AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಖಡಕ್​ ಅಧಿಕಾರಿ.. ಇಂದು C/O ಫುಟ್​ಪಾತ್​ -ಇದು ಮನಮುಟ್ಟುವಂಥ ‘ಪೊಲೀಸ್’ ಸ್ಟೋರಿ

ಭೋಪಾಲ್: ಒಂದು ಕಾಲದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ವ್ಯಕ್ತಿ ಹಲವು ವರ್ಷಗಳ ನಂತರ ಭಿಕ್ಷುಕನಂತೆ ತಮ್ಮ ಸಹೋದ್ಯೋಗಿಗಳಿಗೆ ಆಕಸ್ಮಿಕವಾಗಿ ರಸ್ತೆಯಲ್ಲಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಫೋಟೋದಲ್ಲಿ ಕೊಳಕಾದ ಮೈ, ಉದ್ದ ಗಡ್ಡ-ಮೀಸೆಯಲ್ಲಿ ರಸ್ತೆ ಬದಿ ಭಿಕ್ಷುಕನಂತೆ ಕಾಣಸಿಗುವ ಈ ವ್ಯಕ್ತಿ ಅಸಲಿಗೆ ಮಾಜಿ ಪೊಲೀಸ್ ಅಧಿಕಾರಿ ಮನೀಶ್ ಮಿಶ್ರಾ. ಯಾರು ಊಹಿಸಲಾಗದಂತಹ ಸ್ಥಿತಿಗೆ ಇವರು ಇಂದು ತಲುಪಿದ್ದಾರೆ. ಭಿಕ್ಷುಕನಂತೆ ಕಂಡ ಸಹೋದ್ಯೋಗಿ ನೋಡಿ ಅಧಿಕಾರಿಗಳಿಗೆ ಶಾಕ್​! ಉಪ ಪೊಲೀಸ್ […]

ಅಂದು ಖಡಕ್​ ಅಧಿಕಾರಿ.. ಇಂದು C/O ಫುಟ್​ಪಾತ್​ -ಇದು ಮನಮುಟ್ಟುವಂಥ ‘ಪೊಲೀಸ್’ ಸ್ಟೋರಿ
KUSHAL V
|

Updated on: Nov 15, 2020 | 8:49 PM

Share

ಭೋಪಾಲ್: ಒಂದು ಕಾಲದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ವ್ಯಕ್ತಿ ಹಲವು ವರ್ಷಗಳ ನಂತರ ಭಿಕ್ಷುಕನಂತೆ ತಮ್ಮ ಸಹೋದ್ಯೋಗಿಗಳಿಗೆ ಆಕಸ್ಮಿಕವಾಗಿ ರಸ್ತೆಯಲ್ಲಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ.

ಅಂದ ಹಾಗೆ, ಫೋಟೋದಲ್ಲಿ ಕೊಳಕಾದ ಮೈ, ಉದ್ದ ಗಡ್ಡ-ಮೀಸೆಯಲ್ಲಿ ರಸ್ತೆ ಬದಿ ಭಿಕ್ಷುಕನಂತೆ ಕಾಣಸಿಗುವ ಈ ವ್ಯಕ್ತಿ ಅಸಲಿಗೆ ಮಾಜಿ ಪೊಲೀಸ್ ಅಧಿಕಾರಿ ಮನೀಶ್ ಮಿಶ್ರಾ. ಯಾರು ಊಹಿಸಲಾಗದಂತಹ ಸ್ಥಿತಿಗೆ ಇವರು ಇಂದು ತಲುಪಿದ್ದಾರೆ.

ಭಿಕ್ಷುಕನಂತೆ ಕಂಡ ಸಹೋದ್ಯೋಗಿ ನೋಡಿ ಅಧಿಕಾರಿಗಳಿಗೆ ಶಾಕ್​! ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ರತ್ನೇಶ್ ಸಿಂಗ್ ತೋಮರ್ ಮತ್ತು ವಿಜಯ್ ಸಿಂಗ್ ಬಹದ್ದೂರ್ ಕಳೆದ ಮಂಗಳವಾರ ರಾತ್ರಿ ನಗರದ ಕಲ್ಯಾಣ ಮಂಟಪದ ಬಳಿ ಹೋಗುತ್ತಿದ್ದಾಗ ಭಿಕ್ಷುಕನಂತೆ ಕಂಡ ವ್ಯಕ್ತಿಯೊಬ್ಬ ಚಳಿಯಿಂದ ನಡುಗುತ್ತಿದ್ದದ್ದು ಕಂಡುಬಂತು. ಇದನ್ನು ಕಂಡ ಅಧಿಕಾರಿಗಳು ಗಾಡಿಯಿಂದ ಇಳಿದು ಆತನಿಗೆ ಜಾಕೇಟ್ ನೀಡಲು ಮುಂದಾದರು. ಆಗ ಆ ವ್ಯಕ್ತಿ ತಮ್ಮ ಮೊದಲ ಹೆಸರಿನಿಂದ ಇವರನ್ನು ಕರೆದಾಗ ಇಬ್ಬರು ಅಧಿಕಾರಿಗಳಿಗೆ ಫುಲ್​ ಶಾಕ್​!. ಕೂಡಲೇ ಅವರಿಗೆ ಅರೇ, ಇದು ಬೇರೆ ಯಾರೂ ಅಲ್ಲ ಮನೀಶ್​ ಎಂದು ಗೊತ್ತಾಗಿದೆ.

ಮನೀಶ್​ ಮಿಶ್ರಾ ದುಃಸ್ಥಿತಿಗೆ ಕಾರಣವೇನು? ಒಂದು ಕಾಲದಲ್ಲಿ ಮಿಶ್ರಾ ಉತ್ತಮ ಕ್ರೀಡಾಪಟು ಮತ್ತು ಶಾರ್ಪಶೂಟರ್ ಆಗಿದ್ದರು. 1999ರಲ್ಲಿ ಪೊಲೀಸ್ ಪಡೆಗೆ ಸೇರಿದ್ದ ಮನೀಶ್​ ಅಸಲಿಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. 2005ರಲ್ಲಿ ಡಾಟಿಯಾದಲ್ಲಿ ಇನ್​ಸ್ಪೆಕ್ಟ​ರ್​ ಆಗಿ ನೇಮಕಗೊಂಡಾದ ಬಳಿಕ ನಾಪತ್ತೆಯಾಗಿದ್ದರು. ಇಷ್ಟು ವರ್ಷಗಳ ಕಾಲ ಅವರು ಎಲ್ಲಿದ್ದರೂ ಎಂಬ ಸುಳಿವು ಸಹ ಯಾರಿಗೂ ಸಿಕ್ಕಿರಲಿಲ್ಲ. ಸದ್ಯ, ಅವರ ಸ್ನೇಹಿತರು ಮಿಶ್ರಾಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದು, ಮನೀಶ್​ ಆದಷ್ಟು ಬೇಗ ಮೊದಲಿನಂತೆ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ