AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನೀವು ಹಳದಿ ಆಮೆಯನ್ನು ನೋಡಿದ್ದೀರಾ? ಒಡಿಶಾದಲ್ಲಿ ಪತ್ತೆಯಾದ ಈ ಅಪರೂಪದ ಆಮೆ ಸಖತ್ ಕ್ಯೂಟ್​ !

ಅಂದಹಾಗೇ, ಓಡಿಶಾದ ಬಾಲಾಸೋರ್​​ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್​ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು.

Video: ನೀವು ಹಳದಿ ಆಮೆಯನ್ನು ನೋಡಿದ್ದೀರಾ? ಒಡಿಶಾದಲ್ಲಿ ಪತ್ತೆಯಾದ ಈ ಅಪರೂಪದ ಆಮೆ ಸಖತ್ ಕ್ಯೂಟ್​ !
ಹಳದಿ ಬಣ್ಣದ ಆಮೆ
TV9 Web
| Edited By: |

Updated on:Apr 26, 2022 | 4:49 PM

Share

ಆಮೆ ಎಂದ ತಕ್ಷಣ ಅದು ನಿಧಾನವಾಗಿ ನಡೆಯುತ್ತದೆ ಎಂಬುದೇ ಮನಸಿಗೆ ಬರುತ್ತದೆ. ಸಾಮನ್ಯವಾಗಿ ಇವು ಮಣ್ಣಿನ ಬಣ್ಣ ಅಥವಾ ಪಾಚಿ ಬಣ್ಣದಲ್ಲಿ ಇರುತ್ತವೆ. ಅದರಲ್ಲೇ ಪುಟ್ಟ ಆಮೆಗಳಿಂದ, ದೊಡ್ಡ ಗಾತ್ರದ ಆಮೆಗಳವರೆಗೆ ಪ್ರಬೇಧಗಳು ಇವೆ. ಆದರೆ ಓಡಿಶಾದ ಸಿಮುಲಿಯಾ ಎಂಬ ಹಳ್ಳಿಯಲ್ಲಿ ಅತಿ ಅಪರೂಪವಾದ ಹಳದಿ ಬಣ್ಣದ ಆಮೆ ಪತ್ತೆಯಾಗಿದ್ದು, ಅದನ್ನೀಗ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಅಂದಹಾಗೆ, ಈ ಹಳದಿ ಬಣ್ಣದ ಆಮೆಗಳು ನೋಡಲು ಕ್ಯೂಟ್ ಆಗಿದ್ದು, ಪೂರ್ತಿ ಮೈ ಹಳದಿಯಾಗಿಯೇ ಇರುತ್ತದೆ. ಮತ್ತು ಅಪರೂಪದಲ್ಲೇ, ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ.

ಸಿಮುಲಿಯಾ ಹಳ್ಳಿಯಲ್ಲಿ ಪತ್ತೆಯಾದ ಆಮೆಯ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಸ್ಥಳೀಯರು ಒಂದು ಟಬ್​​ನಲ್ಲಿ ನೀರು ಹಾಕಿ ಅದರಲ್ಲಿಟ್ಟು ರಕ್ಷಿಸಿದ್ದರು. ಹಳದಿ ಆಮೆ ಪತ್ತೆಯಾಗಿದ್ದೇ ಆಗಿದ್ದು, ಅದನ್ನು ನೋಡಲು ನೂರಾರು ಜನರು ಮುಗಿಬಿದ್ದಿದ್ದರು.  ಒಡಿಶಾದ ಬಾಲಾಸೋರ್​​ನಲ್ಲಿರುವ ಸೋರೋ ಎಂಬ ಪ್ರದೇಶದಲ್ಲಿ ಕೊಳವೊಂದು ಇದೆ. ಆ ಕೊಳದಲ್ಲಿ ಮೊದಲು ಈ ಆಮೆ ಕಾಣಿಸಿಕೊಂಡಿತ್ತು. ಆದರೆ ಅಲ್ಲಿ ಹಾಗೇ ಇದ್ದರೆ ಅದಕ್ಕೆ ಅಪಾಯವಾಗಹಬಹುದು ಎಂದು, ಸ್ಥಳೀಯರು ಹಿಡಿದು ಟಬ್​​ನಲ್ಲಿ ಇಟ್ಟುಕೊಂಡು, ಅರಣ್ಯ ಇಲಾಖೆ ಅಧಿಕಾರಿಗಳು ಬರುವವರೆಗೂ ಕಾದಿದ್ದಾರೆ.

ಅಂದಹಾಗೇ, ಓಡಿಶಾದ ಬಾಲಾಸೋರ್​​ನಲ್ಲಿ ಹಳದಿ ಆಮೆ ಪತ್ತೆಯಾಗುತ್ತಿರುವುದು ಇದೇ ಮೊದಲೂ ಅಲ್ಲ. 2020ರ ಜುಲೈನಲ್ಲಿ ಇದೇ ಜಿಲ್ಲೆಯ ಸುಜನ್​ಪುರ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು. ಬಸುದೇವ್​ ಮಹಾಪಾತ್ರಾ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಳದಿ ಆಮೆಯನ್ನು ನೋಡಿ ಅಚ್ಚರಿಗೊಂಡು ಅದನ್ನು ಮನೆಗೆ ತಂದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಟ್ಟಿದ್ದರು.  ಅದಾದ ಮೇಲೆ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದಾಗಿ ಐಎಫ್​ಎಸ್ ಅಧಿಕಾರಿ ದೇಬಾಶಿಶ್​ ಶರ್ಮಾ ಫೋಟೋ ಹಂಚಿಕೊಂಡಿದ್ದರು.  ಅಂದಹಾಗೇ, ಈ ಹಳದಿ ಆಮೆಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಭಾರತ, ನೇಪಾಳ ಮತ್ತು ಮಯನ್ಮಾರಗಳಲ್ಲಿ ಕಾಣಿಸಿಕೊಳ್ಳುತ್ತವೆ.  ಇದು ಆಮೆಗಳಲ್ಲಿ ಟೈರೋಸಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ಉಂಟಾಗುವ ಬಣ್ಣ ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವ ಬಾಲಕಿ; ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಫುಲ್ ಫಿದಾ

Published On - 4:48 pm, Tue, 26 April 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್