AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ. ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ […]

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 15, 2020 | 6:34 PM

Share

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ.

ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ ಕಾಲ ಡಾನಾ ಅಲ್ಲೇ ಇದ್ದರು.

ನಿರಂಜನ್ ಹುಟ್ಟುಹಬ್ಬ ನೆಪದಲ್ಲಿ ಡಾನಾ ಮತ್ತೊಮ್ಮೆ ಭಾರತಕ್ಕೆ ಬಂದುಹೋಗಿದ್ದರು. ಅದಾದ ಮೇಲೆ ಫೆ.11ರಂದು ಮದುವೆಗಾಗಿ ಡಾನಾ ಮತ್ತು ಆಕೆಯ ತಾಯಿ ಮೆಕ್ಸಿಕೋದಿಂದ ಭಾರತಕ್ಕೆ ಬಂದರು. ಫೆ.17ರಂದು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ರೋಹ್ಟಕ್ ನಿವಾಸಿ ನಿರಂಜನ್ ಹಾಗೂ ಮೆಕ್ಸಿಕೋ ದೇಶದ ಡಾನಾ ಜೋಹೆರಿ ಆಲಿವೆರೋಸ್ ಕ್ರೂಸ್ ಅರ್ಜಿ ಸಲ್ಲಿಸಿದ್ದರು.

ಅದರಂತೆ ಮಾರ್ಚ್​ 18ಕ್ಕೆ ನೋಟಿಸ್ ಅವಧಿ ಮುಕ್ತಾಯವಾಗಿತ್ತು. ಆದ್ರೆ ಮಾ.19ರಿಂದ ಲಾಕ್​ಡೌನ್ ಶುರುವಾದ್ದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ ವಿವಾಹ ಸಂಬಂಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ವಿವಾಹ ಕೈಂಕರ್ಯಕ್ಕೆ ನೆರವು ಕೋರಿದರು.

ಈಗ ಲಾಕ್​ಡೌನ್ ಸಂದರ್ಭದಲ್ಲಿ ವಿವಾಹವಾಗಲು ಸಾಧ್ಯವಾಗಲಿಲ್ಲ. ಕೊನೆಗೂ… ಏಪ್ರಿಲ್ 13ರ ರಾತ್ರಿ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿವಾಹ ನೆರವೇರಿತು ಎಂಬುದರ ಮೂಲಕ ನಿರಂಜನ್- ಡಾನಾ ಜೋಡಿ ಪ್ರೇಮ ಶುಭರಸ್ತು ಆಗಿದೆ!

Follow Us
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ