AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ.

ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !
ಪ್ರಧಾನಿ ಮೋದಿಯವರು ಫ್ಲೈಓವರ್​ ಮೇಲೆ ಕಾಯುತ್ತಿದ್ದ ದೃಶ್ಯ
TV9 Web
| Updated By: Lakshmi Hegde

Updated on:Jan 10, 2022 | 3:03 PM

Share

ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ( PM Security Breach In Punjab)ಯವರ ಭದ್ರತೆಯಲ್ಲಿ ಲೋಪವಾದ ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​ಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೂ ಸುಪ್ರೀಂಕೋರ್ಟ್(Supreme Court)​ನ ಹಲವು ವಕೀಲರು ಈ ಅನಾಮಧೇಯ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕರೆ ಮಾಡುವವನು, ತಾನು ಯುಎಸ್​ಎಯಿಂದ ಫೋನ್​ ಮಾಡುತ್ತಿದ್ದೇನೆ. ಸಿಖ್ ಫಾರ್ ಜಸ್ಟೀಸ್​ ಸಂಘಟನೆಯ ಜನರಲ್​ ಕೌನ್ಸೆಲ್​ ಎಂದು ಹೇಳಿಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲ, ಫಿರೋಜ್​​ಪುರಕ್ಕೆ ಹೊರಟಿದ್ದ ಪ್ರಧಾನಿ ಮೋದಿಯವರನ್ನು ಹುಸ್ಸೇನಿವಾಲಾ ಫ್ಲೈಓವರ್​ ಮೇಲೆ ತಡೆದಿದ್ದರ ಹೊಣೆಯನ್ನು ಎಸ್​ಎಫ್​ಜೆ (ಸಿಖ್​ ಫಾರ್​ ಜಸ್ಟೀಸ್​) ಸಂಘಟನೆಯೇ ಹೊತ್ತುಕೊಳ್ಳುತ್ತದೆ ಎಂದೂ ಹೇಳಿದ್ದಾನೆ ಎನ್ನಲಾಗಿದೆ.

ಪಂಜಾಬ್​​ನಲ್ಲಿ ಜನವರಿ 5ರಂದು ಉಂಟಾದ ಪ್ರಧಾನಿ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್​ ಎಂಬ ಎನ್​ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದಲ್ಲದೆ, ಘಟನೆಯ ತನಿಖೆಗಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಹಾಗೇ, ಸದ್ಯ ನಡೆಯುತ್ತಿರುವ ಉಳಿದೆಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಸೂಚನೆ ನೀಡಿದೆ. ಇಂದು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯುವುದಕ್ಕೂ ಮೊದಲು ಹೀಗೆ ಅನೇಕ ಸಲ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ದಂಗೆಯ ಆರೋಪಿಗಳಿಗೆ ಇನ್ನೂ ಶಿಕ್ಷೆ ಕೊಡಲು ಸಾಧ್ಯವಾಗದ ಸುಪ್ರೀಂಕೋರ್ಟ್​ ಈಗ ಭದ್ರತಾ ಲೋಪದ ಬಗ್ಗೆಯೂ ಯಾವುದೇ ವಿಚಾರಣೆ ನಡೆಸಬಾರದು ಎಂದು ಕರೆ ಮಾಡಿದ್ದಾತ ಹೇಳಿದ್ದಾನೆ.

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ. ಮೋದಿಯವರ ಪ್ರಯಾಣದ ಮಾರ್ಗವನ್ನು ನಿರ್ಬಂಧಿಸಿದ್ದರ ಹೊಣೆಯನ್ನು ನಾವು ಹೊರುತ್ತೇವೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ನಡೆಸಬಾರದು. ಪ್ರಕರಣದ ವಿಚಾರಣೆಗೂ ಮೊದಲು ಸುಪ್ರೀಂಕೋರ್ಟ್​ ಜಡ್ಜ್​​ಗಳು 1984 ದಂಗೆಯನ್ನು ನೆನಪಿಸಿಕೊಳ್ಳಲಿ ಎಂಬ ಮಾತುಗಳು ಕೇಳುತ್ತವೆ ಎಂದು ಸುಪ್ರೀಂಕೋರ್ಟ್​​ನ ವಕೀಲರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಂ ಭದ್ರತಾ ಲೋಪ: ನಡೆಸಲಾಗುತ್ತಿರುವ ತನಿಖೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂಕೋರ್ಟ್​ ಆದೇಶ, ಕೇಂದ್ರದ ವಿರುದ್ಧ ಅಸಮಾಧಾನ

Published On - 3:02 pm, Mon, 10 January 22

ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ