AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ಮಾತ್ರ ಬೆಳೆಯುವ ರುದ್ರಾಕ್ಷಿ ಮಣಿಗಳು ಇಲ್ಲೂ ಕಮಾಲ್ ಮಾಡಿವೆ! ಎಲ್ಲಿ?

ನೇಪಾಳದಲ್ಲಿ ಬೆಳೆಯೋ ರುದ್ರಾಕ್ಷಿ ಮಣಿಗಳು ತೆಲಂಗಾಣದಲ್ಲೂ ಬೆಳೆಯೋ ಮೂಲಕ ಅಚ್ಚರಿ ಮೂಡಿಸಿದೆ. ತೆಲಂಗಾಣದ ಮೆಡ್​ಚಲ್ ಎಂಬಲ್ಲಿ ರುದ್ರಾಕ್ಷಿ ಮಣಿಗಳು ಬೆಳೆದಿದ್ದು, ತಜ್ಞರ ಹುಬ್ಬೇರುವಂತೆ ಮಾಡಿದೆ. ನೇಪಾಳದ ಮಣ್ಣು ಹಾಗೂ ವಾತಾವರಣದಲ್ಲಿ ಮಾತ್ರ ಬೆಳೆಯೋ ರುದ್ರಾಕ್ಷಿ ಮಣಿಗಳು ದಕ್ಷಿಣ ಭಾರತದ ತೆಲಂಗಾಣ ಮಣ್ಣಲ್ಲಿ ಬೆಳೆದಿರೋ ಬಗ್ಗೆ ಎಚ್ಚರೂ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಮಾಸ್ಕ್ ವಿಚಾರಕ್ಕೆ ಡಿಶುಂ ಡಿಶುಂ..! ಮಾಸ್ಕ್ ಧರಿಸದೆ ಇರೋದನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಪೊಲೀಸರ ಮೇಲೆಯೇ ಮುಗಿಬಿದ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ […]

ನೇಪಾಳದಲ್ಲಿ ಮಾತ್ರ ಬೆಳೆಯುವ ರುದ್ರಾಕ್ಷಿ ಮಣಿಗಳು ಇಲ್ಲೂ ಕಮಾಲ್ ಮಾಡಿವೆ! ಎಲ್ಲಿ?
ಸಾಧು ಶ್ರೀನಾಥ್​
| Edited By: |

Updated on: Jun 05, 2020 | 7:07 PM

Share

ನೇಪಾಳದಲ್ಲಿ ಬೆಳೆಯೋ ರುದ್ರಾಕ್ಷಿ ಮಣಿಗಳು ತೆಲಂಗಾಣದಲ್ಲೂ ಬೆಳೆಯೋ ಮೂಲಕ ಅಚ್ಚರಿ ಮೂಡಿಸಿದೆ. ತೆಲಂಗಾಣದ ಮೆಡ್​ಚಲ್ ಎಂಬಲ್ಲಿ ರುದ್ರಾಕ್ಷಿ ಮಣಿಗಳು ಬೆಳೆದಿದ್ದು, ತಜ್ಞರ ಹುಬ್ಬೇರುವಂತೆ ಮಾಡಿದೆ. ನೇಪಾಳದ ಮಣ್ಣು ಹಾಗೂ ವಾತಾವರಣದಲ್ಲಿ ಮಾತ್ರ ಬೆಳೆಯೋ ರುದ್ರಾಕ್ಷಿ ಮಣಿಗಳು ದಕ್ಷಿಣ ಭಾರತದ ತೆಲಂಗಾಣ ಮಣ್ಣಲ್ಲಿ ಬೆಳೆದಿರೋ ಬಗ್ಗೆ ಎಚ್ಚರೂ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಮಾಸ್ಕ್ ವಿಚಾರಕ್ಕೆ ಡಿಶುಂ ಡಿಶುಂ..! ಮಾಸ್ಕ್ ಧರಿಸದೆ ಇರೋದನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಪೊಲೀಸರ ಮೇಲೆಯೇ ಮುಗಿಬಿದ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ ಇಬ್ಬರು ಪೊಲೀಸರ ಜೊತೆ ಹೊಡೆದಾಟದಲ್ಲಿ ಭಾಗಿಯಾಗಿರೋದು ದಾಖಲಾಗಿದೆ. ಪೊಲೀಸರ ಆತನನ್ನು ಎಷ್ಟೇ ನಿಯಂತ್ರಿಸಲು ಪ್ರಯತ್ನಪಟ್ಟರೂ ಆತ ಮಾತ್ರ ಖಾಕಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸ್ತಿದ್ದ. ಪೊಲೀಸರು ಮನವರಿಕೆ ಮಾಡಲು ಮುಂದಾದಾಲೂ ಅವ್ರ ಮೇಲೆಯೇ ಹಲ್ಲೆ ನಡೆಸಿದ್ದ. ಬಳಿಕ ಆತನನ್ನು ಬಂಧಿಸಲಾಯ್ತು.

ಹೇರ್ ಕಟ್ ಎಡವಟ್ಟು..! ಲಾಕ್​ಡೌನ್ ಇದ್ದರೂ ಓಪನ್ ಮಾಡಿದ್ದ ಸಲೂನ್ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಕಟಿಂಗ್ ಮಾಡಿಸಿಕೊಳ್ತಿದ್ದ ಗ್ರಾಹಕರು ಸಲೂನ್​ನಿಂದ ಹರಗೆ ಓಡಿಹೋಗಿದ್ದಾರೆ. ಆದ್ರೆ ಅದಾಗಲೇ ಕಟಿಂಗ್ ಕೂತಿದ್ದ ವ್ಯಕ್ತಿ ಮಾತ್ರ ಇನ್ನೇನು ಮಾಡೋದು ಅಂತಾ ತಬ್ಬಿಬ್ಬಾಗಿ ಕೂತಿದ್ದ. ಯಾಕಂದ್ರೆ ಆತನ ತಲೆಕೂದಲು ಅರ್ಧ ಕಟ್ ಮಾಡಲಾಗಿದ್ದು, ಪೊಲೀಸರು ರೇಡ್ ಮಾಡ್ತಿದ್ದಂತೆ ಕಟಿಂಗ್ ಮಾಡುವವನೂ ತನ್ನ ಕೈಯಲ್ಲಿದ್ದ ಕತ್ತರಿಯನ್ನು ಕೆಳಗಿಟ್ಟಿದ್ದ.

ಅಜ್ಜಿಯ ಸ್ಕೂಟರ್ ರೈಡ್ ಲಾಕ್​ಡೌನ್​ನಿಂದ ಮನೆಯಲ್ಲೇ ಉಳಿದುಕೊಂಡಿದ್ದ ಅಜ್ಜಿಯೊಬ್ಬರು ಮೊದಲ ಬಾರಿಗೆ ಹೊರಗೆ ಬಂದ ಖುಷಿಯನ್ನು ವಿಶೇಷವಾಗಿ ಹಂಚಿಕೊಂಡಿದ್ದಾರೆ. ತನ್ನ ಮೊಬಿಲಿಟಿ ಸ್ಕೂಟರ್ ಎತ್ತಿಕೊಂಡು ಹೋದ ಅಜ್ಜಿ ಸ್ಕೇಟಿಂಗ್ ಪಾರ್ಕ್​ನ ಟ್ರ್ಯಾಕ್​ನಲ್ಲಿ ರೈಡ್ ಮಾಡಿ ಎಂಜಾಯ್ ಮಾಡಿದ್ರು. ಸ್ಕಾಟ್​ಲ್ಯಾಂಡ್​ನಲ್ಲಿ ಕಳೆದ 3 ತಿಂಗಳಿಂದ ಲಾಕ್​ಡೌನ್ ಜಾರಿಮಾಡಲಾಗಿತ್ತು. ಇದೀಗ ಲಾಕ್​ಡೌನ್ ತೆರವುಗೊಳಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳ್ತಿದೆ.

ಸಂತ್ರಸ್ತರ ಕುಟುಂಬಗಳ ಕಣ್ಣೀರು ಸ್ಪೈನ್​ನಲ್ಲಿ ಕೊರೊನಾ ವೈರಸ್​ನಿಂದ ಬಲಿಯಾದವ್ರ ಕುಟುಂಬಸ್ಥರು ತಮ್ಮವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದೀಗ ಲಾಕ್​ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಯ್ತು. ಸ್ಪೈನ್​ನ ವಿವಿಧ ಚರ್ಚ್​ಳಲ್ಲಿ ಕೊರೊನಾದಿಂದ ಮೃತಪಟ್ಟವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಮುಂದುವರಿದ ಪ್ರತಿಭಟನೆ ಕೊರೊನಾ ವೈರಸ್ ಅಟ್ಟಹಾಸದ ನಡುವೆಯೂ ಅಮೆರಿಕಾದಲ್ಲಿ ಭುಗಿಲೆದ್ದ ಪ್ರತಿಭಟನೆ ಇನ್ನೂ ಮುಂದುವರಿದಿದೆ. ಅಮೆರಿಕಾದ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಪೊಲೀಸರ ಜೊತೆ ಸಂಘರ್ಷ ಮುಂದುವರಿಸಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಪೊಲೀಸ್ ಪ್ರತಿಭಟನಾಕಾರರಿಗೆ ಎಷ್ಟೇ ಮನವಿ ಮಾಡಿದ್ರೂ, ಮಿಣಕಾಲುರಿ ನಿಂತ್ರೂ ಪ್ರೊಟೆಸ್ಟ್ ಮಾತ್ರ ಮುಂದುವರಿದಿದೆ. ಈ ನಡುವೆ ಅಮೆರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ನೆಲ ನುಂಗಿದ ನೀರು..! ನಾರ್ವೆ ಕಡಲತೀರದಲ್ಲಿ ಭುಕುಸಿತ ಉಂಟಾಗಿರೋ ದೃಶ್ಯ ಡ್ರೋಣ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಬೃಹತ್ ಗಾತ್ರದ ಭೂಭಾಗ ಸಮುದ್ರದ ಒಡಲು ಸೇರಿದ್ದು, ಕಟ್ಟಡ, ಮನೆಗಳೂ ಸಮುದ್ರ ಪಾಲಾಗಿವೆ. ನಾರ್ವೆಯ ಆಲ್ಟಾ ನಗರದ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದ್ದು, ನೋಡನೋಡ್ತಿದ್ದಂತೆ ಭೂಮಿ ಸಮುದ್ರದ ನೀರಲ್ಲಿ ಮುಳುಗಿ ಮಾಯವಾಗಿತ್ತು.

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?