Elections
ಚುನಾವಣೆ ಎನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ. ಇದರಲ್ಲಿ, ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ, ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಚುನಾವಣೆ ಅಂದರೆ ಕೇವಲ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆ ಮಾತ್ರ ಅಲ್ಲ. ಖಾಸಗಿ ಮತ್ತು ವ್ಯಾಪಾರದ ಸಂಘಟನೆಗಳಲ್ಲಿ, ಕ್ಲಬ್ಗಳಿಂದ ಹಿಡಿದು ಸ್ವಯಂ ಸೇವಾ ಸಂಘಟನೆ ಮತ್ತು ಪಾಲಿಕೆಗಳಲ್ಲೂ ಸಹ ಈ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ.
ಪ್ರಾಚೀನ ರೋಮ್ನಲ್ಲಿ ಮತ್ತು ಮಧ್ಯಕಾಲೀನ ಯುಗದ ಪೂರ್ತಿ ಹೋಲಿ ರೋಮನ್ ಎಂಪರರ್ ಹಾಗು ದಿ ಪೋಪ್ ಅವರಂಥ ಆಳುವವರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ಬಳಸಲಾಗುತ್ತಿತ್ತು. 17ನೇ ಶತಮಾನದ ಆರಂಭದವರೆಗೂ, ಉತ್ತರ ಅಮೇರಿಕಾದಲ್ಲಿ ಮತ್ತು ಯುರೋಪಿ ನಲ್ಲಿ ಪ್ರತಿನಿಧಿ ಸರ್ಕಾರದ ಆಲೋಚನೆ ಆಗುವವರೆಗೂ ಸರಕಾರಿ ಅಧಿಕಾರಿಗಳನ್ನೊಳಗೊಂಡ ಇಂದಿನಂತಹ ಆಧುನಿಕ ಸಾರ್ವಜನಿಕ ಚುನಾವಣೆಗಳ ಆಲೋಚನೆ ಮೂಡಿರಲಿಲ್ಲ. ಅನೇಕ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗಳಲ್ಲಿ,ಸಾರ್ವಜನಿಕ ಆಡಳಿತದ ಹಲವು ಹಂತಗಳಿಗೆ ಅಥವಾ ಭೌಗೋಳಿಕ ವ್ಯಾಪ್ತಿಗೆ ತಾಳೆಯಾಗುವಂತೆ ವಿವಿಧ ಶೈಲಿಯ ಚುನಾವಣೆಗಳಿವೆ. ಕೆಲವು ಸಾಮಾನ್ಯ ಶೈಲಿಯ ಚುನಾವಣೆ ಎಂದರೆ ಅಧ್ಯಕ್ಷೀಯ ಚುನಾವಣೆ, ಸಾರ್ವತ್ರಿಕ ಚುನಾವಣೆ, ಪ್ರಾಥಮಿಕ ಚುನಾವಣೆ, ಮರು ಚುನಾವಣೆ, ಸ್ಥಳೀಯ ಚುನಾವಣೆ.
Bihar Election 2025 Results: ಮತ ಎಣಿಕೆ ನಿಧಾನಗೊಳಿಸುವ ಹುನ್ನಾರ ನಡೆಯುತ್ತಿದೆ: ತೇಜಸ್ವಿ ಗಂಭೀರ ಆರೋಪ
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ(Bihar Assembly Election Results)ಕ್ಕೆ ಕ್ಷಣಗಣನೆ ಇದೆ. ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತ ಎಣಿಕೆ ನಿಧಾನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಬಾರಿ ಬಿಹಾರ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತದಾನವಾಗಿದೆ ಎಂದು ಅವರು ಹೇಳಿದರು. ಸುಮಾರು 8 ಮಿಲಿಯನ್ ಹೆಚ್ಚಿನ ಮತಗಳು ಚಲಾವಣೆಯಾಗಿವೆ,
- Nayana Rajeev
- Updated on: Nov 14, 2025
- 7:46 am
Bihar Election Exit Poll Results 2025: ಬಿಹಾರದಲ್ಲಿ ಮತ್ತೊಮ್ಮೆ ಎನ್ಡಿಎಗೆ ಗೆಲುವಿನ ಮಾಲೆ; ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಇಲ್ಲಿದೆ
Bihar Elections 2025 Exit Poll Result: ಬಿಹಾರದಲ್ಲಿ ಇಂದು ಎರಡನೇ ಹಂತದ ಮತದಾನ ಮುಗಿದಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಇದೀಗ ವಿವಿಧ ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷಗಳು ಹೊರಬಿದ್ದಿದ್ದು, ಇದರ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿಯೂ ಭಾರೀ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗೇನಾದರೂ ಆದರೆ ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
- Sushma Chakre
- Updated on: Nov 11, 2025
- 7:17 pm
ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; ಶೇ. 64.46ರಷ್ಟು ಮತದಾನ ದಾಖಲು
ಬಿಹಾರ ವಿಧಾನಸಭಾ ಚುನಾವಣೆ ಇಂದಿನಿಂದ ಆರಂಭವಾಗಿದ್ದು, ಇಂದು ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇಂದಿನ ಮತದಾನದಲ್ಲಿ ಮಿನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 73.29ರಷ್ಟು ಮತದಾನ ದಾಖಲಾಗಿದೆ. ಹಾಗೇ, ಬಿಹಾರದ ಕುಮ್ರಾರ್ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ. 39.52ರಷ್ಟು ಮತದಾನ ದಾಖಲಾಗಿದೆ. ಮಹಾಘಟಬಂಧನ್ ಮತ್ತು ಎನ್ಡಿಎ ನಡುವೆ ಬಿಹಾರದಲ್ಲಿ ನೇರ ಹಣಾಹಣಿ ಏರ್ಪಟ್ಟಿತ್ತು.
- Sushma Chakre
- Updated on: Nov 6, 2025
- 8:43 pm
ರಾಹುಲ್, ಲಾಲು ಯಾದವ್ ಇಬ್ಬರಿಗೂ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ ಸವಾಲು
ಲಾಲು ಪ್ರಸಾದ್ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು. "ಬಾಬರ್ ರಾಮ ಮಂದಿರವನ್ನು ಕೆಡವಿದರು, ಮೊಘಲರು ಅದರ ಪುನರ್ನಿರ್ಮಾಣವನ್ನು ನಿಲ್ಲಿಸಿದರು, ಬ್ರಿಟಿಷರು ಅದನ್ನು ವಿಳಂಬ ಮಾಡಿದರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅದನ್ನು ತಡೆಯಿತು. ನಂತರ ಲಾಲು ಪ್ರಸಾದ್ ಯಾದವ್ ಕೂಡ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದರು. ಆದರೆ, 2019ರಲ್ಲಿ ನೀವು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮತ್ತೆ ಆಯ್ಕೆ ಮಾಡಿದ್ದೀರಿ. ಅವರು ರಾಮ ಮಂದಿರವನ್ನು ನಿರ್ಮಿಸುವ ಮೂಲಕ ದೀರ್ಘಕಾಲದ ಭರವಸೆಯನ್ನು ಈಡೇರಿಸಿದ್ದಾರೆ. ಈಗ, ತಾಯಿ ಸೀತಾ ಮಾತೆಗೆ ಅರ್ಪಿತವಾದ ಭವ್ಯ ದೇವಾಲಯವನ್ನು ನಿರ್ಮಿಸಲು ಸಜ್ಜಾಗಿದ್ದೇವೆ. ಇದನ್ನು ತಪ್ಪಿಸಲು ರಾಹುಲ್ ಗಾಂಧಿ ಅಥವಾ ಲಾಲು ಪ್ರಸಾದ್ ಯಾದವ್ ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
- Sushma Chakre
- Updated on: Nov 6, 2025
- 7:59 pm
Bihar Assembly Elections: ಚುನಾವಣಾ ಅಖಾಡಕ್ಕೆ ಬಿಹಾರ ಸಜ್ಜು; ಇಂದು ಮೊದಲ ಹಂತದ ಮತದಾನ
ಇಂದು (ನವೆಂಬರ್ 6) ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿರುಸಿನ ಪ್ರಚಾರದ ಹೋರಾಟದ ನಂತರ ಬಿಹಾರ ಮೊದಲ ಹಂತದ ಮತದಾನಕ್ಕೆ ಸಿದ್ಧವಾಗಿದೆ. ನವೆಂಬರ್ 11ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಎನ್ಡಿಎಯ ಬಿಜೆಪಿ ಮತ್ತು ಜೆಡಿಯು, ಮಹಾಘಟಬಂಧನ್ನ ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳು ಸಾಲು-ಸಾಲು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿವೆ.
- Sushma Chakre
- Updated on: Nov 6, 2025
- 6:56 am
ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ; ರಾಹುಲ್ ಗಾಂಧಿ ಹೊಸ ಬಾಂಬ್
ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹರಿಯಾಣದಲ್ಲಿ ಭಾರೀ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಒಟ್ಟು 2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳು ಕಳವಾಗಿವೆ ಎಂದು ಅವರು ಆರೋಪಿಸಿದ್ದಾರೆ.
- Sushma Chakre
- Updated on: Nov 5, 2025
- 4:41 pm
ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಪರಾಜಿತ ಅಭ್ಯರ್ಥಿಯಿಂದ ಚುನಾವಣೆ ಆಯೋಗಕ್ಕೆ ಮಹತ್ವದ ಪತ್ರ
ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆಗೆ ಸುಪ್ರೀಂಕೋರ್ಟ್ ಸಹ ಸೂಚಿಸಿದೆ. ಇದರ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ, ದೂರುದಾರ ಮಂಜುನಾಥ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳ ಅಕ್ರಮವಾಗಿ ವಶಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈಗಾಗಲೇ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮರು ಮತ ಎಣಿಕೆ ಗೆ ಆದೇಶ ನೀಡಿದೆ. ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ(ಪ್ರೊಸಿಡಿಂಗ್ಸ್) ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಾಮಾಗ್ರಿಗಳನ್ನು ಮಹಜರು ಮಾಡಬೇಕು. ಬಳಿಕ ಕೋಲಾರದ ಸ್ಟ್ರಾಂಗ್ ರೂಂ ನಲ್ಲಿಡಬೇಕು.
- Rajendra Simha BL
- Updated on: Nov 3, 2025
- 3:08 pm
ನಮಗೆ ಜಂಗಲ್ರಾಜ್ ಬೇಡ ಮಂಗಲ್ ರಾಜ್ ಬೇಕು; ಬಿಹಾರದ ಮತದಾರರು ಹೇಳೋದೇನು?
ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಾಯಕರು ಬಿರುಸಿನಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ (ಬುಧವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ನಡುವೆ ಬಿಹಾರದ ಮತದಾರರೊಬ್ಬರು ಮಾತನಾಡಿರುವ ವಿಡಿಯೋ ಸದ್ದು ಮಾಡುತ್ತಿದೆ. ನಮಗೆ ಜಂಗಲ್ ರಾಜ್ ಬೇಡ, ನಮಗೆ ಮಂಗಲ್ರಾಜ್ ಬೇಕು. ಮಂಗಲ್ ರಾಜ್ ನೀಡಲು ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರಿಂದ ಮಾತ್ರ ಸಾಧ್ಯ. ಆರ್ಜೆಡಿಯ ಜಂಗಲ್ರಾಜ್ನಿಂದ ನಾವು ಬೇಸತ್ತಿದ್ದೇವೆ. ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಬಗ್ಗೆ ಗೊಂದಲವೇ ಇಲ್ಲ. ಈ ಬಾರಿ ಮತ್ತೊಮ್ಮೆ ನಿತೀಶ್ ಕುಮಾರ್ ಸರ್ಕಾರ ರಚಿಸುವುದು ಖಚಿತ. ಅದರಲ್ಲಿ ನಮಗೆ ಯಾವುದೇ ಅನುಮಾನವಿಲ್ಲ ಎಂದು ಮತದಾರರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
- Sushma Chakre
- Updated on: Oct 30, 2025
- 2:55 pm
Bihar Elections: ಉಚಿತ ವಿದ್ಯುತ್ನಿಂದ ಸರ್ಕಾರಿ ಉದ್ಯೋಗದವರೆಗೆ; ಬಿಹಾರ ಚುನಾವಣೆಗೆ ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆ
ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಬಿಹಾರದ ಮಹಾಘಟಬಂಧನ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಮಹಾಘಟಬಂಧನ್ ಸಿಎಂ ಅಭ್ಯರ್ಥಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬಿಹಾರ ಚುನಾವಣೆಯ ಪ್ರಣಾಳಿಕೆ ಬಿಡುಗಡೆಯಾದ ನಂತರ ಬಿಹಾರವನ್ನು ಹೊಸ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
- Sushma Chakre
- Updated on: Oct 28, 2025
- 6:06 pm
2 ರಾಜ್ಯಗಳಲ್ಲಿ ಮತದಾರರಾಗಿ ನೋಂದಣಿ; ಪ್ರಶಾಂತ್ ಕಿಶೋರ್ಗೆ ಚುನಾವಣಾ ಆಯೋಗದಿಂದ ನೋಟಿಸ್
ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡರಲ್ಲೂ ಮತದಾರರಾಗಿ ಸೇರ್ಪಡೆಗೊಂಡಿದ್ದಕ್ಕಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಎರಡು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, 3 ದಿನಗಳಲ್ಲಿ ಕಾರಣಗಳನ್ನು ವಿವರಿಸಲು ಸೂಚಿಸಲಾಗಿದೆ.
- Sushma Chakre
- Updated on: Oct 28, 2025
- 5:09 pm