AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಂಭಮೇಳದಲ್ಲೊಂದು ಸುಂದರ ಸಂಗಮ; 5ವರ್ಷದ ಹಿಂದೆ ಅರ್ಧಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತೆ ಕುಟುಂಬ ಕೂಡಿಕೊಂಡದ್ದು ಹೇಗೆ?

2016ರಲ್ಲಿ ಕೃಷ್ಣಾ ದೇವಿ ತನ್ನ ಕಿರಿಯಪುತ್ರಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿದ್ದ ಅವರು ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅರ್ಧ ಕುಂಭಮೇಳಕ್ಕೆ ಹೋಗಿದ್ದ ಕೃಷ್ಣಾ ದೇವಿ ಅಲ್ಲಿ ದಾರಿ ತಪ್ಪಿ ಬೇರೆಡೆಗೆ ನಡೆದಿದ್ದರು.

ಮಹಾಕುಂಭಮೇಳದಲ್ಲೊಂದು ಸುಂದರ ಸಂಗಮ; 5ವರ್ಷದ ಹಿಂದೆ ಅರ್ಧಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತೆ ಕುಟುಂಬ ಕೂಡಿಕೊಂಡದ್ದು ಹೇಗೆ?
ಮಹಾಕುಂಭಮೇಳದಲ್ಲಿ ಮತ್ತೆ ಒಂದಾದ ದಂಪತಿ
Lakshmi Hegde
|

Updated on: Apr 09, 2021 | 12:22 PM

Share

ಹರಿದ್ವಾರ: ಇದೊಂದು ಪವಾಡವೇ ಎಂದು ಹೇಳಬೇಕು. ಅರ್ಧಕುಂಭಮೇಳದಲ್ಲಿ ಕುಟುಂಬದಿಂದ ದೂರವಾಗಿದ್ದ ಉತ್ತರ ಪ್ರದೇಶದ 65ವರ್ಷದ ಮಹಿಳೆಯೊಬ್ಬರು 5 ವರ್ಷಗಳ ಬಳಿಕ ಈಗ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ಮನೆಯವರೊಂದಿಗೆ ಕೂಡಿಕೊಂಡ ಘಟನೆ ನಡೆದಿದೆ. 2016ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಕೃಷ್ಣಾದೇವಿ ಕಾಣೆಯಾದ ನಂತರ ಮನೆಯವರು ದೂರು ನೀಡಿದ್ದರು. ಜಾಹೀರಾತುಗಳನ್ನು ಕೂಡ ನೀಡಿ, ತುಂಬ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ತಮ್ಮ ಕುಟುಂಬದವರ ಜತೆ ಕೂಡಿದ್ದಾರೆ.

2016ರಲ್ಲಿ ಕೃಷ್ಣಾ ದೇವಿ ತನ್ನ ಕಿರಿಯಪುತ್ರಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿದ್ದ ಅವರು ಹರಿದ್ವಾರದಲ್ಲಿ ನಡೆದಿದ್ದ ಅರ್ಧಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅರ್ಧ ಕುಂಭಮೇಳಕ್ಕೆ ಹೋಗಿದ್ದ ಕೃಷ್ಣಾ ದೇವಿ ಅಲ್ಲಿ ದಾರಿ ತಪ್ಪಿ ಬೇರೆಡೆಗೆ ನಡೆದಿದ್ದರು. ಬಳಿಕ ಒಂದು ವಸತಿ ಗೃಹದಲ್ಲಿ ಆಶ್ರಯ ಪಡೆದು, ವಾರಗಳ ಬಳಿಕ ಮತ್ತೊಂದು ವಸತಿಗೃಹಕ್ಕೆ ಹೋಗಿದ್ದರು. ಆದರೆ ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಮಹಾಕುಂಭಮೇಳದಲ್ಲಿ ಇಲ್ಲಿಗೆ ಬರುವವರ ಗುರುತು ಪರಿಶೀಲನೆ ಮಾಡುವ ವೇಳೆ ಇವರು ಅಂದು ಕಾಣೆಯಾದ ಕೃಷ್ಣಾ ದೇವಿ ಎಂಬುದು ಗೊತ್ತಾಗಿದೆ.

ಅಂದು ಕೃಷ್ಣಾದೇವಿ ನಾಪತ್ತೆಯಾದಾಗಿನಿಂದಲೂ ಎಲ್ಲ ಧಾರ್ಮಿಕ ಪ್ರದೇಶಗಳಲ್ಲೂ ಹುಡುಕಿದ್ದೇವೆ. ಪೇಪರ್​ಗಳಲ್ಲಿ ಫೋಟೋ ಹಾಕಿದ್ದೆವು. ಟಿವಿಗಳನ್ನೂ ಜಾಹಿರಾತು ಕೊಟ್ಟಿದ್ದೆವು. ಉದಯ್​ಪುರ್​ ಠಾಣೆಯಲ್ಲಿ ದೂರು ನೀಡಲಾಗಿತ್ತು. ವರ್ಷಗಳು ಕಳೆಯುತ್ತಿದ್ದವು ಹೊರತು  ಈಕೆ ಮಾತ್ರ ಸಿಗುತ್ತಿರಲಿಲ್ಲ ಎಂದು ಕೃಷ್ಣಾದೇವಿ ಪತಿ ಜ್ವಾಲಾಪ್ರಸಾದ್ ತಿಳಿಸಿದ್ದಾರೆ. ಯಾವುದೇ ಕುಂಭಮೇಳವಾದರೂ ಇಲ್ಲಿಗೆ ಭೇಟಿ ನೀಡುವವರ ಗುರುತು ಪರಿಶೀಲನೆಯನ್ನು ಪೊಲೀಸರು ನಡೆಸುತ್ತಾರೆ.

ಇದನ್ನೂ ಓದಿ: Virat Kohli IPL 2021 RCB Team Player: ಆರ್​ಸಿಬಿ ರನ್ ಮಷಿನ್ ವಿರಾಟ್​ ಕೊಹ್ಲಿ ಈ ಬಾರಿಯಾದರೂ ತಂಡವನ್ನು ಚಾಂಪಿಯನ್ ಮಾಡ್ತಾರಾ?

ಈಗಾಗಲೇ ಬೆಂಗಳೂರಿನಲ್ಲಿ 96 ಮಂದಿ ಡಿಸ್ಮಿಸ್ ಆಗಿದ್ದಾರೆ. ನೀನೂ.. ಸಾರಿಗೆ ಇಲಾಖೆ ವಾರ್ನಿಂಗ್​ ಒತ್ತಡಕ್ಕೆ ಸಿಲುಕಿದ ಸಿಬ್ಬಂದಿ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ