Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ – ಸುಂದರ್​ ಪಿಚೈ

ಇಂಟರ್ನೆಟ್​​ ದೈತ್ಯ ಗೂಗಲ್​ ಗುಜರಾತ್​ನ ಗುಜರಾತ್​ ಇಂಟರ್ನ್ಯಾಷನಲ್​​ ಫೈನಾನ್ಸ್​​ ಟೆಕ್​​​-ಸಿಟಿ (ಗಿಫ್ಟ್​​) ನಗರದಲ್ಲಿ "ಜಾಗತಿಕ​ ಫಿನ್​ಟೆಕ್"​ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.

PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ - ಸುಂದರ್​ ಪಿಚೈ
ಗೂಗಲ್​ ಸಿಇಒ ಸುಂದರ್​ ಪಿಚೈ, ಪ್ರಧಾನಿ ನರೇಂದ್ರ ಮೋದಿ
Follow us
ವಿವೇಕ ಬಿರಾದಾರ
|

Updated on: Jun 24, 2023 | 9:58 AM

ವಾಷಿಂಗ್ಟನ್​​: ಇಂಟರ್ನೆಟ್​​ ದೈತ್ಯ ಗೂಗಲ್​ (Google) ಗುಜರಾತ್​ನ (Gujurat) ಗುಜರಾತ್​ ಇಂಟರ್ನ್ಯಾಷನಲ್​​ ಫೈನಾನ್ಸ್​​ ಟೆಕ್​​​-ಸಿಟಿ (ಗಿಫ್ಟ್​​) ನಗರದಲ್ಲಿ “ಜಾಗತಿಕ​ ಫಿನ್​ಟೆಕ್” (Global Fintech) ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ಅಲ್ಲದೇ 10 ಬಿಲಿಯನ್​ ಡಾಲರ್​ ಹೂಡಿಕೆ ಮಾಡುವುದಾಗಿ ಗೂಗಲ್​ನ ಸಿಇಒ ಸುಂದರ್​ ಪಿಚೈ (Sundar Pichai) ಹೇಳಿದ್ದಾರೆ. ಶುಕ್ರವಾರ (ಜೂ.23) ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕಾದ ಶ್ವೇತಭವನದಲ್ಲಿ (White House) ಭಾರತ ಹಾಗೂ ಅಮೆರಿಕಾದ ಸಿಇಒಗಳ ಜೊತೆ ಸಂವಾದ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸುಂದರ್​ ಪಿಚೈ ಈ ಬಗ್ಗೆ ನಾವು ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಮಾತನಾಡಿದ್ದೇವೆ. ಅದರ ಮುಂದುವರೆದ ಭಾಗವೇ ಈ ಮಾತುಕತೆ. ಭಾರತದಲ್ಲಿ ಗೂಗಲ್​​ 10 ಬಿಲಿಯನ್​ ಡಾಲರ್​ ಹೂಡಿಕೆ ಮಾಡಲು ನಿರ್ಧರಿಸಿದೆ. ಗುಜರಾತ್​ನಲ್ಲಿ ಜಾಗತಿಕ ಫಿನ್​ಟೆಕ್​ ಕೇಂದ್ರವನ್ನು ಆರಂಭಿಸುತ್ತೇವೆ ಎಂದರು.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ

AI (America-India) ಅಡಿ ಕಾರ್ಯನಿರ್ವಹಿಸಲು ಹಲವು ಕಂಪನಿಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ ಅತಿಶೀಘ್ರದಲ್ಲಿ ಗೂಗಲ್​ನಲ್ಲಿ ಭಾರತದ ಇನ್ನು ಅನೇಕ ಭಾಷೆಗಳನ್ನು ಸೇರಿಸುತ್ತೇವೆ. ಭಾರತವೂ ಡಿಜಿಟಲ್​ ಉದ್ಯಮದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. ಡಿಜಿಟಲ್​ ಇಂಡಿಯಾ ವಿಚಾರದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿ ಇಷ್ಟವಾಯಿತು. ಭಾರತ ಬಹಳಷ್ಟು ವೇಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಭಾರತದ ಡಿಜಿಟಲ್​ ಕ್ಷೇತ್ರ ಅನ್ಯ ದೇಶಗಳಿಗು ಮಾದರಿಯಾಗಿದೆ. ಡಿಜಿಟಲ್​ ಕ್ಷೆತ್ರದ UPI ಮತ್ತು Adharಗೆ ಧನ್ಯವಾದಗಳು ಎಂದು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ