ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ವರುಣನ ಎಂಟ್ರಿಯಾಗುತ್ತಿದೆ. ಸಂಜೆಯಾದರೆ ಸಾಕು ಧೋ ಅಂತಾ ಸುರಿಯುವ ಮಳೆಗೆ ಜನರು ಹೈರಾಣಾಗಿದ್ದಾರೆ. ಇದೀಗ ರಾತ್ರಿಯಾಗುತ್ತಿದ್ದಂತೆ ನಗರದಲ್ಲಿ ಗುಡುಗು ಸಹಿತ ಮತ್ತೆ ಧಾರಾಕಾರ ಮಳೆ ಆರಂಭವಾಗಿದೆ.
ಚಾಮರಾಜಪೇಟೆ, ಸಂಪಂಗಿರಾಮನಗರ, ಟೌನ್ ಹಾಲ್, ಲಾಲ್ ಬಾಗ್, ರಿಚ್ಮಂಡ್ ರಸ್ತೆ, ಜಯನಗರ, ಬನಶಂಕರಿ ಮತ್ತು ಕಾರ್ಪೋರೇಷನ್ ಸುತ್ತಮುತ್ತ ಧಾರಾಕಾರ ಮಳೆ ಆಗಿದೆ. ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.
ರಾಜಾಜಿನಗರ ಸುತ್ತಮುತ್ತ ವರುಣಾರ್ಭಟ ಜೋರಾಗಿದ್ದು, ಮಳೆಗೆ ರಸ್ತೆಗಳು ಹೊಳೆಯಂತಾಗಿವೆ. ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸಂಚಾರ ಮಾಡುವ ಪರಿಸ್ಥತಿ ನಿರ್ಮಾಣವಾಗಿದೆ.
ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯ ನೀರಿನಲ್ಲಿ ಕಾರು, ಆಟೋ, ಬೈಕ್ಗಳು ಮುಳುಗಿವೆ.
ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯ ನೀರಿನಲ್ಲಿ ಕಾರು, ಆಟೋ, ಬೈಕ್ಗಳು ಮುಳುಗಿವೆ.
ಅತ್ತ ಸರ್ಜಾಪುರ ರಸ್ತೆಯಲ್ಲಿ ಇಡೀ ರಸ್ತೆ ಜಲಾವೃತವಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Published On - 9:17 pm, Sat, 5 October 24