
ಲಕ್ನೋ: ಬೃಹತ್ ಭ್ರಷ್ಟಾಚಾರ ನಡೆಸಿರೋ ಆರೋಪದಲ್ಲಿ ಉತ್ತರ ಪ್ರದೇಶ ಸರ್ಕಾರವು ಇಬ್ಬರು IPS ಅಧಿಕಾರಿಗಳನ್ನು ಅಮಾನತು ಮಾಡಿದೆ. DIG ದಿನೇಶ್ ಚಂದ್ರ ದುಬೇ ಮತ್ತು DIG ಅರವಿಂದ್ ಸೇನ್ ಅಮಾನತುಗೊಂಡಿರುವ IPS ಅಧಿಕಾರಿಗಳು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವು ನೀಡಿರುವ ವರದಿಯ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿ ತನಿಖೆ ನಡೆಸಲಾಗಿತ್ತು. ಇದೀಗ, ತನಿಖಾ ವರದಿ ಹೊರಬಿದ್ದಿದ್ದು ಅಧಿಕಾರಿಗಳಿಬ್ಬರೂ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪದಡಿ ಸಸ್ಪೆಂಡ್ ಆಗಿದ್ದಾರೆ.
Published On - 4:59 pm, Tue, 25 August 20