ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್​​ನಿಂದ ಧ್ವಂಸ ಮಾಡುವ ಕಾರ್ಯಾಚರಣೆ ಸ್ಥಗಿತದ ನಂತರ ದೆಹಲಿ ಬಿಜೆಪಿ ನಾಯಕರಿಂದ ಅಮಿತ್ ಶಾ ಭೇಟಿ

ದೆಹಲಿ ನಾಯಕರೊಂದಿಗೆ ಅಮಿತ್ ಶಾ ಒಂದು ಗಂಟೆ ಕಾಲ ಸಭೆ ನಡೆಸಿದರು. ಸಭೆಯಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ, ಸಂಸದ ರಮೇಶ್ ಬಿಧುರಿ, ಶಾಸಕ ರಾಮ್ ಬೀರ್ ಬಿಧುರಿ ಮತ್ತು ನಾಯಕ ಮಣಿಂದರ್ ಸಿಂಗ್ ಸಿರ್ಸಾ ಭಾಗವಹಿಸಿದ್ದಾರೆ.

ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್​​ನಿಂದ ಧ್ವಂಸ ಮಾಡುವ ಕಾರ್ಯಾಚರಣೆ ಸ್ಥಗಿತದ ನಂತರ ದೆಹಲಿ ಬಿಜೆಪಿ ನಾಯಕರಿಂದ ಅಮಿತ್ ಶಾ ಭೇಟಿ
ಅಮಿತ್ ಶಾ ಭೇಟಿ ಮಾಡಿದ ದೆಹಲಿ ಬಿಜೆಪಿ ನಾಯಕರು
Edited By: ರಶ್ಮಿ ಕಲ್ಲಕಟ್ಟ

Updated on: Apr 20, 2022 | 9:55 PM

ದೆಹಲಿ:  ದೆಹಲಿಯ  ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿಯಲ್ಲಿ (Jahangirpuri) ವಿವಾದಾತ್ಮಕ ಧ್ವಂಸ ಕಾರ್ಯಾಚರಣೆಯನ್ನು ಸುಪ್ರೀಂಕೋರ್ಟ್ (SupremeCourt)  ಸ್ಥಗಿತಗೊಳಿಸಿದ ಗಂಟೆಗಳ ನಂತರ ದೆಹಲಿಯ ಬಿಜೆಪಿಯ ಉನ್ನತ ನಾಯಕರು ಇಂದು ದೆಹಲಿಯ ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿದರು. ದೆಹಲಿ ನಾಯಕರೊಂದಿಗೆ ಅಮಿತ್ ಶಾ ಒಂದು ಗಂಟೆ ಕಾಲ ಸಭೆ ನಡೆಸಿದರು. ಸಭೆಯಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ, ಸಂಸದ ರಮೇಶ್ ಬಿಧುರಿ, ಶಾಸಕ ರಾಮ್ ಬೀರ್ ಬಿಧುರಿ ಮತ್ತು ನಾಯಕ ಮಣಿಂದರ್ ಸಿಂಗ್ ಸಿರ್ಸಾ ಭಾಗವಹಿಸಿದ್ದಾರೆ. ಮಾತುಕತೆ ವೇಳೆ ನಾಯಕರು ಏನನ್ನೂ ಬಹಿರಂಗಪಡಿಸಿಲ್ಲ. “ಇದು ವಾಡಿಕೆಯ ಸಭೆ ಎಂದು ಸಿರ್ಸಾ ಹೇಳಿದರು. ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ಕೋಮು ಘರ್ಷಣೆ ನಡೆದ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ಕರೆ ನೀಡುವಂತೆ ಆದೇಶ್ ಗುಪ್ತಾ ಅವರು ಉತ್ತರ ದೆಹಲಿ ಮಹಾನಗರ ಪಾಲಿಕೆ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಗುಪ್ತಾ ಅವರು “ಗಲಭೆಕೋರರ” ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮತ್ತು ಅವುಗಳನ್ನು ಕೆಡವಲು ನಾಗರಿಕ ಸಂಸ್ಥೆಯನ್ನು ಕೇಳಿದರು.  ಕೆಡವುವ ಕಾರ್ಯಾಚರಣೆ ನಡೆಸುವ ತಂಡಗಳು ನೂರಾರು ಪೊಲೀಸರೊಂದಿಗೆ ಬೆಳಿಗ್ಗೆ ಜಹಾಂಗೀರ್​​ಪುರಿಗೆ ಬಂದವು. ಸ್ವಲ್ಪ ಸಮಯದ ನಂತರ, ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯೊಂದು ಈ ಕಾರ್ಯಾಚರಣೆಯನ್ನು ಅನ್ನು ಅಕ್ರಮ ಎಂದು ಕರೆಯಿತು.ಕೋಮು ಘರ್ಷಣೆಗಳು ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಈಗ ದೆಹಲಿಯಂತಹ ರಾಜ್ಯಗಳಲ್ಲಿ ಕಂಡುಬರುವ ಆತಂಕಕಾರಿ ಪ್ರವೃತ್ತಿಯನ್ನು ನಿಲ್ಲಿಸುವ ಮಾಡುವ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.

ಆದರೆ ಸುಪ್ರೀಂಕೋರ್ಟ್ ಆದೇಶದ ನಂತರ ನಾಗರಿಕ ಸಂಸ್ಥೆಯ ಬುಲ್ಡೋಜರ್‌ಗಳು ನಿಲ್ಲಲಿಲ್ಲ. ಶನಿವಾರದ ಹಿಂಸಾಚಾರದ ಕೇಂದ್ರದಲ್ಲಿ ಮಸೀದಿಯ ಗೋಡೆ ಮತ್ತು ಗೇಟ್‌ನ ಹೊರತಾಗಿ ಇಪ್ಪತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಇಂದು ಸಂಜೆ ಹೇಳಿಕೆಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವು ಟ್ರಾಫಿಕ್ ಮತ್ತು ಪಾದಚಾರಿಗಳ ಚಲನೆಯನ್ನು ಸರಾಗಗೊಳಿಸುವ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳನ್ನು ತೆರವುಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ. “ಸಾರ್ವಜನಿಕ ರಸ್ತೆಗಳ ಮೇಲಿನ ಇಂತಹ ಅತಿಕ್ರಮಣ ತೆಗೆಯುವ ಕಾರ್ಯಾಚರಣೆಯನ್ನು ಎಂಸಿಡಿ ಕಾಯಿದೆ, 1957 ರ ಸೆಕ್ಷನ್ 321/322/323/325 ರ ಅಡಿಯಲ್ಲಿ ಸೂಚನೆಯೊಂದಿಗೆ / ಇಲ್ಲದೆಯೇ ಉತ್ತರ ಡಿಎಂಸಿಯಿಂದ ಎಲ್ಲಾ ವಾರ್ಡ್ / ವಲಯಗಳಲ್ಲಿ ಸ್ಥಳೀಯ ಪೊಲೀಸರಿಗೆ ಪೂರ್ವ ಸೂಚನೆಯೊಂದಿಗೆ ನಿಯಮಿತವಾಗಿ ಮಾಡಲಾಗುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ ನಿಲ್ಲಿಸಲು ಸುಪ್ರೀಂಕೋರ್ಟ್ ಆದೇಶ

Web contact

TV9 Kannada

Read More
Follow Us