ಶರ್ಟ್​ನೊಳಗೆ 14 ಲಕ್ಷ ರೂ. ಬಚ್ಚಿಟ್ಟುಕೊಂಡು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸೆರೆ

ಶರ್ಟ್​ನೊಳಗೆ 14 ಲಕ್ಷ ರೂ. ಬಚ್ಚಿಟ್ಟುಕೊಂಡು ಬಸ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ತಮಿಳುನಾಡಿನಲ್ಲಿ ನಡೆದ ಘಟನೆಯಾಗಿದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಒಬ್ಬ ವ್ಯಕ್ತಿ 50,000 ಕ್ಕಿಂತ ಹೆಚ್ಚು ಹಣವನ್ನು ಬಹಿರಂಗವಾಗಿ ತೆಗೆದುಕೊಂಡು ಹೋಗುವಂತಿಲ್ಲ, ಅದಕ್ಕಿಂತ ಹೆಚ್ಚಿನ ಹಣವಿದ್ದರೆ ಅಗತ್ಯ ದಾಖಲೆಗಳು ಕೂಡ ಇರಬೇಕು.

ಶರ್ಟ್​ನೊಳಗೆ 14 ಲಕ್ಷ ರೂ. ಬಚ್ಚಿಟ್ಟುಕೊಂಡು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸೆರೆ
Image Credit source: India Today

Updated on: Apr 23, 2024 | 8:05 AM

ಲೋಕಸಭೆ ಚುನಾವಣೆ(Lok Sabha Election)ಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ಬಟ್ಟೆಯೊಳಗೆ 14 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದುದನ್ನು ಅಧಿಕಾರಿಗಳು ಸೋಮವಾರ ಹಿಡಿದಿದ್ದಾರೆ. ವಿನೋ ಎಂಬ ವ್ಯಕ್ತಿಯನ್ನು ಕೇರಳ-ತಮಿಳುನಾಡು ಗಡಿಯಲ್ಲಿರುವ ವಾಳಯಾರ್ ಚೆಕ್ ಪೋಸ್ಟ್‌ನಲ್ಲಿ ಬಸ್‌ನೊಳಗಿಂದ ಅಧಿಕಾರಿಗಳು ಆತನ ಬಟ್ಟೆಯ ಬಗ್ಗೆ ಅನುಮಾನಗೊಂಡು ತೆಗೆಸಿ ನೋಡಿದಾಗ ಸಿಕ್ಕಿಬಿದ್ದಿದ್ದಾರೆ.

ನಂತರ ಆ ವ್ಯಕ್ತಿಯನ್ನು ಬಸ್‌ನಿಂದ ಕೆಳಗಿಳಿಸಲಾಯಿತು, ಮತ್ತು ತಪಾಸಣೆಯ ಸಮಯದಲ್ಲಿ, ಅವನು ತನ್ನ ಅಂಗಿಯೊಳಗಿನ ಲೈನಿಂಗ್‌ನಿಂದ ನಗದು ಕಟ್ಟುಗಳನ್ನು ಹೊರತೆಗೆದಿದ್ದಾರೆ. ಮಾದರಿ ನೀತಿ ಸಂಹಿತೆಯ ಪ್ರಕಾರ, ಒಬ್ಬ ವ್ಯಕ್ತಿಗೆ ಕೇವಲ 50,000 ರೂ.ಗಳನ್ನು ಸಾಗಿಸಲು ಅನುಮತಿಸಲಾಗಿದೆ ಮತ್ತು ಅನುಮತಿಸಲಾದ ಮೊತ್ತಕ್ಕಿಂತ ಹೆಚ್ಚಿನ ಯಾವುದೇ ಮುಖಬೆಲೆಯನ್ನು ಸಾಗಿಸಲು ಅಗತ್ಯ ದಾಖಲೆಗಳ ಅಗತ್ಯವಿದೆ.

ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೇರಳ ತನ್ನ ಲೋಕಸಭಾ ಸಂಸದರನ್ನು ಆಯ್ಕೆ ಮಾಡಲು ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಮತದಾನಕ್ಕೂ ಮುನ್ನ ಕೇರಳ-ತಮಿಳುನಾಡು ಗಡಿಯಲ್ಲಿ ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ: ಗನ್ ಹೊಂದಿರುವ ನಾಗರಿಕರು ಆಯಾ ಠಾಣೆಗಳಿಗೆ ಜಮೆಗೆ ಸೂಚನೆ

ತಮಿಳುನಾಡಿನ ಸುಮಾರು 6.23 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 950 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 21 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದ್ದು. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು ವಿವಿಧ ರಾಜ್ಯಗಳ 102 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 63.7ರಷ್ಟು ಮತದಾನವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ