AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್​ರ ಭವಿಷ್ಯ್​ ಕಾ ಭಾರತ್​ ಪುಸ್ತಕದ ಉರ್ದು ಆವೃತ್ತಿ ಇಂದು ಬಿಡುಗಡೆ; ಮುಸ್ಲಿಮರು ತಪ್ಪದೆ ಓದಿ ಎಂದ ಡಾ. ಅಕ್ವಿಲ್​

ಮುಸ್ಲಿಮರನ್ನು ಹೊರತುಪಡಿಸಿದ ಹಿಂದುತ್ವದ ಕಲ್ಪನೆ ಅಪರಿಪೂರ್ಣ. ಇದನ್ನೇ ಮೋಹನ್​ ಭಾಗವತ್ ಜೀ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಹಿಂದುತ್ವ ಎಂದರೆ ಹಿಂದು ಧರ್ಮವಲ್ಲ.. ಇದು ಇಡೀ ದೇಶದ ಸಂಸ್ಕೃತಿ ಎಂದು ಡಾ. ಅಕ್ವಿಲ್ ಹೇಳಿದ್ದಾರೆ.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್​ರ ಭವಿಷ್ಯ್​ ಕಾ ಭಾರತ್​ ಪುಸ್ತಕದ ಉರ್ದು ಆವೃತ್ತಿ ಇಂದು ಬಿಡುಗಡೆ; ಮುಸ್ಲಿಮರು ತಪ್ಪದೆ ಓದಿ ಎಂದ ಡಾ. ಅಕ್ವಿಲ್​
ಮೋಹನ್ ಭಾಗವತ್​
Lakshmi Hegde
|

Updated on: Apr 05, 2021 | 2:28 PM

Share

ನವದೆಹಲಿ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಬರೆದ ಭವಿಷ್ಯ್​ ಕಾ ಭಾರತ್​ ಪುಸ್ತಕದ ಉರ್ದು ಭಾಷೆಯ ಆವೃತ್ತಿ ಇಂದಿನಿಂದ ಲಭ್ಯವಾಗಲಿದೆ. ಮುಸ್ತಕಬಿಲ್​ ಕಾ ಭಾರತ್​ ಹೆಸರಿನ ಪುಸ್ತಕವನ್ನು ಇಂದು ಉರ್ದು ಭಾಷಾ ಪ್ರಚಾರ ಮಂಡಳಿ (ಎನ್​ಸಿಪಿಯುಎಲ್​) ಬಿಡುಗಡೆ ಮಾಡಲಿದೆ. ಭವಿಷ್ಯ್ ಕಾ ಭಾರತ್​ ಪುಸ್ತಕ, 2018ರಲ್ಲಿ ಮೋಹನ್ ಭಾಗವತ್​ ಅವರು ನೀಡಿದ ಉಪನ್ಯಾಸಗಳ ಮಾಲಿಕೆಯಾಗಿದ್ದು, ಭಾರತದ ಹಲವು ಭಾಷೆಗಳಿಗೆ ತರ್ಜುಮೆಗೊಂಡಿದೆ. ಉರ್ದುವಿನಲ್ಲೂ ಬಿಡುಗಡೆಯಾಗಿದ್ದು ವಿಶೇಷ.

ಮೋಹನ್ ಭಾಗವತ್​ ಅವರು ಹಿಂದಿಯಲ್ಲಿ ಬರೆದಿದ್ದ ಭವಿಷ್ಯ್​ ಕಾ ಭಾರತ್​ ಪುಸ್ತಕವನ್ನು ಉರ್ದು ಭಾಷಾ ಪ್ರಚಾರ ಮಂಡಳಿ ನಿರ್ದೇಶಕ ಡಾ. ಅಕ್ವಿಲ್​ ಅಹ್ಮದ್​ ಉರ್ದು ಭಾಷೆಗೆ ತರ್ಜುಮೆ ಮಾಡಿದ್ದಾರೆ. ಮುಸ್ಲಿಮರು ಆರ್​ಎಸ್​ಎಸ್​ ಬಗ್ಗೆ ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಇಸ್ಲಾಮಿಕ್ ವಿದ್ವಾಂಸರು, ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳಿಗೆ ಆರ್​ಎಸ್​ಎಸ್ ಸಂಘಟನೆಯನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ಸಹಾಯ ಮಾಡುತ್ತದೆ ಎಂದು ಡಾ. ಅಕ್ವಿಲ್ ತಿಳಿಸಿದ್ದಾರೆ.

ಮುಸ್ಲಿಮರನ್ನು ಹೊರತುಪಡಿಸಿದ ಹಿಂದುತ್ವದ ಕಲ್ಪನೆ ಅಪರಿಪೂರ್ಣ. ಇದನ್ನೇ ಮೋಹನ್​ ಭಾಗವತ್ ಜೀ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಹಿಂದುತ್ವ ಎಂದರೆ ಹಿಂದು ಧರ್ಮವಲ್ಲ.. ಇದು ಇಡೀ ದೇಶದ ಸಂಸ್ಕೃತಿ ಎಂದು ಹೇಳಿರುವ ಡಾ. ಅಕ್ವಿಲ್, ಮುಸ್ಲಿಮರು ಈ ಪುಸ್ತಕವನ್ನು ಓದಬೇಕು. ಆರ್​ಎಸ್​ಎಸ್ ಶಾಖೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಮುಸ್ಲಿಂ ಬುದ್ಧಿಜೀವಿಗಳು ಆರ್​ಎಸ್​ಎಸ್ ಬಗ್ಗೆ ಅಪಾರ ಕುತೂಹಲ ಹೊಂದಿದ್ದಾರೆ. ಅದೇ ಕಾರಣಕ್ಕೆ ಈ ಪುಸ್ತಕವನ್ನು ಉರ್ದುವಿಗೂ ತರ್ಜುಮೆಗೊಳಿಸಲಾಗಿದೆ. ಇದರಲ್ಲಿ ಭಾರತದ ಪರಿಕಲ್ಪನೆ, ಭವಿಷ್ಯದ ಭಾರತ ನಿರ್ಮಾಣದಲ್ಲಿ ನಮ್ಮ ಪಾತ್ರ ಏನಿರಬೇಕು ಎಂಬುದನ್ನು ವಿವರಿಸಲಾಗಿದೆ ಎಂದು ಹೇಳಿದ್ದಾರೆ.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್​ ಬರೆದಿರುವ ಭವಿಷ್ಯ್ ಕಾ ಭಾರತ್​ ಪುಸ್ತಕದ ಉರ್ದು ಆವೃತ್ತಿಯ ಪುಸ್ತಕ ಬಿಡುಗಡೆಗೆ ಇಸ್ಲಾಂನ ಅನೇಕ ವಿದ್ವಾಂಸರು, ಪಂಡಿತರು, ವಿಮರ್ಶಕರಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​​​ ಅವರೂ ಕೂಡ ಹಾಜರಿರಲಿದ್ದಾರೆ ಎಂದು ಡಾ. ಅಕ್ವಿಲ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್​ಎಸ್​ಎಸ್​ ನಾಯಕ ಇಂದ್ರೇಶ್​ ಕುಮಾರ್​, ಭಾರತದ ಸದೃಢ ಭವಿಷ್ಯಕ್ಕಾಗಿ ಮುಸ್ಲಿಮರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದಲೇ ಪುಸ್ತಕವನ್ನು ಅನುವಾದ ಮಾಡಲಾಗಿದೆ. ಉರ್ದು ಭಾಷೆಗೆ ಹಿಂದುಸ್ತಾನ ಮನೆ. ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಭಾರತದ ಭವಿಷ್ಯವನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

Karnataka ByElection 2021: ಕಾಂಗ್ರೆಸ್​ಗೆ ಬೈ ಬೈ, ಬಿಜೆಪಿಗೆ ಜೈಜೈ ಎಂದ ಕಾಂಗ್ರೆಸ್​ ಮುಖಂಡ ಲಖನ್ ಜಾರಕಿಹೊಳಿ

Follow Us
Lakshmi Hegde
Lakshmi Hegde
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ