ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾದ ವಿದೇಶಿ ಹೂಡಿಕೆದಾರರಿಗೆ ಆಗ ಕೇಂದ್ರ ಸಚಿವರು ಬೆದರಿಕೆ ಹಾಕ್ತಿದ್ರು :ಮೋದಿ

Vibrant Gujarat Summit: ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾಗುವ ಪ್ರತಿಯೊಬ್ಬ ವಿದೇಶಿ ಹೂಡಿಕೆದಾರರಿಗೆ ಆಗಿನ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಬುಧವಾರ (ಸೆಪ್ಟೆಂಬರ್ 27) ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ದೊಡ್ಡ ಮರವಾಗಿ ಬೆಳೆದಿದೆ ಎಂದರು.

ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾದ ವಿದೇಶಿ ಹೂಡಿಕೆದಾರರಿಗೆ ಆಗ ಕೇಂದ್ರ ಸಚಿವರು ಬೆದರಿಕೆ ಹಾಕ್ತಿದ್ರು :ಮೋದಿ
ನರೇಂದ್ರ ಮೋದಿ
Follow us
|

Updated on: Sep 27, 2023 | 1:10 PM

ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾಗುವ ಪ್ರತಿಯೊಬ್ಬ ವಿದೇಶಿ ಹೂಡಿಕೆದಾರರಿಗೆ ಆಗಿನ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಬುಧವಾರ (ಸೆಪ್ಟೆಂಬರ್ 27) ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ದೊಡ್ಡ ಮರವಾಗಿ ಬೆಳೆದಿದೆ ಎಂದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಗುಜರಾತ್ ಅಭಿವೃದ್ಧಿಯನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದರು. ಆಗಿನ ಸರ್ಕಾರದ ಸಚಿವರು ವೈಬ್ರೆಂಟ್ ಗುಜರಾತ್​ಗೆ ಬರಲು ನಿರಾಕರಿಸುತ್ತಿದ್ದರು. ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಿ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

20 ವರ್ಷಗಳ ಹಿಂದೆ ನಾವು ಸಣ್ಣ ಬೀಜ ಬಿತ್ತಿದ್ದೆವು, ಇಂದು ಅದು ಬೃಹತ್ ಮರವಾಗಿ ಬೆಳೆದಿದೆ. ಇಂದು ವೈಬ್ರಂಟ್ ಗುಜರಾತ್ 20 ವರ್ಷಗಳನ್ನು ಪೂರೈಸುತ್ತಿರುವಾಗ ವೈಬ್ರೆಂಟ್ ಗುಜರಾತ್ ಕೇವಲ ಬ್ರ್ಯಾಂಡಿಂಗ್ ಅಲ್ಲ, ನಮ್ಮ ಪಾಲಿಗೆ ಇದು ಬಲವಾದ ಬಾಂಧವ್ಯದ ಸಂಕೇತವಾಗಿದೆ ಎಂದರು. ಇದು 7 ಕೋಟಿ ನಾಗರಿಕರಿಗೆ ಸಂಪರ್ಕ ಹೊಂದಿದೆ. ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಜನರು ಸತ್ತರು, ಕ್ಷಾಮದ ಜತೆಗೆ ಒಂದು ಬ್ಯಾಂಕ್ ಕೂಡ ಮುಳುಗಿತು ಗುಜರಾತ್​ನ ಪರಿಸ್ಥಿತಿ ಏನಾಗಬಹುದು ಎಂದು ಯಾರಿಂದಲೂ ಊಹಿಸಲು ಸಾಧ್ಯವಿರಲಿಲ್ಲ.

ಆಗ ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ, ನನಗೆ ಎಲ್ಲವೂ ಹೊಸದು ಆದರೆ ಸವಾಲು ದೊಡ್ಡದಾಗಿತ್ತು, ಅಷ್ಟರಲ್ಲಿ ಗೋದ್ರಾ ಘಟನೆ ನಡೆದಿತ್ತು ಆದರೆ ನನಗೆ ಗುಜರಾತ್ ಮತ್ತು ಅಲ್ಲಿನ ಜನರ ಮೇಲೆ ಅಚಲವಾದ ನಂಬಿಕೆ ಇತ್ತು.

ಆದರೆ, ಅಜೆಂಡಾವನ್ನು ಹೊತ್ತವರು ಘಟನೆಯನ್ನು ವಿಶ್ಲೇಷಿಸುವುದರಲ್ಲಿ ನಿರತರಾಗಿದ್ದರು. ನಮ್ಮ ಬಿಕ್ಕಟ್ಟಿನಲ್ಲೂ ನಾನು ಗುಜರಾತ್ ಅನ್ನು ಅದರಿಂದ ಹೊರತರಲು ಪ್ರತಿಜ್ಞೆ ಮಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ಯಮ ಸಮೂಹಗಳು, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳ ಪ್ರಮುಖರು, ಯುವ ಉದ್ಯಮಿಗಳು, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇತರರು ಆಗಮಿಸಿದ್ದಾರೆ. ಮೊದಲ ವೈಬ್ರೆಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು 2003 ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಸಲಾಯಿತು.

ಮತ್ತಷ್ಟು ಓದಿ: PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ – ಸುಂದರ್​ ಪಿಚೈ

ಇಂದು ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಪ್ರವಾಸದ ಎರಡನೇ ದಿನ. ಪ್ರಧಾನಿ ಮೋದಿ ಅವರು ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ರೋಬೋಟಿಕ್ ಗ್ಯಾಲರಿ ಮತ್ತು ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ವೈಬ್ರಂಟ್ ಗುಜರಾತ್​ನ ಯಶಸ್ಸನ್ನು ಜಗತ್ತು ನೋಡುತ್ತಿದೆ.

ವೈಬ್ರೆಂಟ್ ಶೃಂಗಸಭೆಯು ವಿಷಮ ಪರಿಸ್ಥಿತಿಯಲ್ಲಿ ಗುಜರಾತ್‌ನಲ್ಲಿ ಪ್ರಾರಂಭವಾಯಿತು. ಆಗ ಗುಜರಾತ್​ನಲ್ಲಿ ದೊಡ್ಡ ಹೋಟೆಲ್​ಗಳಿರಲಿಲ್ಲ, ಗುಜರಾತಿನಲ್ಲಿ ವೈಬ್ರಂಟ್ ಶೃಂಗಸಭೆ ಆರಂಭವಾದಾಗ ಕೇಂದ್ರ ಸರ್ಕಾರಕ್ಕೆ ಅದರ ಬಗ್ಗೆ ಆಸಕ್ತಿಯೇ ಇರಲಿಲ್ಲ. ಕಾಲಾನಂತರದಲ್ಲಿ ಪ್ರತಿಯೊಬ್ಬರೂ ವೈಬ್ರೆಂಟ್‌ನ ಮಹತ್ವವನ್ನು ಅರಿತುಕೊಂಡರು. 2003 ರಲ್ಲಿ ಕೇವಲ 100 ಜನರು ವೈಬ್ರಂಟ್ ಗುಜರಾತ್‌ಗೆ ಸೇರಿದರು. ಇಂದು 135 ದೇಶಗಳು ಸೇರಿಕೊಂಡಿವೆ.

ಗುಜರಾತ್ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮಾಧ್ಯಮವಾಗಿದೆ. ವೈಬ್ರೆಂಟ್ ಗುಜರಾತ್‌ನ 20 ವರ್ಷಗಳ ಯಶಸ್ಸಿನ ಸಂಭ್ರಮವನ್ನು ಸೈನ್ಸ್ ಸಿಟಿಯಲ್ಲಿ ಆಚರಿಸಲಾಗುತ್ತಿದೆ. ಇದೇ ವೇಳೆ ‘ಸಮ್ಮಿಟ್ ಆಫ್ ಸಕ್ಸಸ್’ ಪೆವಿಲಿಯನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?