AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ.

ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !
ಪ್ರಧಾನಿ ಮೋದಿಯವರು ಫ್ಲೈಓವರ್​ ಮೇಲೆ ಕಾಯುತ್ತಿದ್ದ ದೃಶ್ಯ
TV9 Web
| Edited By: |

Updated on:Jan 10, 2022 | 3:03 PM

Share

ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ( PM Security Breach In Punjab)ಯವರ ಭದ್ರತೆಯಲ್ಲಿ ಲೋಪವಾದ ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​ಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೂ ಸುಪ್ರೀಂಕೋರ್ಟ್(Supreme Court)​ನ ಹಲವು ವಕೀಲರು ಈ ಅನಾಮಧೇಯ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕರೆ ಮಾಡುವವನು, ತಾನು ಯುಎಸ್​ಎಯಿಂದ ಫೋನ್​ ಮಾಡುತ್ತಿದ್ದೇನೆ. ಸಿಖ್ ಫಾರ್ ಜಸ್ಟೀಸ್​ ಸಂಘಟನೆಯ ಜನರಲ್​ ಕೌನ್ಸೆಲ್​ ಎಂದು ಹೇಳಿಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲ, ಫಿರೋಜ್​​ಪುರಕ್ಕೆ ಹೊರಟಿದ್ದ ಪ್ರಧಾನಿ ಮೋದಿಯವರನ್ನು ಹುಸ್ಸೇನಿವಾಲಾ ಫ್ಲೈಓವರ್​ ಮೇಲೆ ತಡೆದಿದ್ದರ ಹೊಣೆಯನ್ನು ಎಸ್​ಎಫ್​ಜೆ (ಸಿಖ್​ ಫಾರ್​ ಜಸ್ಟೀಸ್​) ಸಂಘಟನೆಯೇ ಹೊತ್ತುಕೊಳ್ಳುತ್ತದೆ ಎಂದೂ ಹೇಳಿದ್ದಾನೆ ಎನ್ನಲಾಗಿದೆ.

ಪಂಜಾಬ್​​ನಲ್ಲಿ ಜನವರಿ 5ರಂದು ಉಂಟಾದ ಪ್ರಧಾನಿ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್​ ಎಂಬ ಎನ್​ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದಲ್ಲದೆ, ಘಟನೆಯ ತನಿಖೆಗಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಹಾಗೇ, ಸದ್ಯ ನಡೆಯುತ್ತಿರುವ ಉಳಿದೆಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಸೂಚನೆ ನೀಡಿದೆ. ಇಂದು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯುವುದಕ್ಕೂ ಮೊದಲು ಹೀಗೆ ಅನೇಕ ಸಲ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ದಂಗೆಯ ಆರೋಪಿಗಳಿಗೆ ಇನ್ನೂ ಶಿಕ್ಷೆ ಕೊಡಲು ಸಾಧ್ಯವಾಗದ ಸುಪ್ರೀಂಕೋರ್ಟ್​ ಈಗ ಭದ್ರತಾ ಲೋಪದ ಬಗ್ಗೆಯೂ ಯಾವುದೇ ವಿಚಾರಣೆ ನಡೆಸಬಾರದು ಎಂದು ಕರೆ ಮಾಡಿದ್ದಾತ ಹೇಳಿದ್ದಾನೆ.

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ. ಮೋದಿಯವರ ಪ್ರಯಾಣದ ಮಾರ್ಗವನ್ನು ನಿರ್ಬಂಧಿಸಿದ್ದರ ಹೊಣೆಯನ್ನು ನಾವು ಹೊರುತ್ತೇವೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ನಡೆಸಬಾರದು. ಪ್ರಕರಣದ ವಿಚಾರಣೆಗೂ ಮೊದಲು ಸುಪ್ರೀಂಕೋರ್ಟ್​ ಜಡ್ಜ್​​ಗಳು 1984 ದಂಗೆಯನ್ನು ನೆನಪಿಸಿಕೊಳ್ಳಲಿ ಎಂಬ ಮಾತುಗಳು ಕೇಳುತ್ತವೆ ಎಂದು ಸುಪ್ರೀಂಕೋರ್ಟ್​​ನ ವಕೀಲರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಂ ಭದ್ರತಾ ಲೋಪ: ನಡೆಸಲಾಗುತ್ತಿರುವ ತನಿಖೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂಕೋರ್ಟ್​ ಆದೇಶ, ಕೇಂದ್ರದ ವಿರುದ್ಧ ಅಸಮಾಧಾನ

Published On - 3:02 pm, Mon, 10 January 22

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?