PUBG ಬ್ಯಾನ್: ಖಿನ್ನತೆಯಿಂದ ಯುವಕ ಆತ್ಮಹತ್ಯೆ

21 ವರ್ಷದ ವಿದ್ಯಾರ್ಥಿಯೊಬ್ಬ PUBG ಗೇಮ್​ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ ಚಕ್ತಾಹಾ ಪೊಲೀಸ್ ಠಾಣೆ ಪ್ರದೇಶದ ಪುರ್ಬಾ ಲಾಲ್ಪುರದ ಮನೆಯಲ್ಲಿ ಐಟಿಐ ವಿದ್ಯಾರ್ಥಿ ಪ್ರೀತಮ್ ಹಾಲ್ಡರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ನಂತರ ಪ್ರೀತಮ್ ತನ್ನ ಕೋಣೆಗೆ ಹೋದ ಎಂದು ಅವರ ತಾಯಿ ರತ್ನ ತಿಳಿಸಿದ್ದಾರೆ. ನಾನು ಅವನನ್ನು ಊಟಕ್ಕೆ ಕರೆಯಲು ಹೋದಾಗ, ಅವನ ರೂಮ್​ ಒಳಗಿನಿಂದ ಲಾಕ್ ಆಗಿತ್ತು. […]

PUBG ಬ್ಯಾನ್: ಖಿನ್ನತೆಯಿಂದ ಯುವಕ ಆತ್ಮಹತ್ಯೆ
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು

Updated on: Sep 07, 2020 | 12:17 PM

21 ವರ್ಷದ ವಿದ್ಯಾರ್ಥಿಯೊಬ್ಬ PUBG ಗೇಮ್​ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ

ಚಕ್ತಾಹಾ ಪೊಲೀಸ್ ಠಾಣೆ ಪ್ರದೇಶದ ಪುರ್ಬಾ ಲಾಲ್ಪುರದ ಮನೆಯಲ್ಲಿ ಐಟಿಐ ವಿದ್ಯಾರ್ಥಿ ಪ್ರೀತಮ್ ಹಾಲ್ಡರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ನಂತರ ಪ್ರೀತಮ್ ತನ್ನ ಕೋಣೆಗೆ ಹೋದ ಎಂದು ಅವರ ತಾಯಿ ರತ್ನ ತಿಳಿಸಿದ್ದಾರೆ.

ನಾನು ಅವನನ್ನು ಊಟಕ್ಕೆ ಕರೆಯಲು ಹೋದಾಗ, ಅವನ ರೂಮ್​ ಒಳಗಿನಿಂದ ಲಾಕ್ ಆಗಿತ್ತು. ಅವನು ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರನ್ನು ಕರೆದೆ, ರೂಮಿನ ಬಾಗಿಲು ಒಡೆದು ಒಳಗೆ ಹೋಗಿ ನೋಡಲಾಗಿ ಸೀಲಿಂಗ್ ಫ್ಯಾನ್‌ಗೆ ನನ್ನ ಮಗ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಬೆಳಕಿಗೆ ಬಂತು ಎಂದಿದ್ದಾರೆ.

ತನ್ನ ಮಗ PUBG ಆಡಲು ಸಾಧ್ಯವಾಗದ ಕಾರಣ ನಿರಾಶೆಗೊಂಡಿದ್ದ ಎಂದು ರತ್ನ ಹೇಳಿಕೊಂಡಿದ್ದಾರೆ. ರಾತ್ರಿಯಿಡಿ PUBG ಆಡುತ್ತಿದ್ದ ನನ್ನ ಮಗನಿಗೆ, PUBG ಬ್ಯಾನ್​ ಆದ ಬಳಿಕ ಅದನ್ನು ಆಡಲು ಸಾಧ್ಯವಾಗದ ಕಾರಣ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us