ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ

ಪಾಕಿಸ್ತಾನ(Pakistan) ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್​(Congress) ಕೇಳುತ್ತಿದೆ.  ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದ್ದಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಚಾಟಿ ಬೀಸಿದರು. ಕಾಂಗ್ರೆಸ್​ಗೆ ಭಾರತೀಯ ಸೈನಿಕರ ಬಲದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕೂಡ ಭಾರತೀಯ ಸೇನೆಯ ಬಳಿ ಕಾಂಗ್ರೆಸ್​ ಸಬೂತು ಕೇಳಿತ್ತು. ಬಳಿಕ ಸಾಕ್ಷ್ಯ ಸಿಕ್ಕ ಮೇಲೆ ಈ ಸರ್ಜಿಕಲ್ ಸ್ಟ್ರೈಕ್​ ನಮಗೆ ದೊಡ್ಡದೇನೂ ಅಲ್ಲ, ನಾವು ಕೂಡ ಮಾಡಿದ್ದೆವು ಎಂದು ಹೇಳಿಕೊಂಡು ಓಡಾಡಿತ್ತು.

ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: PTI

Updated on: Jul 29, 2025 | 8:14 PM

ನವದೆಹಲಿ, ಜುಲೈ 29: ಪಾಕಿಸ್ತಾನ(Pakistan) ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್​(Congress) ಕೇಳುತ್ತಿದೆ.  ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಚಾಟಿ ಬೀಸಿದರು. ಕಾಂಗ್ರೆಸ್​ಗೆ ಭಾರತೀಯ ಸೈನಿಕರ ಬಲದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕೂಡ ಭಾರತೀಯ ಸೇನೆಯ ಬಳಿ ಕಾಂಗ್ರೆಸ್​ ಸಬೂತು ಕೇಳಿತ್ತು. ಬಳಿಕ ಸಾಕ್ಷ್ಯ ಸಿಕ್ಕ ಮೇಲೆ ಈ ಸರ್ಜಿಕಲ್ ಸ್ಟ್ರೈಕ್​ ನಮಗೆ ದೊಡ್ಡದೇನೂ ಅಲ್ಲ, ನಾವು ಕೂಡ ಮಾಡಿದ್ದೆವು ಎಂದು ಹೇಳಿಕೊಂಡು ಓಡಾಡಿತ್ತು.

ಇನ್ನು ಬಾಲಾಕೋಟ್ ಏರ್​ ಸ್ಟ್ರೈಕ್ ಆದಾಗ ಕೂಡ ಫೋಟೊ ತೋರಿಸಿ, ಎಲ್ಲಿ, ಯಾವ ಜಾಗದಲ್ಲಿ ಯಾವ ಸಮಯದಲ್ಲಿ ದಾಳಿ ಮಾಡಿದಿರಿ ಎಂದು ಕಾಂಗ್ರೆಸ್​ ಕೇಳಿತ್ತು. ಪಾಕಿಸ್ತಾನವು ಕೂಡ ಇದನ್ನೇ ಕೇಳುತ್ತಿತ್ತು.
ಅಭಿನಂದನ್ ಪಾಕ್​ನವರ ಕೈಯಲ್ಲಿ ಸಿಕ್ಕಿದಾಗ ಅವರ ಬಗ್ಗೆ ಆಲೋಚನೆ ಮಾಡುವ ಬದಲು ಅವರನ್ನು ಅಸ್ತ್ರದಂತೆ ಬಳಸಿ ನನ್ನ ಮೇಲೆ ದಾಳಿ ಮಾಡಲಾಯಿತು.

ಆದರೆ ಅಂದು ಅಭಿನಂದನ್ ಸುರಕ್ಷಿತವಾಗಿ ವಾಪಸಾದರು. ಆಗಲೂ ಕಾಂಗ್ರೆಸ್​​ಗೆ ಖುಷಿ ಇರಲಿಲ್ಲ. ಈಗ ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಸೈನಿಕರೊಬ್ಬರು ಪಾಕಿಸ್ತಾನದವರ ಕೈಯಲ್ಲಿ ಸಿಕ್ಕಾಗ ಕೂಡ ಇದೇ ರೀತಿ ಕೊಂಕು ಮಾತುಗಳನ್ನು ಕಾಂಗ್ರೆಸ್​ ಆಡಿತ್ತು.

ಮತ್ತಷ್ಟು ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ

ಆದರೆ ಸೈನಿಕರಿಗೆ ಏನೂ ಆಗದಂತೆ ವಾಪಸ್ ಕರೆದುಕೊಂಡು ಬಂದಿದ್ದೇವೆ. ಈ ಕಾಂಗ್ರೆಸ್​ ಪಾಕಿಸ್ತಾನ ಆಡಿಸಿದಂತೆ ಆಡುತ್ತಿದೆ. ಅದರ ರಿಮೋಟ್ ಕಂಟ್ರೋಲ್ ಪಾಕ್​ ಕೈಯಲ್ಲಿದೆ ಎಂದರು. ಆಪರೇಷನ್​ ಸಿಂಧೂರ್​​ನಂತಹ ಘಟನೆಗಳು ನಡೆದಾಗ ದೇಶದ ತಾಕತ್ತಿನ ಪರಿಚಯವಾಗುತ್ತದೆ.

ಪಾಕ್​ 1 ಸಾವಿರ ಮಿಸೈಲ್​ ಮೂಲಕ ದಾಳಿ ನಡೆಸಲು ಮುಂದಾಗಿತ್ತು?
ಪಾಕಿಸ್ತಾನವು ಒಂದು ಸಾವಿರ ಮಿಸೈಲ್​ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಒಂದೊಮ್ಮೆ ಅದು ಭಾರತದ ಮೇಲೆ ಬಿದ್ದಿದ್ದರೆ ಇಲ್ಲಿಯ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಒಮ್ಮೆ ಆಲೋಚಿಸಲೇಬೇಕು. ಆದರೆ ಭಾರತೀಯ ಸೈನಿಕರು ಅದನ್ನು ಆಕಾಶದಲ್ಲಿಯೇ ಚೂರು ಚೂರು ಮಾಡಿದ್ದಾರೆ.

ಕಾಂಗ್ರೆಸ್​ ಮೀಡಿಯಾದಲ್ಲಿ ಹೆಡ್​​ಲೈನ್ ಆಗಬಹುದು ಆದರೆ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಭಾರತದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಆದರೆ ಕಾಂಗ್ರೆಸ್​ ಇಲ್ಲಿಯವರೆಗೂ ಆಚರಿಸಿಲ್ಲ. ಇದು ಸೇನೆ ಬಗ್ಗೆ ಇರುವ ನೆಗೆಟಿವಿಟಿಯನ್ನು ತೋರಿಸುತ್ತದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:11 pm, Tue, 29 July 25