AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ

ಭಾರತ್ ಬಯೋಟೆಕ್ ಸಂಸ್ಥೆ ಈ ಬಗ್ಗೆ ಇತರ ಕಂಪೆನಿಗಳೊಂದಿಗೆ ಕೈಜೋಡಿಸಲು ತಯಾರಿದೆ. ಕಂಪೆನಿಯ ಈ ಮೊದಲ ಇತಿಹಾಸವೇ ಭಾರತ್ ಬಯೋಟೆಕ್ ಸಹಭಾಗಿತ್ವವನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಎಲ್ಲಾ ನುಡಿದಿದ್ದಾರೆ.

ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 23, 2021 | 12:41 PM

Share

ದೆಹಲಿ: ಸಹಭಾಗಿತ್ವ, ತಂತ್ರಜ್ಞಾನ ಹಂಚಿಕೆ ಹಾಗೂ ಉಪಕರಣಗಳ ಸಾಗಾಣಿಕೆ, ಕೊರೊನಾ ಲಸಿಕೆ ಹಂಚಿಕೆ ಸರಿಯಾಗಿ ಆಗಲು ಮುಖ್ಯ ಅಂಶಗಳು ಎಂದು ಭಾರತ್ ಬಯೋಟೆಕ್​ನ ಜಂಟಿ ಎಮ್​ಡಿ ಸುಚಿತ್ರಾ ಎಲ್ಲಾ ಶನಿವಾರ ತಿಳಿಸಿದ್ದಾರೆ. ಬಹುದೊಡ್ಡ ಮಟ್ಟದಲ್ಲಿ ಲಸಿಕೆ ಪೂರೈಕೆಗೆ ಈ ಅಂಶಗಳನ್ನು ಪರಿಗಣಿಸುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ. ಇಯು- ಇಂಡಿಯಾ ಬ್ಯುಸಿನೆಸ್ ದುಂಡುಮೇಜಿನಲ್ಲಿ ಮಾತನಾಡಿದ ಎಲ್ಲಾ, ಪೇಟೆಂಟ್ ಸಡಿಲಿಕೆಗಿಂತಲೂ ಈ ಮೇಲೆ ಸೂಚಿಸಿದ ವಿಚಾರಗಳು ಮುಖ್ಯ. ಇದು ದೇಶದ ಲಸಿಕೆ ಬೇಡಿಕೆ ಮಾತ್ರವಲ್ಲ, ಜಾಗತಿಕ ಲಸಿಕೆ ಪೂರೈಕೆಗೆ ಅಗತ್ಯ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆಯನ್ನು ಭಾರತದಂಥ ಬೃಹತ್ ರಾಷ್ಟ್ರಕ್ಕೆ ಪೂರೈಸುವುದಕ್ಕೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ನಾವು ಕೊವ್ಯಾಕ್ಸಿನ್ ಲಸಿಕೆಯನ್ನು ಯುಎಸ್​ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದೇವೆ. ಯುರೋಪ್​ನಲ್ಲಿ ಕೂಡ ಈ ಕಾರ್ಯ ಆಗುವುದು ಬೇಕಿದೆ. ಯುರೋಪಿಯನ್ ಕಂಪೆನಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಬೇಕಿದೆ ಎಂದು ಸುಚಿತ್ರಾ ಎಲ್ಲಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಭಾರತ ದೇಶದ 1.3 ಬಿಲಿಯನ್ ಜನರಿಗೆ ಬೇಕಿರುವ ಲಸಿಕೆಯನ್ನು ಪೂರೈಸುವುದು ಕಷ್ಟಸಾಧ್ಯ. ನಮಗೆಲ್ಲರಿಗೂ ಈ ವಿಚಾರ ತಿಳಿದೇ ಇದೆ. ಇದಕ್ಕೆ ಪರಿಹಾರವಾಗಿ ನಾವು ಹೆಚ್ಚಿನ ತಂತ್ರಜ್ಞಾನವನ್ನು, ಪೇಟೆಂಟ್ ಸಡಿಲಿಕೆಯನ್ನು ನಮ್ಮ ಸೌಲಭ್ಯ ಬಳಸಿ ಲಸಿಕೆ ಹಂಚಿಕೆಯನ್ನು ವೇಗವಾಗಿ ನಡೆಸುವುದು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆ ಈ ಬಗ್ಗೆ ಇತರ ಕಂಪೆನಿಗಳೊಂದಿಗೆ ಕೈಜೋಡಿಸಲು ತಯಾರಿದೆ. ಕಂಪೆನಿಯ ಈ ಮೊದಲ ಇತಿಹಾಸವೇ ಭಾರತ್ ಬಯೋಟೆಕ್ ಸಹಭಾಗಿತ್ವವನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಎಲ್ಲಾ ನುಡಿದಿದ್ದಾರೆ.

ಇದನ್ನೂ ಓದಿ: ನಗರಗಳ ಬಳಿಕ ಹಳ್ಳಿಗಳು ಈಗ ಕೊರೊನಾ ಸೋಂಕಿನ ಅಪಾಯದಲ್ಲಿ; ಪರಮಾತ್ಮ ನಿರ್ಭರ್ ಭಾರತ್ ಎಂದ ರಾಹುಲ್ ಗಾಂಧಿ

ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಇವೆರಡರಲ್ಲಿ ಯಾವುದು ಲಭ್ಯವಿದೆ ಎಂದು ತಿಳಿಯಲು ಹೀಗೆ ಮಾಡಿ

(Partnerships Tech transfers supply of materials must to scale up Vaccine Production says Bharat Biotech Joint MD)

Published On - 10:55 pm, Sun, 9 May 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು