AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಗಾಂವ್ ಬಳಿ ಗಡಿಯಲ್ಲಿ ಮೊದಲ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಸ್ಥಾಪಿಸಲು ಭಾರತ, ಭೂತಾನ್ ಯೋಜನೆ

ಭಾರತ ಮತ್ತು ಭೂತಾನ್ ಭಾಗದೊಂದಿಗೆ ಸಮಾಲೋಚಿಸಿ ಭಾರತ ಸರ್ಕಾರದ ಬೆಂಬಲದ ಮೂಲಕ ಪ್ರಸ್ತಾವಿತ ಕೊಕ್ರಜಾರ್-ಗೆಲೆಫು ರೈಲು ಸಂಪರ್ಕ ಯೋಜನೆಯನ್ನು ತ್ವರಿತಗೊಳಿಸಲಿದೆ. ಇದು ಐತಿಹಾಸಿಕ. ಏಕೆಂದರೆ ಇದು ಭಾರತ ಮತ್ತು ಭೂತಾನ್ ನಡುವಿನ ಮೊದಲ ರೈಲು ಸಂಪರ್ಕವಾಗಿದೆ ಎಂದು ಕ್ವಾತ್ರಾ ಹೇಳಿದ್ದಾರೆ.

ಜೈಗಾಂವ್ ಬಳಿ ಗಡಿಯಲ್ಲಿ ಮೊದಲ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಸ್ಥಾಪಿಸಲು ಭಾರತ, ಭೂತಾನ್ ಯೋಜನೆ
ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಜತೆ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Apr 05, 2023 | 1:12 PM

Share

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಭೂತಾನ್ (Bhutan) ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ (Jigme Khesar Namgyel Wangchuck) ಅವರು ಮಂಗಳವಾರ ನವದೆಹಲಿಯಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಿದ್ದು ಎರಡೂ ಕಡೆಯವರು ತಮ್ಮ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದರು. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಅವರು ಭೂತಾನ್ ಕೈಗೊಂಡ ಸುಧಾರಣೆಗಳ ಉಪಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದಾರೆ. ಭೂತಾನ್‌ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆ, ವ್ಯಾಪಾರ ಅನುಕೂಲ ಕ್ರಮಗಳು ಮತ್ತು ವ್ಯಾಪಾರ, ಸಂಪರ್ಕ, ಹೂಡಿಕೆ, ಇಂಧನ ಮತ್ತು ಬಾಹ್ಯಾಕಾಶ ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ಕೇಂದ್ರೀಕರಿಸಿವೆ ಎಂದು ಅವರು ಹೇಳಿದ್ದಾರೆ.

ಸಭೆಯ ಫಲಿತಾಂಶಗಳ ಕುರಿತು ಮಾತನಾಡಿದ ಕ್ವಾತ್ರಾ, ಭೂತಾನ್‌ನ ಮುಂಬರುವ 13 ನೇ ಪಂಚವಾರ್ಷಿಕ ಯೋಜನೆಗೆ ಭಾರತವು ತನ್ನ ಬೆಂಬಲವನ್ನು ಹೆಚ್ಚಿಸಲಿದೆ ಎಂದು ಹೇಳಿದರು. ಹೆಚ್ಚುವರಿ ಸ್ಟ್ಯಾಂಡ್‌ಬೈ ಕ್ರೆಡಿಟ್ ಸೌಲಭ್ಯವನ್ನು ವಿಸ್ತರಿಸಲು ಮತ್ತು ಭೂತಾನ್‌ನಿಂದ ಕೃಷಿ ಸರಕುಗಳ ರಫ್ತಿಗೆ ದೀರ್ಘಾವಧಿಯ ಸುಸ್ಥಿರ ವ್ಯವಸ್ಥೆಗಳನ್ನು ರೂಪಿಸಲು ಭಾರತವು ಕೆಲಸ ಮಾಡುತ್ತದೆ. ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂತಹ ನಿರ್ಣಾಯಕ ಸರಕುಗಳ ಖಚಿತವಾದ ಪೂರೈಕೆಗಾಗಿ ದೀರ್ಘಾವಧಿಯ ದ್ವಿಪಕ್ಷೀಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ದೇಶವು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಎರಡೂ ದೇಶಗಳು ಭಾರತ-ಭೂತಾನ್ ಗಡಿಯಲ್ಲಿ ಜೈಗಾಂವ್ ಬಳಿ ಮೊದಲ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ಸ್ಥಾಪಿಸಲು ಪರಿಶೀಲಿಸುತ್ತಿವೆ ಮತ್ತು ಪರಿಗಣಿಸುತ್ತಿವೆ. ಭಾರತ ಮತ್ತು ಭೂತಾನ್ ಭೂತಾನ್ ಭಾಗದೊಂದಿಗೆ ಸಮಾಲೋಚಿಸಿ ಭಾರತ ಸರ್ಕಾರದ ಬೆಂಬಲದ ಮೂಲಕ ಪ್ರಸ್ತಾವಿತ ಕೊಕ್ರಜಾರ್-ಗೆಲೆಫು ರೈಲು ಸಂಪರ್ಕ ಯೋಜನೆಯನ್ನು ತ್ವರಿತಗೊಳಿಸಲಿದೆ. ಇದು ಐತಿಹಾಸಿಕ. ಏಕೆಂದರೆ ಇದು ಭಾರತ ಮತ್ತು ಭೂತಾನ್ ನಡುವಿನ ಮೊದಲ ರೈಲು ಸಂಪರ್ಕವಾಗಿದೆ ಎಂದು ಕ್ವಾತ್ರಾ ಹೇಳಿದ್ದಾರೆ.

ಇದಕ್ಕೂ ಮುನ್ನ ಬೆಳಗ್ಗೆ ರಾಜ್‌ಘಾಟ್‌ನಲ್ಲಿ ವಾಂಗ್‌ಚುಕ್ ಅವರು ಮಹಾತ್ಮ ಗಾಂಧಿ  ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೂತಾನ್ ರಾಜನನ್ನು ಭೇಟಿಯಾಗಿದ್ದು, ದ್ವಿಪಕ್ಷೀಯ ಸಭೆಯ ನಂತರ ವಾಂಗ್‌ಚುಕ್ ಸಂಜೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಏಪ್ರಿಲ್​ 8, 9ರಂದು ಪ್ರಧಾನಿ ಮೋದಿ ಮೈಸೂರು ಪ್ರವಾಸದ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ

ಭೂತಾನ್ ರಾಜ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಭೂತಾನ್ ರಾಜರ ಜತೆಗೆ ವಿದೇಶಾಂಗ ವ್ಯವಹಾರಗಳ ಮತ್ತು ವಿದೇಶಾಂಗ ವ್ಯಾಪಾರದ ಸಚಿವ ಡಾ. ತಂದಿ ದೋರ್ಜಿ ಮತ್ತು ಭೂತಾನ್ ಸರ್ಕಾರದ ಹಲವಾರು ಹಿರಿಯ ಅಧಿಕಾರಿಗಳೂ ಇದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Wed, 5 April 23