ಆಂಧ್ರದಲ್ಲಿ ಟಿಡಿಪಿ ವಿರುದ್ಧ ವೈಎಸ್‌ಆರ್‌ಸಿಪಿ ‘ಕಸ ಜಗಳ’: ಕಡಪ ಮೇಯರ್ ಕಚೇರಿ ಹೊರಗೆ ಕಸ ಸುರಿದು ಪ್ರತಿಭಟನೆ

ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಚಿನ್ನಾ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದರು. ಶಾಸಕಿ ಮೇಧಾವಿ ರೆಡ್ಡಿ ಸೇರಿದಂತೆ ಟಿಡಿಪಿ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿದ್ದರಿಂದ ವಿರೋಧ ಪಕ್ಷದಿಂದ ಪ್ರತೀಕಾರ ತೀರವಾಯಿತು. ಕಳೆದ ಕೆಲ ದಿನಗಳಿಂದ ಕಸದ ತೆರಿಗೆ ವಿಚಾರವಾಗಿ ರೆಡ್ಡಿ ಹಾಗೂ ಸುರೇಶ್ ಬಾಬು ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

ಆಂಧ್ರದಲ್ಲಿ ಟಿಡಿಪಿ ವಿರುದ್ಧ ವೈಎಸ್‌ಆರ್‌ಸಿಪಿ ಕಸ ಜಗಳ: ಕಡಪ ಮೇಯರ್ ಕಚೇರಿ ಹೊರಗೆ ಕಸ ಸುರಿದು ಪ್ರತಿಭಟನೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ

Updated on: Aug 27, 2024 | 7:30 PM

ಹೈದರಾಬಾದ್ ಆಗಸ್ಟ್ 27: ರಾಜ್ಯದಲ್ಲಿ ಹೊಸ ‘ಕಸ ತೆರಿಗೆ’ (garbage tax) ನಿಯಮದ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷ (TDP ) ಮತ್ತು ಪ್ರತಿಪಕ್ಷ ವೈಎಸ್‌ಆರ್‌ಸಿಪಿ (YSRCP)ನಡುವೆ ರಾಜಕೀಯ ಜಟಾಪಟಿ ಭುಗಿಲೆದ್ದಿದೆ. ವೈಎಸ್‌ಆರ್‌ಸಿಪಿ ಮೇಯರ್ ಸುರೇಶ್ ಬಾಬು ಅವರ ಅಧಿಕೃತ ನಿವಾಸದ ಹೊರಗೆ ಆಡಳಿತಾರೂಢ ಟಿಡಿಪಿಯ ನಿವಾಸಿಗಳು ಮತ್ತು ಕಾರ್ಯಕರ್ತರು ಕಸದ ಚೀಲಗಳನ್ನು ರಾಶಿ ಹಾಕಿದ ನಂತರ ಎರಡು ಪಕ್ಷಗಳ ನಡುವಿನ ‘ಕಸ ಜಗಳ’ ತೀವ್ರಗೊಂಡಿತು.

ಕಸದ ತೆರಿಗೆ ಪಾವತಿಸಿದರೆ ಮಾತ್ರ ಕಸ ಸಂಗ್ರಹಿಸಲಾಗುವುದು ಎಂದು ಪೌರಾಯುಕ್ತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ. ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕಿ ಮೇಧವಿ ರೆಡ್ಡಿ, ಎಲ್ಲಾ ನಿವಾಸಿಗಳು ತೆರಿಗೆ ಪಾವತಿಸದಂತೆ ಒತ್ತಾಯಿಸಿದರು. ಅಧಿಕಾರಿಗಳು ಕಸ ಸಂಗ್ರಹಿಸಲು ನಿರಾಕರಿಸಿದಾಗ ನಿವಾಸಿಗಳು ಮತ್ತು ಟಿಡಿಪಿ ಕಾರ್ಯಕರ್ತರು ಅಂತಿಮವಾಗಿ ಮೇಯರ್ ಅವರ ಕಡಪ ನಿವಾಸದ ಹೊರಗೆ ಕಸದ ಚೀಲಗಳನ್ನು ಎಸೆದಿದ್ದಾರೆ. ಕೊನೆಗೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಆದಾಗ್ಯೂ, ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಚಿನ್ನಾ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದರು. ಶಾಸಕಿ ಮೇಧಾವಿ ರೆಡ್ಡಿ ಸೇರಿದಂತೆ ಟಿಡಿಪಿ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿದ್ದರಿಂದ ವಿರೋಧ ಪಕ್ಷದಿಂದ ಪ್ರತೀಕಾರ ತೀರವಾಯಿತು. ಕಳೆದ ಕೆಲ ದಿನಗಳಿಂದ ಕಸದ ತೆರಿಗೆ ವಿಚಾರವಾಗಿ ರೆಡ್ಡಿ ಹಾಗೂ ಸುರೇಶ್ ಬಾಬು ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಕಡಪದಾದ್ಯಂತ ಕಸದ ರಾಶಿಗೆ ಪರಸ್ಪರ ಪಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಪತ್ರಿಕಾಗೋಷ್ಠಿಯಲ್ಲಿ ಟಿಡಿಪಿ ನಾಯಕ, ಕಸ ಸಂಗ್ರಹಣೆಯ ವಿಷಯದಲ್ಲಿ ವೈಎಸ್‌ಆರ್‌ಸಿಪಿ “ಕೊಳಕು ರಾಜಕೀಯ” ದಲ್ಲಿ ತೊಡಗಿದೆ ಎಂದು ಆರೋಪಿಸಿದರು, ಇದು ನಿವಾಸಿಗಳಿಗೆ ತೀವ್ರ ಅನಾನುಕೂಲತೆಗೆ ಕಾರಣವಾಗುತ್ತದೆ. ತನಗೆ ಮತ್ತು ಆಡಳಿತಾರೂಢ ಟಿಡಿಪಿಗೆ ಮಾನಹಾನಿ ಮಾಡಲು ಸುರೇಶ್ ಬಾಬು ಕಸ ಸಂಗ್ರಹಿಸಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು. ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನಾಕಾರರು ಬಾಬು ಅವರ ಮನೆ ಬಾಗಿಲಿಗೆ ಕಸ ಸುರಿಯಲು ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಟಿಡಿಪಿ ಶಾಸಕ ನೀಡಿದ ಬೆದರಿಕೆಗೆ ಮೇಯರ್ ಸುರೇಶ್ ಬಾಬು ತ್ವರಿತವಾಗಿ ಪ್ರತಿಕ್ರಿಯಿಸಿದರು, ರೆಡ್ಡಿ ಮತ್ತು ಅವರ ಪಕ್ಷದ ಮೇಲೆ ಹಲವಾರು ಆರೋಪಗಳನ್ನು ಮಾಡಿದರು, ಇದು ಟಿಡಿಪಿ ಕಾರ್ಯಕರ್ತರು ಮತ್ತು ಅನುಯಾಯಿಗಳನ್ನು ಕೆರಳಿಸಿತು. ಮಂಗಳವಾರ ಬೆಳಗ್ಗೆ ಟಿಡಿಪಿ ಕಾರ್ಯಕರ್ತರು ಮತ್ತು ನಿವಾಸಿಗಳು ರೆಡ್ಡಿ ಅವರ ಮನೆಯ ಹೊರಗೆ ಕಸವನ್ನು ಎಸೆದರು.

ಇದನ್ನೂ ಓದಿ: ಪ್ರತಿಭಟನೆ ನಿರತರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ಬುಧವಾರ ಬಂಗಾಳ ಬಂದ್‌ಗೆ ಕರೆ ನೀಡಿದ ಬಿಜೆಪಿ 

ಕಸದ ತೆರಿಗೆ ವಿಚಾರದಲ್ಲಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ಉದ್ವಿಗ್ನತೆ ಮುಂದುವರಿದಿದ್ದು, ಪೊಲೀಸ್ ಆಡಳಿತದ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ ಮತ್ತು ಕಡಪ ಮೇಯರ್ ಅಧಿಕೃತ ನಿವಾಸದ ಮೇಲೆ ಕಸ ಸುರಿದ ರೆಡ್ಡಿ ಮತ್ತು ಅವರ ಅನುಯಾಯಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us