AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನೀವು ಹಳದಿ ಆಮೆಯನ್ನು ನೋಡಿದ್ದೀರಾ? ಒಡಿಶಾದಲ್ಲಿ ಪತ್ತೆಯಾದ ಈ ಅಪರೂಪದ ಆಮೆ ಸಖತ್ ಕ್ಯೂಟ್​ !

ಅಂದಹಾಗೇ, ಓಡಿಶಾದ ಬಾಲಾಸೋರ್​​ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್​ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು.

Video: ನೀವು ಹಳದಿ ಆಮೆಯನ್ನು ನೋಡಿದ್ದೀರಾ? ಒಡಿಶಾದಲ್ಲಿ ಪತ್ತೆಯಾದ ಈ ಅಪರೂಪದ ಆಮೆ ಸಖತ್ ಕ್ಯೂಟ್​ !
ಹಳದಿ ಬಣ್ಣದ ಆಮೆ
TV9 Web
| Updated By: Lakshmi Hegde|

Updated on:Apr 26, 2022 | 4:49 PM

Share

ಆಮೆ ಎಂದ ತಕ್ಷಣ ಅದು ನಿಧಾನವಾಗಿ ನಡೆಯುತ್ತದೆ ಎಂಬುದೇ ಮನಸಿಗೆ ಬರುತ್ತದೆ. ಸಾಮನ್ಯವಾಗಿ ಇವು ಮಣ್ಣಿನ ಬಣ್ಣ ಅಥವಾ ಪಾಚಿ ಬಣ್ಣದಲ್ಲಿ ಇರುತ್ತವೆ. ಅದರಲ್ಲೇ ಪುಟ್ಟ ಆಮೆಗಳಿಂದ, ದೊಡ್ಡ ಗಾತ್ರದ ಆಮೆಗಳವರೆಗೆ ಪ್ರಬೇಧಗಳು ಇವೆ. ಆದರೆ ಓಡಿಶಾದ ಸಿಮುಲಿಯಾ ಎಂಬ ಹಳ್ಳಿಯಲ್ಲಿ ಅತಿ ಅಪರೂಪವಾದ ಹಳದಿ ಬಣ್ಣದ ಆಮೆ ಪತ್ತೆಯಾಗಿದ್ದು, ಅದನ್ನೀಗ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಅಂದಹಾಗೆ, ಈ ಹಳದಿ ಬಣ್ಣದ ಆಮೆಗಳು ನೋಡಲು ಕ್ಯೂಟ್ ಆಗಿದ್ದು, ಪೂರ್ತಿ ಮೈ ಹಳದಿಯಾಗಿಯೇ ಇರುತ್ತದೆ. ಮತ್ತು ಅಪರೂಪದಲ್ಲೇ, ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ.

ಸಿಮುಲಿಯಾ ಹಳ್ಳಿಯಲ್ಲಿ ಪತ್ತೆಯಾದ ಆಮೆಯ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಸ್ಥಳೀಯರು ಒಂದು ಟಬ್​​ನಲ್ಲಿ ನೀರು ಹಾಕಿ ಅದರಲ್ಲಿಟ್ಟು ರಕ್ಷಿಸಿದ್ದರು. ಹಳದಿ ಆಮೆ ಪತ್ತೆಯಾಗಿದ್ದೇ ಆಗಿದ್ದು, ಅದನ್ನು ನೋಡಲು ನೂರಾರು ಜನರು ಮುಗಿಬಿದ್ದಿದ್ದರು.  ಒಡಿಶಾದ ಬಾಲಾಸೋರ್​​ನಲ್ಲಿರುವ ಸೋರೋ ಎಂಬ ಪ್ರದೇಶದಲ್ಲಿ ಕೊಳವೊಂದು ಇದೆ. ಆ ಕೊಳದಲ್ಲಿ ಮೊದಲು ಈ ಆಮೆ ಕಾಣಿಸಿಕೊಂಡಿತ್ತು. ಆದರೆ ಅಲ್ಲಿ ಹಾಗೇ ಇದ್ದರೆ ಅದಕ್ಕೆ ಅಪಾಯವಾಗಹಬಹುದು ಎಂದು, ಸ್ಥಳೀಯರು ಹಿಡಿದು ಟಬ್​​ನಲ್ಲಿ ಇಟ್ಟುಕೊಂಡು, ಅರಣ್ಯ ಇಲಾಖೆ ಅಧಿಕಾರಿಗಳು ಬರುವವರೆಗೂ ಕಾದಿದ್ದಾರೆ.

ಅಂದಹಾಗೇ, ಓಡಿಶಾದ ಬಾಲಾಸೋರ್​​ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್​ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು. ಬಸುದೇವ್​ ಮಹಾಪಾತ್ರಾ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಳದಿ ಆಮೆಯನ್ನು ನೋಡಿ ಅಚ್ಚರಿಗೊಂಡು ಅದನ್ನು ಮನೆಗೆ ತಂದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಟ್ಟಿದ್ದರು.  ಅದಾದ ಮೇಲೆ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದಾಗಿ ಐಎಫ್​ಎಸ್ ಅಧಿಕಾರಿ ದೇಬಾಶಿಶ್​ ಶರ್ಮಾ ಫೋಟೋ ಹಂಚಿಕೊಂಡಿದ್ದರು.  ಅಂದಹಾಗೇ, ಈ ಹಳದಿ ಆಮೆಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಭಾರತ, ನೇಪಾಳ ಮತ್ತು ಮಯನ್ಮಾರಗಳಲ್ಲಿ ಕಾಣಿಸಿಕೊಳ್ಳುತ್ತವೆ.  ಇದು ಆಮೆಗಳಲ್ಲಿ ಟೈರೋಸಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ಉಂಟಾಗುವ ಬಣ್ಣ ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವ ಬಾಲಕಿ; ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಫುಲ್ ಫಿದಾ

Published On - 4:48 pm, Tue, 26 April 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!