AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ. ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ […]

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!
ಸಾಧು ಶ್ರೀನಾಥ್​
|

Updated on: Apr 15, 2020 | 6:34 PM

Share

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ.

ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ ಕಾಲ ಡಾನಾ ಅಲ್ಲೇ ಇದ್ದರು.

ನಿರಂಜನ್ ಹುಟ್ಟುಹಬ್ಬ ನೆಪದಲ್ಲಿ ಡಾನಾ ಮತ್ತೊಮ್ಮೆ ಭಾರತಕ್ಕೆ ಬಂದುಹೋಗಿದ್ದರು. ಅದಾದ ಮೇಲೆ ಫೆ.11ರಂದು ಮದುವೆಗಾಗಿ ಡಾನಾ ಮತ್ತು ಆಕೆಯ ತಾಯಿ ಮೆಕ್ಸಿಕೋದಿಂದ ಭಾರತಕ್ಕೆ ಬಂದರು. ಫೆ.17ರಂದು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ರೋಹ್ಟಕ್ ನಿವಾಸಿ ನಿರಂಜನ್ ಹಾಗೂ ಮೆಕ್ಸಿಕೋ ದೇಶದ ಡಾನಾ ಜೋಹೆರಿ ಆಲಿವೆರೋಸ್ ಕ್ರೂಸ್ ಅರ್ಜಿ ಸಲ್ಲಿಸಿದ್ದರು.

ಅದರಂತೆ ಮಾರ್ಚ್​ 18ಕ್ಕೆ ನೋಟಿಸ್ ಅವಧಿ ಮುಕ್ತಾಯವಾಗಿತ್ತು. ಆದ್ರೆ ಮಾ.19ರಿಂದ ಲಾಕ್​ಡೌನ್ ಶುರುವಾದ್ದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ ವಿವಾಹ ಸಂಬಂಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ವಿವಾಹ ಕೈಂಕರ್ಯಕ್ಕೆ ನೆರವು ಕೋರಿದರು.

ಈಗ ಲಾಕ್​ಡೌನ್ ಸಂದರ್ಭದಲ್ಲಿ ವಿವಾಹವಾಗಲು ಸಾಧ್ಯವಾಗಲಿಲ್ಲ. ಕೊನೆಗೂ… ಏಪ್ರಿಲ್ 13ರ ರಾತ್ರಿ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿವಾಹ ನೆರವೇರಿತು ಎಂಬುದರ ಮೂಲಕ ನಿರಂಜನ್- ಡಾನಾ ಜೋಡಿ ಪ್ರೇಮ ಶುಭರಸ್ತು ಆಗಿದೆ!

ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು