AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಯೂಟರ್ನ್, ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ವಾಪಸ್!

ದೆಹಲಿ: ಕೊರೊನಾ ಬಿಕ್ಕಟ್ಟು ಭಾರತವನ್ನು ನಲುಗಿಸಿದೆ. ಲಾಕ್​ಡೌನ್​ನಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದೆಷ್ಟೋ ಜನರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ್ ಅಭಿಯಾನ ಆರಂಭಿಸಿದ್ರು. ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ಆತುರದ ನಿರ್ಧಾರದಿಂದ ಎಡವಟ್ಟು ಮಾಡ್ಕೊಂಡಿದೆ. ವಿದೇಶಿ ವಸ್ತುಗಳಿಗೆ ಗುಡ್​ ಬೈ ಹೇಳಿ ಯೂಟರ್ನ್ ಹೊಡೆದಿದೆ. ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ಹಿಂಪಡೆದ ಗೃಹ ಇಲಾಖೆ..! ಯೆಸ್.. ದೇಶದಾದ್ಯಂತ ಅರೆಸೇನಾ ಪಡೆ ಕ್ಯಾಂಟೀನ್‌ಗಳಲ್ಲಿ ವಿದೇಶಿ […]

ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಯೂಟರ್ನ್, ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ವಾಪಸ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jun 02, 2020 | 10:02 AM

Share

ದೆಹಲಿ: ಕೊರೊನಾ ಬಿಕ್ಕಟ್ಟು ಭಾರತವನ್ನು ನಲುಗಿಸಿದೆ. ಲಾಕ್​ಡೌನ್​ನಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದೆಷ್ಟೋ ಜನರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ್ ಅಭಿಯಾನ ಆರಂಭಿಸಿದ್ರು. ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ಆತುರದ ನಿರ್ಧಾರದಿಂದ ಎಡವಟ್ಟು ಮಾಡ್ಕೊಂಡಿದೆ. ವಿದೇಶಿ ವಸ್ತುಗಳಿಗೆ ಗುಡ್​ ಬೈ ಹೇಳಿ ಯೂಟರ್ನ್ ಹೊಡೆದಿದೆ.

ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ಹಿಂಪಡೆದ ಗೃಹ ಇಲಾಖೆ..! ಯೆಸ್.. ದೇಶದಾದ್ಯಂತ ಅರೆಸೇನಾ ಪಡೆ ಕ್ಯಾಂಟೀನ್‌ಗಳಲ್ಲಿ ವಿದೇಶಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಗೃಹ ಸಚಿವಾಲಯ ಗೇಟ್​​​ಪಾಸ್ ನೀಡಿತ್ತು. ಸಾವಿರಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್ ಹಾಕಿ ಕೇವಲ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಜೈ ಎಂದಿತ್ತು. ಆದ್ರೀಗ ದಿಢೀರ್ ಯೂಟರ್ನ್​ ಹೊಡೆದಿರೋ ಕೇಂದ್ರ ಸರ್ಕಾರ ಆದೇಶ ಮಾಡಿದಷ್ಟೇ ವೇಗದಲ್ಲಿ ಅದನ್ನು ವಾಪಸ್ ಪಡೆದಿದೆ. ಈ ಬಗ್ಗೆ ಶೀಘ್ರದಲ್ಲೇ ಪರಿಷ್ಕೃತ ಆದೇಶ ಹೊರಡಿಸೋದಾಗಿ ಮೋದಿ ಸರ್ಕಾರ ಹೇಳಿದೆ.

ಶೀಘ್ರದಲ್ಲೇ ಪರಿಷ್ಕೃತ ಪಟ್ಟಿ ಬಿಡುಗಡೆಯ ಸಬೂಬು..! ಇನ್ನು, ಕೇಂದ್ರ ಗೃಹ ಸಚಿವಾಲಯ ನಿನ್ನೆ ಹೊರಡಿಸಲಾಗಿದ್ದ ಆದೇಶದಂತೆ ಚಾಕೊಲೆಟ್‌, ಎಲೆಕ್ಟ್ರಾನಿಕ್‌ ಸಾಧನಗಳು, ಬ್ರ್ಯಾಂಡೆಡ್‌ ಚಪ್ಪಲಿ, ಶೂಗಳು, ಮೈಕ್ರೊ ಓವನ್‌ಗಳು ಸೇರಿ ಆಮದು ಮಾಡಿಕೊಳ್ಳೋ 1,000ಕ್ಕೂ ಹೆಚ್ಚು ವಸ್ತುಗಳು ಸಿಎಪಿಎಫ್‌ ಕ್ಯಾಂಟೀನ್​ಗಳಲ್ಲಿ ಲಭ್ಯವಿರುವುದಿಲ್ಲ ಅಂತ ಪಟ್ಟಿ ರಿಲೀಸ್ ಮಾಡಿದ್ರು. ಅಲ್ಲದೇ ದೇಶದಾದ್ಯಂತ ಕೇವಲ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಅಂತ ಹೇಳಲಾಗಿತ್ತು.

ಆದ್ರೀಗ ಈ ನಿರ್ಧಾರದಿಂದ ದಿಢೀರ್ ಉಲ್ಟಾ ಹೊಡೆದಿರೋ ಕೇಂದ್ರ ಸರ್ಕಾರ ಸದ್ಯದ್ಲಲೇ ಪರಿಷ್ಕೃತ ಪಟ್ಟಿ ರಿಲೀಸ್ ಮಾಡ್ತೀವಿ ಎಂದಿದೆ. ಕೇಂದ್ರದ ಈ ಎಡವಟ್ಟು ನಿರ್ಧಾರ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಒಮ್ಮೆ ಮಾಡಿದ ಆದೇಶ ಮತ್ತೆ ವಾಪಾಸ್ ಪಡೆದಿದ್ದೇಕೆ? ವಿದೇಶಿ ಕಂಪನಿಗಳ ಒತ್ತಡ ಏನಾದ್ರೂ ಬಂತಾ ಅನ್ನೋ ಪ್ರಶ್ನೆಗಳು ಸುಳಿದಾಡ್ತಿದೆ.

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ, ಸಿಐಎಸ್‌ಎಫ್‌, ಎಸ್‌ಎಸ್‌ಬಿ, ಎನ್‌ಎಸ್‌ಜಿ ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರೋ ಕುಟುಂಬದ ಸದಸ್ಯರಿಗೆ ಕ್ಯಾಂಟೀನ್ ಸೇವೆ ಲಭ್ಯವಿದೆ. ಕ್ಯಾಂಟೀನ್​ಗಳಲ್ಲಿ ವಾರ್ಷಿಕ 2,800 ಕೋಟಿ ವಹಿವಾಟು ನಡೆಯಲಿದೆ. ಇಲ್ಲಿ ವಿದೇಶಿ ಉತ್ಪನ್ನಗಳಿಗೆ ಬ್ರೇಕ್ ಹಾಕಿ ಸ್ವದೇಶಿ ಮಂತ್ರ ಜಪಿಸೋಕೆ ಹೋಗಿ ಯೂಟರ್ನ್ ಹೊಡೆದಿದೆ. ಆದ್ರೂ ಇನ್ನೆರಡು ದಿನಗಳಲ್ಲಿ ಪರಿಷ್ಕೃತ ಪಟ್ಟಿ ರಿಲೀಸ್ ಆಗೋ ಸಾಧ್ಯತೆ ಇದೆ. ಆ ಪಟ್ಟಿಯಲ್ಲಿ ವಿದೇಶಿ ಕಂಪನಿಗಳು ಉತ್ಪನ್ನಗಳು ಇರುತ್ತೋ..? ಇಲ್ವೋ ಅನ್ನೋದು ಕುತೂಹಲ ಮೂಡಿಸಿದೆ.

Published On - 9:35 am, Tue, 2 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ