ಆಧುನಿಕ ಕಾಲದಲ್ಲಿಯೂ ಆದಿವಾಸಿಗಳ ಪಾಡು ಹೀಗಿದೆ.. ಡೋಲಿಯಲ್ಲಿ ಸಾಗುವ ಜೀವನ ಚಿತ್ರಣ ನೋಡಿ

ಸಾಧು ಶ್ರೀನಾಥ್​

Updated on: May 16, 2024 | 4:06 PM

ಇಂದಿನ ಆಧುನಿಕ ಕಾಲದಲ್ಲೂ ದೂರದ ಕಾಡುಮೇಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾಡು ಮಕ್ಕಳಿಗೆ ಡೋಲಿ ಹೊರುವ (a makeshift stretcher -doli) ಹೀನಾಯ ದುಃಸ್ಥಿತಿಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೀವನಾವಶ್ಯಕ ತುರ್ತು ಸಂದರ್ಭದಲ್ಲಿ ಓಡಾಡಲು ರಸ್ತೆ, ವಾಹನಗಳು ಇಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

1 / 5
ಇಂದಿನ ಆಧುನಿಕ ಕಾಲದಲ್ಲೂ ದೂರದ ಕಾಡುಮೇಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾಡು ಮಕ್ಕಳಿಗೆ ಡೋಲಿ ಹೊರುವ ಹೀನಾಯ ದುಃಸ್ಥಿತಿಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೀವನಾವಶ್ಯಕ ತುರ್ತು ಸಂದರ್ಭದಲ್ಲಿ ಓಡಾಡಲು ರಸ್ತೆ, ವಾಹನಗಳು ಇಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇಂದಿನ ಆಧುನಿಕ ಕಾಲದಲ್ಲೂ ದೂರದ ಕಾಡುಮೇಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾಡು ಮಕ್ಕಳಿಗೆ ಡೋಲಿ ಹೊರುವ ಹೀನಾಯ ದುಃಸ್ಥಿತಿಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೀವನಾವಶ್ಯಕ ತುರ್ತು ಸಂದರ್ಭದಲ್ಲಿ ಓಡಾಡಲು ರಸ್ತೆ, ವಾಹನಗಳು ಇಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

2 / 5
ಇತ್ತೀಚೆಗೆ ಅಸ್ವಸ್ಥರಾದ ಆದಿವಾಸಿ ಮಹಿಳೆಯನ್ನು ಆರು ಕಿ. ಮೀ. ದೂರ ಹೀಗೆಯೇ ಡೋಲಿಯಲ್ಲಿ ಸಾಗಿಸಲಾಯಿತು. ಐತಿಹಾಸಿಕ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಕೊಯ್ಯೂರು ಮಂಡಲ (Koyyuru mandal) ಮೂಲಪೇಟ್​​​ ಪಂಚಾಯತ್ ಜಾಜುಲು ಬಂದ ಗ್ರಾಮಸ್ಥರ ಪಡಿಪಾಟಲು ಇದಾಗಿದೆ. ಬೆಟ್ಟದ ತುದಿಯಲ್ಲಿರುವ ಗ್ರಾಮದಲ್ಲಿ 29 ಕುಟುಂಬಗಳಿದ್ದು, ಅದರಲ್ಲಿ 140 ಜನರು ವಾಸವಿದ್ದಾರೆ

ಇತ್ತೀಚೆಗೆ ಅಸ್ವಸ್ಥರಾದ ಆದಿವಾಸಿ ಮಹಿಳೆಯನ್ನು ಆರು ಕಿ. ಮೀ. ದೂರ ಹೀಗೆಯೇ ಡೋಲಿಯಲ್ಲಿ ಸಾಗಿಸಲಾಯಿತು. ಐತಿಹಾಸಿಕ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಕೊಯ್ಯೂರು ಮಂಡಲ (Koyyuru mandal) ಮೂಲಪೇಟ್​​​ ಪಂಚಾಯತ್ ಜಾಜುಲು ಬಂದ ಗ್ರಾಮಸ್ಥರ ಪಡಿಪಾಟಲು ಇದಾಗಿದೆ. ಬೆಟ್ಟದ ತುದಿಯಲ್ಲಿರುವ ಗ್ರಾಮದಲ್ಲಿ 29 ಕುಟುಂಬಗಳಿದ್ದು, ಅದರಲ್ಲಿ 140 ಜನರು ವಾಸವಿದ್ದಾರೆ

3 / 5
ಇದರಿಂದ ಆಂ ಆದಿವಾಸಿ ಕಾಡು ಮಕ್ಕಳು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಮರ್ರಿ ಕಾವ್ಯ ಎಂಬ ಆದಿವಾಸಿ ಮಹಿಳೆ ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗ್ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು.

ಇದರಿಂದ ಆಂ ಆದಿವಾಸಿ ಕಾಡು ಮಕ್ಕಳು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಮರ್ರಿ ಕಾವ್ಯ ಎಂಬ ಆದಿವಾಸಿ ಮಹಿಳೆ ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗ್ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು.

4 / 5
ಆದರೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ ಮಹಿಳೆಯ ಕುಟುಂಬಸ್ಥರು ಗ್ರಾಮಸ್ಥರ ನೆರವು ಕೋರಿದ್ದಾರೆ. ಕಾವ್ಯಾ ರನ್ನು ಡೋಲಿನಲ್ಲಿ ಕೂಡಿಸಿಕೊಂಡು ಐದಾರು ಕಿ.ಮೀ. ದೂರದಲ್ಲಿರುವ ಅನಕಾಪಲ್ಲಿ ಜಿಲ್ಲೆಯ ರೋಲುಗುಂಟಾ ಮಂಡಲದ ಅರಳ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಆಂಬ್ಯುಲೆನ್ಸ್ ಸೌಲಭ್ಯ ಇಲ್ಲವೆಂದು ಕಾವ್ಯಾ ಪತಿ ಕಾಮೇಶ್ ತೀವ್ರ ದುಃಖ ವ್ಯಕ್ತಪಡಿಸಿದರು.

ಆದರೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ ಮಹಿಳೆಯ ಕುಟುಂಬಸ್ಥರು ಗ್ರಾಮಸ್ಥರ ನೆರವು ಕೋರಿದ್ದಾರೆ. ಕಾವ್ಯಾ ರನ್ನು ಡೋಲಿನಲ್ಲಿ ಕೂಡಿಸಿಕೊಂಡು ಐದಾರು ಕಿ.ಮೀ. ದೂರದಲ್ಲಿರುವ ಅನಕಾಪಲ್ಲಿ ಜಿಲ್ಲೆಯ ರೋಲುಗುಂಟಾ ಮಂಡಲದ ಅರಳ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಆಂಬ್ಯುಲೆನ್ಸ್ ಸೌಲಭ್ಯ ಇಲ್ಲವೆಂದು ಕಾವ್ಯಾ ಪತಿ ಕಾಮೇಶ್ ತೀವ್ರ ದುಃಖ ವ್ಯಕ್ತಪಡಿಸಿದರು.

5 / 5
ಅಲ್ಲಿಂದ ಕಾವ್ಯಾರನ್ನು ಬೂಚಿಂಪೇಟೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ತೊಟ್ಟಿಲಲ್ಲಿಯೇ (ಡೋಲಿ) ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ತಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಗೋವಿಂದ ರಾವ್ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಪೂರ್ಣ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಅಲ್ಲಿಂದ ಕಾವ್ಯಾರನ್ನು ಬೂಚಿಂಪೇಟೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ತೊಟ್ಟಿಲಲ್ಲಿಯೇ (ಡೋಲಿ) ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ತಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಗೋವಿಂದ ರಾವ್ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಪೂರ್ಣ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us