Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರ ಪೆಗಾಸಸ್ ಮಾದರಿಯ ಬೇಹುಗಾರಿಕೆ ಸ್ಪೈವೇರ್ ಕಾಗ್ನೈಟ್ ಅನ್ನು ಖರೀದಿಸುತ್ತಿದೆ: ಕಾಂಗ್ರೆಸ್ ಆರೋಪ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಂದೆ ಪ್ರಶ್ನೆಗಳನ್ನು ಮುಂದಿಟ್ಟ ಖೇರಾ ಈ ಕಾಗ್ನೈಟ್ ಸಾಫ್ಟ್‌ವೇರ್ ಅನ್ನು ಖರೀದಿಸಲು ಯಾವ ಸಚಿವಾಲಯಕ್ಕೆ ಕಾರ್ಯವನ್ನು ನೀಡಲಾಗಿದೆ ಮತ್ತು ಅದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ನಾವು ಸರ್ಕಾರವನ್ನು ಕೇಳಲು ಬಯಸುತ್ತೇವೆ ಎಂದ ಪವನ್ ಖೇರಾ

ಕೇಂದ್ರ ಸರ್ಕಾರ ಪೆಗಾಸಸ್ ಮಾದರಿಯ ಬೇಹುಗಾರಿಕೆ ಸ್ಪೈವೇರ್ ಕಾಗ್ನೈಟ್ ಅನ್ನು ಖರೀದಿಸುತ್ತಿದೆ: ಕಾಂಗ್ರೆಸ್ ಆರೋಪ
ಪವನ್ ಖೇರಾ
Follow us
ರಶ್ಮಿ ಕಲ್ಲಕಟ್ಟ
|

Updated on: Apr 10, 2023 | 6:52 PM

₹ 986 ಕೋಟಿ ವೆಚ್ಚದಲ್ಲಿ ‘ಕಾಗ್ನೈಟ್’ (Cognyte) ಎಂಬ ಪೆಗಾಸಸ್ ಮಾದರಿಯ ಬೇಹುಗಾರಿಕೆ ಸಾಫ್ಟ್‌ವೇರ್ ಅನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಸರ್ಕಾರ ರಾಜಕಾರಣಿಗಳು, ಮಾಧ್ಯಮಗಳು, ಕಾರ್ಯಕರ್ತರು ಮತ್ತು ಎನ್‌ಜಿಒಗಳ ಮೇಲೆ ಕಣ್ಣಿಡಲು ಇದನ್ನು ಬಳಸುತ್ತದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera) ಪೆಗಾಸಸ್ ಕುಖ್ಯಾತಿ ಪಡೆದ ನಂತರ, ಕನಿಷ್ಠ ಆಡಳಿತ-ಗರಿಷ್ಠ ಕಣ್ಗಾವಲು ಹೊಂದಿರುವ ಸರ್ಕಾರವು ಮಾರುಕಟ್ಟೆಯಲ್ಲಿ ಹೊಸ ಸ್ಪೈವೇರ್ ಅನ್ನು ಹುಡುಕುತ್ತಿದೆ ಎಂದು ಹೇಳಿದರು. ಕಾಗ್ನೈಟ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಆದರೆ ಅದು ಪೆಗಾಸಸ್‌ನಂತೆಯೇ ಕೆಲಸ ಮಾಡಿದೆ ಮತ್ತು ಮಾಧ್ಯಮಗಳಲ್ಲಿ ಕಡಿಮೆ ಚರ್ಚಿಸಲಾಗಿದೆ ಎಂಬುದನ್ನು ಖೇರಾ ಹೈಲೈಟ್ ಮಾಡಿದ್ದಾರೆ.

ಆದಾಗ್ಯೂ, ಕಾಗ್ನೈಟ್ ನಿಯಮಿತವಾಗಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸುತ್ತದೆ ಮತ್ತು ಅವರ ಬಗ್ಗೆ ಮಾಹಿತಿಯನ್ನು ಒದಗಿಸಲು ಅನೈತಿಕ ವಿಧಾನಗಳನ್ನು ಬಳಸುತ್ತದೆ” ಎಂದು ಅಮೆರಿಕದ ಕಾನೂನು ಸಂಸ್ಥೆಯೊಂದು ಹೇಳಿದೆ. ಇಂಥಾ ಅಕ್ರಮಗಳಿಂದಾಗಿಯೇ ನಾರ್ವೆ ಸವರಿನ್ ವೆಲ್ತ್ ಫಂಡ್ ಕಾಗ್ನೈಟ್ ಷೇರುಗಳನ್ನು ಕೈಬಿಟ್ಟಿದೆ ಎಂದಿದ್ದಾರೆ ಖೇರಾ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಂದೆ ಪ್ರಶ್ನೆಗಳನ್ನು ಮುಂದಿಟ್ಟ ಖೇರಾ ಈ ಕಾಗ್ನೈಟ್ ಸಾಫ್ಟ್‌ವೇರ್ ಅನ್ನು ಖರೀದಿಸಲು ಯಾವ ಸಚಿವಾಲಯಕ್ಕೆ ಕಾರ್ಯವನ್ನು ನೀಡಲಾಗಿದೆ ಮತ್ತು ಅದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ನಾವು ಸರ್ಕಾರವನ್ನು ಕೇಳಲು ಬಯಸುತ್ತೇವೆ. ಕಡಿಮೆ ಮಾಹಿತಿ ತಿಳಿದಿರುವ ಈ ಸಾಫ್ಟ್‌ವೇರ್ ಅನ್ನು ಯಾವ ಆಧಾರದ ಮೇಲೆ ಮೇಲೆ ಅಂತಿಮಗೊಳಿಸಲಾಗುತ್ತಿದೆ ಎಂದು ನಮಗೆ ತಿಳಿಸುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಕಾಗ್ನೈಟ್‌ನಿಂದ ಕೆಲವು ಸಂವಹನ ಸಾಧನಗಳನ್ನು ಖರೀದಿಸಲಾಗಿದೆಯೇ? ಹೌದು ಎಂದಾದರೆ, ಯಾವ ಸಚಿವಾಲಯ ಇದನ್ನು ಖರೀದಿಸಿದೆ ಮತ್ತು ಅದರ ಬೆಲೆ ಎಷ್ಟು? ಅಂತಿಮಗೊಳಿಸಲು ಹೊಸ ಸ್ಪೈವೇರ್ ಯೋಜನೆ ಇದೆಯೇ? ಯಾವುದೇ ಸಚಿವಾಲಯವು ಪ್ರಸ್ತಾವನೆಗಾಗಿ ವಿನಂತಿಯನ್ನು ನೀಡಿದೆಯೇ? ಹೌದು ಎಂದಾದರೆ, ಅದು ಯಾವ ಸಚಿವಾಲಯ? ಎಂದು ಖೇರಾ ಕೇಳಿದ್ದಾರೆ.

ಇದನ್ನೂ ಓದಿ: Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು

ಕಾಗ್ನೈಟ್‌ನ ವೆಬ್‌ಪೇಜ್ ಇಸ್ರೇಲಿ ಸಾಫ್ಟ್‌ವೇರ್ ಸುರಕ್ಷಿತ ಪ್ರಪಂಚಕ್ಕಾಗಿ ಕ್ರಿಯಾಶೀಲ ಬುದ್ಧಿಮತ್ತೆಯೊಂದಿಗೆ ಸರ್ಕಾರಗಳು ಮತ್ತು ಉದ್ಯಮಗಳಿಗೆ ಅಧಿಕಾರ ನೀಡುವ ತನಿಖಾ ವಿಶ್ಲೇಷಣಾ ಸಾಫ್ಟ್‌ವೇರ್‌ನಲ್ಲಿ ಜಾಗತಿಕ ನಾಯಕ ಎಂದು ಹೇಳುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ