AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India ವಿಮಾನ ದುರಂತಕ್ಕೆ ಈಡಾಗಲು ಕಾರಣವೇನು?

ತಿರುವನಂತಪುರಂ: 2010ರಲ್ಲಿ ಮಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಮೂರ್ನಾಲ್ಕು ಮಂದಿಯನ್ನ ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ರು. ಈಗ ಇಂಥದ್ದೇ ಘಟನೆ ಕೇರಳದ ಕೋಯಿಕ್ಕೋಡ್‌ನ ಕರಿಪುರ ಏರ್​ಪೋರ್ಟ್​ನಲ್ಲಿ ನಡೆದಿದೆ. ಮಂಗಳೂರಿನಂತೆಯೇ ಕರಿಪುರ ಏರ್​ಪೋರ್ಟ್ ಕೂಡ ಟೇಬಲ್ ಟಾಪ್ ಏರ್​ಪೋರ್ಟ್ ಆಗಿದೆ. ಹೀಗಾಗಿ, ರನ್​ವೇ ಬರೋಬ್ಬರಿ 130 ಅಡಿ ಎತ್ತರದಲ್ಲಿದೆ. ನಿನ್ನೆ ಜೋರು ಮಳೆಯಿದ್ದಿದ್ದಕ್ಕೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಇದ್ರಿಂದ ವಿಮಾನ ರನ್​ವೇಯಿಂದ ಸ್ಕಿಡ್ ಆಗಿದೆ. ಮೊದಲೇ ಟೇಬಲ್ ಟಾಪ್ ರನ್​ವೇ ಆಗಿರೋದ್ರಿಂದ ವಿಮಾನ ಏರ್​ಪೋರ್ಟ್​ನ ಕಾಂಪೌಂಡ್​ನಿಂದ 35 […]

Air India ವಿಮಾನ ದುರಂತಕ್ಕೆ ಈಡಾಗಲು ಕಾರಣವೇನು?
KUSHAL V
|

Updated on: Aug 08, 2020 | 7:40 AM

Share

ತಿರುವನಂತಪುರಂ: 2010ರಲ್ಲಿ ಮಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಮೂರ್ನಾಲ್ಕು ಮಂದಿಯನ್ನ ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ರು. ಈಗ ಇಂಥದ್ದೇ ಘಟನೆ ಕೇರಳದ ಕೋಯಿಕ್ಕೋಡ್‌ನ ಕರಿಪುರ ಏರ್​ಪೋರ್ಟ್​ನಲ್ಲಿ ನಡೆದಿದೆ. ಮಂಗಳೂರಿನಂತೆಯೇ ಕರಿಪುರ ಏರ್​ಪೋರ್ಟ್ ಕೂಡ ಟೇಬಲ್ ಟಾಪ್ ಏರ್​ಪೋರ್ಟ್ ಆಗಿದೆ. ಹೀಗಾಗಿ, ರನ್​ವೇ ಬರೋಬ್ಬರಿ 130 ಅಡಿ ಎತ್ತರದಲ್ಲಿದೆ. ನಿನ್ನೆ ಜೋರು ಮಳೆಯಿದ್ದಿದ್ದಕ್ಕೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಇದ್ರಿಂದ ವಿಮಾನ ರನ್​ವೇಯಿಂದ ಸ್ಕಿಡ್ ಆಗಿದೆ. ಮೊದಲೇ ಟೇಬಲ್ ಟಾಪ್ ರನ್​ವೇ ಆಗಿರೋದ್ರಿಂದ ವಿಮಾನ ಏರ್​ಪೋರ್ಟ್​ನ ಕಾಂಪೌಂಡ್​ನಿಂದ 35 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ರಭಸಕ್ಕೆ ಏರ್ ಇಂಡಿಯಾ ವಿಮಾನ ಎರಡು ತುಂಡಾಗಿದೆ. ಇನ್ನು ಟೇಬಲ್ ಟಾಪ್ ರನ್​ವೇಗಳಲ್ಲಿ ವಿಮಾನ ಲ್ಯಾಂಡಿಂಗ್ ಮಾಡೋದು ಸಾಹಸವೇ ಸರಿ. ಅದ್ರಲ್ಲೂ ಹವಾಮಾನ ವೈಪರೀತ್ಯ ಇರುವಾಗ ಜೀವ ಕೈಯಲ್ಲಿ ಹಿಡಿದು ಲ್ಯಾಂಡಿಂಗ್ ಮಾಡೋ ಪರಿಸ್ಥಿತಿ ಇರುತ್ತೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ವಿಮಾನ ಪ್ರಪಾತಕ್ಕೆ ಜಾರಿ ಬೀಳುತ್ತೆ. ಹೀಗಾಗಿ ಅತ್ಯಂತ ಅನುಭವಿ ಹಾಗೂ ರಾಷ್ಟ್ರಪತಿಯಿಂದ ಗೋಲ್ಡ್ ಮೆಡಲ್ ಪಡೆದ ಹಿರಿಯ ಪೈಲಟ್ ಆದ ದೀಪಕ್ ವಸಂತ್ ಸಾತೆಯನ್ನ ನೇಮಿಸಲಾಗಿತ್ತು. ಇವರಿಗೆ ಅಖಿಲೇಶ್ ಕುಮಾರ್ ಕೋ -ಪೈಲಟ್​ ಆಗಿ ಸಾಥ್ ನೀಡ್ತಿದ್ರು. ಆದರೂ ದುರಾದೃಷ್ಟ ಬೆನ್ನೇರಿ ಹಲವರನ್ನ ಸಾವಿನ ಮನೆಗೆ ತಳ್ಳಿದೆ.

ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಿರುವುದೇ ಅದೃಷ್ಟ ಕರಿಪುರ ಏರ್​ಪೋರ್ಟ್​ ದೇಶದ7ನೇ ಅತ್ಯಂತ ಕಾರ್ಯನಿರತ ಏರ್​ಪೋರ್ಟ್ ಅನ್ನೋ ಖ್ಯಾತಿ ಪಡೆದಿದೆ. ಇಲ್ಲಿ ವಿಮಾನಗಳ ಹಾರಾಟ ಹೆಚ್ಚಿರುತ್ತೆ. ಆದರೆ ನಿನ್ನೆ ಅದೃಷ್ಟವಶಾತ್ ಪತನಗೊಂಡ ಬಳಿಕ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ನಲ್ಲಿ, ವಿಮಾದ ದುರಂತ ಹವಾಮಾನ ವೈಪರೀತ್ಯದಿಂದಲೋ ಅಥವಾ ಟೇಬಲ್ ಟಾಪ್ ರನ್​ವೇದಿಂದ ಆಗಿರೋದೋ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ. ಇದೀಗ, ಘಟನಾ ಸ್ಥಳಕ್ಕೆ ಕೇಂದ್ರ ವಿಮಾನಯಾನ ತನಿಖಾ ತಂಡಗಳು ಭೇಟಿನೀಡಿದ್ದು ಪರಿಶೀಲನೆ ನಡೆಸುತ್ತಿದೆ.

Follow Us
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?