ಬೆಳಗಿನ ಜಾವ ನಾಲ್ವರು ನಕ್ಸಲರನ್ನ ಹೊಡೆದುರುಳಿಸಿದ CRPF ಯೋಧರು

ಛತ್ತೀಸ್​ಗಢ: ಸಿಆರ್​ಪಿಎಫ್ ಯೋಧರು‌ ಹಾಗೂ‌ ನಕ್ಸಲರ‌ ನಡುವೆ ಭಾರೀ ಗುಂಡಿನ‌ ಚಕಮುಕಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ನಾಲ್ವರು ನಕ್ಸಲರನ್ನು ಯೋಧರು ಹೊಡೆದುರುಳಿಸಿದ್ದಾರೆ. ಮಾನ್ಸೂರ್​ ಜಿಲ್ಲೆಯ ಪಾರದೌನಿ‌ ಅರಣ್ಯ ಪ್ರದೇಶದಲ್ಲಿ‌ ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲರ ಹತ್ಯೆಯಾಗಿದೆ. ಘಟನೆಯಲ್ಲಿ ಮದನಪಾಡು ಪಿಎಸ್​ಐ ಶ್ಯಾಮ‌ ಕಿಶೋರ್​ ಹುತಾತ್ಮರಾಗಿದ್ದಾರೆ. ನಕ್ಸಲರ ಬಳಿಯಿದ್ದ ಭಾರೀ ಪ್ರಮಾಣದ ಬಂದೂಕು‌, ಮದ್ದು ಗುಂಡು ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ಸಿಆರ್​ಪಿಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.

ಬೆಳಗಿನ ಜಾವ ನಾಲ್ವರು ನಕ್ಸಲರನ್ನ ಹೊಡೆದುರುಳಿಸಿದ CRPF ಯೋಧರು
ಸಾಧು ಶ್ರೀನಾಥ್​

Updated on: May 09, 2020 | 10:22 AM

ಛತ್ತೀಸ್​ಗಢ: ಸಿಆರ್​ಪಿಎಫ್ ಯೋಧರು‌ ಹಾಗೂ‌ ನಕ್ಸಲರ‌ ನಡುವೆ ಭಾರೀ ಗುಂಡಿನ‌ ಚಕಮುಕಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ನಾಲ್ವರು ನಕ್ಸಲರನ್ನು ಯೋಧರು ಹೊಡೆದುರುಳಿಸಿದ್ದಾರೆ. ಮಾನ್ಸೂರ್​ ಜಿಲ್ಲೆಯ ಪಾರದೌನಿ‌ ಅರಣ್ಯ ಪ್ರದೇಶದಲ್ಲಿ‌ ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲರ ಹತ್ಯೆಯಾಗಿದೆ.

ಘಟನೆಯಲ್ಲಿ ಮದನಪಾಡು ಪಿಎಸ್​ಐ ಶ್ಯಾಮ‌ ಕಿಶೋರ್​ ಹುತಾತ್ಮರಾಗಿದ್ದಾರೆ. ನಕ್ಸಲರ ಬಳಿಯಿದ್ದ ಭಾರೀ ಪ್ರಮಾಣದ ಬಂದೂಕು‌, ಮದ್ದು ಗುಂಡು ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ಸಿಆರ್​ಪಿಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.

Published On - 10:21 am, Sat, 9 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us