AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!

10ನೇ ತರಗತಿಯಲ್ಲಿ ಶೇ. 92 ಅಂಕಗಳನ್ನು ಗಳಿಸಿದ್ದ ಬಾಲಕ ವಿಚಿತ್ರವಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ತಾಯಿಯನ್ನು ಕನಸಿನಲ್ಲಿ ಕಂಡ ಮಹಾರಾಷ್ಟ್ರದ ಬಾಲಕ ಆಕೆಯ ಬಳಿ ಹೋಗಲೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಧಿಕಾರಿಗಳು ಸೂಸೈಡ್ ನೋಟ್ ಅನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಬಾಲಕ ತನ್ನ ತಾಯಿಯನ್ನು ಕನಸಿನಲ್ಲಿ ಕಂಡಿರುವುದಾಗಿ ಉಲ್ಲೇಖಿಸಿದ್ದಾನೆ. ಆ ಬಾಲಕ ತನ್ನ ಅಜ್ಜಿಯನ್ನು ತನ್ನ ತಂದೆಯ ಮನೆಗೆ ಕಳುಹಿಸದಂತೆ ಚಿಕ್ಕಪ್ಪನಿಗೆ ಮನವಿ ಮಾಡಿದ್ದಾನೆ.

ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!
Shivsharan Bhutali Talkoti
ಸುಷ್ಮಾ ಚಕ್ರೆ
|

Updated on:Jul 25, 2025 | 9:17 PM

Share

ಸೋಲಾಪುರ, ಜುಲೈ 25: ಆತ 10ನೇ ತರಗತಿಯಲ್ಲಿ ಶೇ. 92ರಷ್ಟು ಅಂಕ ಪಡೆದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. ಕೆಲವು ತಿಂಗಳ ಹಿಂದಷ್ಟೇ ಪಿಯುಸಿಗೆ ಸೇರಿದ್ದ. ನೀಟ್ (NEET) ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದ. ಆದರೆ, ಆತನ ಭವಿಷ್ಯ ಅರಳುವ ಮೊದಲೇ ಕಮರಿಹೋಗಿದೆ. ಕನಸಿನಲ್ಲಿ ಬಂದು ಅಮ್ಮ ಕರೆದಳು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ (Crime News) ಮಾಡಿಕೊಂಡು ತಾಯಿಯ ಬಳಿ ಹೋಗಿದ್ದಾನೆ! ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ದಾರುಣ ಘಟನೆ ನಡೆದಿದೆ.

ತಾಯಿಯ ಇತ್ತೀಚಿನ ಸಾವಿನಿಂದ ಮನನೊಂದ 16 ವರ್ಷದ ಬಾಲಕ ಶಿವಶರಣ್ ಇಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಡುಗನ ತಾಯಿ 3 ತಿಂಗಳ ಹಿಂದೆ ಕಾಮಾಲೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವನ್ನಪ್ಪಿದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ಆ ಹುಡುಗ ತನ್ನ ತಾಯಿಯ ಕನಸು ಕಂಡಿದ್ದಾಗಿ ಬರೆದಿದ್ದಾನೆ. ನಾನು ಅಮ್ಮನ ಬಳಿ ಬರಬೇಕೆಂದು ಅಮ್ಮ ನನ್ನನ್ನು ಕರೆದರು. ಹೀಗಾಗಿ, ಅವಳ ಬಳಿ ಹೋಗುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: Shocking News: ಲೈಂಗಿಕವಾಗಿ ತೃಪ್ತಿ ಪಡಿಸಲಿಲ್ಲವೆಂದು ಗಂಡನನ್ನು ಕೊಂದ ಹೆಂಡತಿ!

‘ನಾನು ಶಿವಶರಣ. ನನಗೆ ಬದುಕಲು ಇಷ್ಟವಿಲ್ಲವಾದ್ದರಿಂದ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗಲೇ ನಾನು ಹೋಗಬೇಕಿತ್ತು, ಆದರೆ ನಾನು ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖ ನೋಡುತ್ತಾ ಜೀವಂತವಾಗಿದ್ದೆ. ನನ್ನ ಸಾವಿಗೆ ಕಾರಣ ನಿನ್ನೆ ನನ್ನ ತಾಯಿ ನನ್ನ ಕನಸಿನಲ್ಲಿ ಬಂದರು. ನಾನು ಯಾಕೆ ತುಂಬಾ ಬೇಸರವಾಗಿದ್ದೇನೆ ಎಂದು ಕೇಳಿದ ಅಮ್ಮ ನನ್ನನ್ನು ಅವಳ ಬಳಿಗೆ ಬರಲು ಹೇಳಿದ್ದರು. ಹಾಗಾಗಿ ನಾನು ಸಾಯುವ ಬಗ್ಗೆ ಯೋಚಿಸಿದೆ. ನನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು” ಎಂದು ಸೂಸೈಡ್ ನೋಟ್​​ನಲ್ಲಿ ಆತ ಬರೆದಿದ್ದಾನೆ.

“ಚಿಕ್ಕಪ್ಪ, ನಾನು ಸಾಯುತ್ತಿದ್ದೇನೆ. ನಾನು ಹೋದ ನಂತರ, ನನ್ನ ತಂಗಿಯನ್ನು ಸಂತೋಷವಾಗಿಡಿ. ಚಿಕ್ಕಪ್ಪ, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಅಜ್ಜಿಯನ್ನು ಅಪ್ಪನ ಬಳಿಗೆ ಕಳುಹಿಸಬೇಡಿ. ಎಲ್ಲರೂ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನನ್ನ ಹೆತ್ತವರಿಗಿಂತ ನೀವು ನನಗಾಗಿ ಹೆಚ್ಚಿನ ಪ್ರೀತಿ ತೋರಿಸಿದ್ದೀರಿ” ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: ಆನ್‌ಲೈನ್​ನಲ್ಲಿ ಲುಡೋ ಆಡಿ 5 ಲಕ್ಷ ಕಳೆದುಕೊಂಡು ಯುವಕ ಆತ್ಮಹತ್ಯೆ; ಹೈದರಾಬಾದ್​​​ನಲ್ಲಿ ಶಾಕಿಂಗ್ ಘಟನೆ

ಶಿವಶರಣ್ ತಮ್ಮ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು 10ನೇ ತರಗತಿಯಲ್ಲಿ ಶೇಕಡಾ 92 ರಷ್ಟು ಅಂಕಗಳನ್ನು ಗಳಿಸಿದ್ದ ಮತ್ತು ವೈದ್ಯನಾಗಲು ಬಯಸಿದ್ದ. ಸೋಲಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:16 pm, Fri, 25 July 25

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ