತಿನ ಒಳಗೆ ನುಸುಳಿ ಗದ್ದಲ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒಂದಾಗಿದ್ದರು. ಅವರು ಭಗತ್ ಸಿಂಗ್ ಅಭಿಮಾನಿಗಳ ಸಂಘವನ್ನು ರಚಿಸಿದರು. ಒಂದೂವರೆ ವರ್ಷದ ಹಿಂದೆ ಏನು ಮಾಡಬೇಕು ಎಂಬ ಬಗ್ಗೆ ಮೈಸೂರಿನಲ್ಲಿ ಸಭೆ ನಡೆಸಿದ್ದರು. ಒಂಬತ್ತು ತಿಂಗಳ ನಂತರ ಮತ್ತೆ ಸಭೆ ನಡೆಸಲಾಯಿತು. ಅವರು ಸಂಸತ್ತಿನೊಳಗೆ ನುಸುಳಿ ಆತಂಕ ಸೃಷ್ಟಿಸಲು ಸಂಚು ರೂಪಿಸಿದರು.

ಸಾಗರ್ ಶರ್ಮಾ, ಮನೋರಂಜನ್, ಅಮೋಲ್ ಶಿಂಧೆ, ನೀಲಂ, ಲಲಿತ್ ಝಾ ಸೇರಿದಂತೆ ಕೆಲ ಯುವಕರು ಈ ಸಂಚಿನಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನಿಖೆ ನಡೆಯುತ್ತಿದೆ. ಅದರಂತೆ ಮಾರ್ಚ್ ತಿಂಗಳಿನಲ್ಲಿ ಅವರೆಲ್ಲ ಸಭೆ ನಡೆಸಿ, ಆ ವೇಳೆ ಸಂಸತ್ ಆವರಣವನ್ನು ಪರಿಶೀಲಿಸಿದರು. ಮನೋರಂಜನ್ ಪಾಸ್ ತೆಗೆದುಕೊಂಡು ಈ ಕೆಲಸ ಮಾಡಿದ್ದ. ಆರೋಪಿಗಳು ಡಿ.12ರ ರಾತ್ರಿ ಗುರುಗ್ರಾಮದಲ್ಲಿರುವ ವಿಶಾಲ್ ಶರ್ಮಾ ಅವರ ಮನೆಯಲ್ಲಿ ತಂಗಿದ್ದರು. ಲಲಿತ್ ಝಾ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದು ತನಿಖೆಯಿಂದ ತಿಳಿದುಬಂದಿದೆ. ಇದು ನಡೆಯುತ್ತಿರುವಾಗಲೇ ಸಂಸತ್ತಿನ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ಅವರ ವಿಡಿಯೊ ಮಾಡುವ ಕೆಲಸವನ್ನು ಲಲಿತ್ ಅವರಿಗೆ ವಹಿಸಲಾಯಿತು. ವಿಡಿಯೊ ಮಾಡಿ ತಕ್ಷಣ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆತನ ಬಳಿ ಎಲ್ಲ ಆರೋಪಿಗಳ ಮೊಬೈಲ್‌ಗಳಿವೆ.

ಇದನ್ನೂ ಓದಿ: ಭದ್ರತಾ ಲೋಪ, ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ​ ಅಮಾನತು

ಮಹಾರಾಷ್ಟ್ರದಿಂದ ತಂದಿದ್ದರು ಬಣ್ಣದ ಪಟಾಕಿ

ಈ ವೇಳೆ ಲೋಕಸಭೆ ಸಭಾಂಗಣ ಹಾಗೂ ಸಂಸತ್ ಆವರಣದಲ್ಲಿ ಹೊಗೆಸೂಸುವ ಸಿಡಿಸಲಾಯಿತು. ಇದು ಹಳದಿ ಹೊಗೆಯನ್ನು ಉಂಟುಮಾಡಿತು. ಈ ಬಣ್ಣದ ಪಟಾಕಿಗಳನ್ನು ಮಹಾರಾಷ್ಟ್ರದಿಂದ ಅಮೋಲ್ ಶಿಂಧೆ ತಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಶೂಗಳನ್ನು ಪರಿಶೀಲಿಸದಿರುವುದು ಮನೋರಂಜನ್ ಅವರಿಗೆ ತಿಳಿದಿದ್ದರಿಂದ ಶೂಗಳ ಮೂಲಕ ಪಟಾಕಿಗಳನ್ನು ತೆಗೆದುಕೊಂಡು ಹೋಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು