
ದೆಹಲಿ: ಇಡೀ ಜಗತ್ತು ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿದೆ. ಆದ್ರೆ ಭಾರತದ ಜನರ ಹೋರಾಟ ಜಗತ್ತಿನಲ್ಲೇ ಚರ್ಚೆ ಆಗ್ತಿದೆ. ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾಗರಿಕರು ಭಾಗಿಯಾಗಿದ್ದಾರೆ. ದೇಶದ ಜನರ ಜತೆ ಸೇರಿ ಸರ್ಕಾರ ಹೋರಾಟ ನಡೆಸುತ್ತಿದೆ. ನಾವೆಲ್ಲರೂ ಸೇರಿ ಕೊರೊನಾ ವಿರುದ್ಧ ಮತ್ತಷ್ಟು ಹೋರಾಡಬೇಕಿದೆ ಎಂದು ಮನ್ ಕಿ ಬಾತ್ನ 64ನೇ ಎಪಿಸೋಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.