ನವರಾತ್ರಿ ಸಂಭ್ರಮ: ಜಗದಂಬಾಗೆ ನೋಟಿನ ಅಲಂಕಾರ: ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಕರೆನ್ಸಿಗಳಿಂದ ಸಿಂಗಾರ

Edited By:

Updated on: Oct 18, 2023 | 4:47 PM

ನವರಾತ್ರಿ ಪ್ರಯುಕ್ತ ಬಾಗಲಕೋಟೆ ‌ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜಗದಂಬಾ ದೇವಿ ದೇವಸ್ಥಾನದ ಗರ್ಭಗುಡಿಗೆ ನೋಟಿನಿಂದ ಕಲರ್ ಪುಲ್ ಅಲಂಕಾರ ಮಾಡಲಾಗಿದೆ. 20,50,100,200,500 ನೋಟುಗಳನ್ನು ಅಲಂಕಾರಕ್ಕೆ ಬಳಕೆ‌ ಮಾಡಿಕೊಳ್ಳಲಾಗಿದ್ದು, ನೋಟುಗಳಲ್ಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. ನವರಾತ್ರಿ ವಿಶೇಷವಾಗಿ ‌ಮಾಡಿದ ನೋಟಿನ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ.

1 / 5
ಈಗ ನಾಡಿನಾದ್ಯಂತ ನವರಾತ್ರಿ ಸಂಭ್ರಮ. ಎಲ್ಲ ಕಡೆ ವಿವಿಧ ರೀತಿಯ ಪೂಜೆ ಪುನಸ್ಕಾರ ನಡೆಯುತ್ತಿವೆ. ಆದರೆ ಅದೊಂದು ಪಟ್ಟಣದಲ್ಲಿ ದೇವಿಯ ಗರ್ಭಗುಡಿಗೆ ವಿಶೇಷವಾದ ಅಲಂಕಾರ‌ ಮಾಡಲಾಗಿದೆ.
ಅದು ಯಾವುದೇ ಹೂಗಳಿಂದಲ್ಲ ಇತರೆ ಪೂಜೆಯಿಂದಲ್ಲ. ಬದಲಾಗಿ ಹಣದ ನೋಟಿನಿಂದ. ಕರೆನ್ಸಿಯಲ್ಲಿ ಕಂಗೊಳಿಸುತ್ತಿರುವ ಅಲಂಕಾರ ಹೇಗಿದೆ ಮುಂದೆ ನೋಡಿ.

ಈಗ ನಾಡಿನಾದ್ಯಂತ ನವರಾತ್ರಿ ಸಂಭ್ರಮ. ಎಲ್ಲ ಕಡೆ ವಿವಿಧ ರೀತಿಯ ಪೂಜೆ ಪುನಸ್ಕಾರ ನಡೆಯುತ್ತಿವೆ. ಆದರೆ ಅದೊಂದು ಪಟ್ಟಣದಲ್ಲಿ ದೇವಿಯ ಗರ್ಭಗುಡಿಗೆ ವಿಶೇಷವಾದ ಅಲಂಕಾರ‌ ಮಾಡಲಾಗಿದೆ. ಅದು ಯಾವುದೇ ಹೂಗಳಿಂದಲ್ಲ ಇತರೆ ಪೂಜೆಯಿಂದಲ್ಲ. ಬದಲಾಗಿ ಹಣದ ನೋಟಿನಿಂದ. ಕರೆನ್ಸಿಯಲ್ಲಿ ಕಂಗೊಳಿಸುತ್ತಿರುವ ಅಲಂಕಾರ ಹೇಗಿದೆ ಮುಂದೆ ನೋಡಿ.

2 / 5
ಬಾಗಲಕೋಟೆ ‌ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜಗದಂಬಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಜಗದಂಬಾದೇವಿ ಗರ್ಭಗುಡಿಗೆ ನೋಟಿನಿಂದ ಕಲರ್ ಪುಲ್ ಅಲಂಕಾರ ಮಾಡಲಾಗಿದೆ.

ಬಾಗಲಕೋಟೆ ‌ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜಗದಂಬಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಜಗದಂಬಾದೇವಿ ಗರ್ಭಗುಡಿಗೆ ನೋಟಿನಿಂದ ಕಲರ್ ಪುಲ್ ಅಲಂಕಾರ ಮಾಡಲಾಗಿದೆ.

3 / 5
20,50,100,200,500 ನೋಟುಗಳನ್ನು ಅಲಂಕಾರಕ್ಕೆ ಬಳಕೆ‌ ಮಾಡಿಕೊಳ್ಳಲಾಗಿದೆ. ನೋಟುಗಳಲ್ಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. 
ನವರಾತ್ರಿ ವಿಶೇಷವಾಗಿ ‌ಮಾಡಿದ ನೋಟಿನ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ.

20,50,100,200,500 ನೋಟುಗಳನ್ನು ಅಲಂಕಾರಕ್ಕೆ ಬಳಕೆ‌ ಮಾಡಿಕೊಳ್ಳಲಾಗಿದೆ. ನೋಟುಗಳಲ್ಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. ನವರಾತ್ರಿ ವಿಶೇಷವಾಗಿ ‌ಮಾಡಿದ ನೋಟಿನ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ.

4 / 5
ಭಕ್ತರು ಜಗದಂಬಾ ದೇವಿಗೆ ಹಣದಿಂದ ಅಲಂಕಾರ ಮಾಡಲು ತಮ್ಮ ಶಕ್ತಿಯಾನುಸಾರ ಹಣವನ್ನು ನೀಡಿದ್ದಾರೆ. ಭಕ್ತರು ಟ್ರಸ್ಟ್​ನ ಹಣದಿಂದ ಈ ರೀತಿ ದೇವಿಗೆ ಅಲಂಕಾರ ಮಾಡಿ
ಅಷ್ಟೈಶ್ವರ್ಯ ನೀಡು ತಾಯಿ ಎಂದು ಭಕ್ತರು ಬೇಡಿಕೊಂಡಿದ್ದಾರೆ.

ಭಕ್ತರು ಜಗದಂಬಾ ದೇವಿಗೆ ಹಣದಿಂದ ಅಲಂಕಾರ ಮಾಡಲು ತಮ್ಮ ಶಕ್ತಿಯಾನುಸಾರ ಹಣವನ್ನು ನೀಡಿದ್ದಾರೆ. ಭಕ್ತರು ಟ್ರಸ್ಟ್​ನ ಹಣದಿಂದ ಈ ರೀತಿ ದೇವಿಗೆ ಅಲಂಕಾರ ಮಾಡಿ ಅಷ್ಟೈಶ್ವರ್ಯ ನೀಡು ತಾಯಿ ಎಂದು ಭಕ್ತರು ಬೇಡಿಕೊಂಡಿದ್ದಾರೆ.

5 / 5
ಎರಡು ದಿನದಲ್ಲಿ ನೋಟಿನ ಅಲಂಕಾರ ಮಾಡಿದ್ದು, ಬರೋಬ್ಬರಿ ಎಂಟುವರೆ ಲಕ್ಷ ಮೌಲ್ಯದ ನೋಟುಗಳನ್ನು ಬಳಸಿಕೊಳ್ಳಲಾಗಿದೆ. ನೋಟುಗಳ ಅಲಂಕಾರದ ಮೂಲಕ ಭಕ್ತರು ತಮ್ಮ ನವರಾತ್ರಿ ಭಕ್ತಿಯನ್ನು ತೋರ್ಪಡಿಸಿದ್ದು ಹೀಗೆ.

ಎರಡು ದಿನದಲ್ಲಿ ನೋಟಿನ ಅಲಂಕಾರ ಮಾಡಿದ್ದು, ಬರೋಬ್ಬರಿ ಎಂಟುವರೆ ಲಕ್ಷ ಮೌಲ್ಯದ ನೋಟುಗಳನ್ನು ಬಳಸಿಕೊಳ್ಳಲಾಗಿದೆ. ನೋಟುಗಳ ಅಲಂಕಾರದ ಮೂಲಕ ಭಕ್ತರು ತಮ್ಮ ನವರಾತ್ರಿ ಭಕ್ತಿಯನ್ನು ತೋರ್ಪಡಿಸಿದ್ದು ಹೀಗೆ.

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us