Kannada News Photo gallery Bidar Veerabhadreswara Fair Men's Wrestling Tournament People flock ed to watch rural sports Bidar news in kannada
ಬೀದರ್: ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಜಗಜಟ್ಟಿಗಳ ಸೆಣಸಾಟ, ಮುಗಿಲು ಮುಟ್ಟಿದ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ
Bidar: ವೀರಭದ್ರೇಶ್ವರ ಜಾತ್ರೆಯಲ್ಲಿ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು. ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ ಜನರು ಕುಸ್ತಿ ಅಖಾಡದತ್ತ ಆಗಮಿಸಿ ಪಂದ್ಯಾವಳಿ ವೀಕ್ಷಿಸಿದರು.
Bidar Veerabhadreswara Fair Men's Wrestling Tournament People flock ed to watch rural sports Bidar news in kannada
1 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada
2 / 7
ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ ಜನರು ಕುಸ್ತಿ ಅಖಾಡದತ್ತ ಆಗಮಿಸಿ ಪಂದ್ಯಾವಳಿ ವೀಕ್ಷಿಸಿದರು. ಕಣ್ಣು ಹಾಯಿಸಿದಷ್ಟು ದೂರಕ್ಕೆ ಜನರು ನೆರೆದಿದ್ದರು. ಇನ್ನೂ ಈ ಕುಸ್ತಿ ಪಂದ್ಯಾವಳಿಯಲ್ಲಿ 100 ರೂ.ನಿಂದ 10 ಸಾವಿರ ರೂಪಾಯಿವರೆಗೆ ಬಹುಮಾನವನ್ನ ಇಟ್ಟಿದ್ದರು.
3 / 7
ನಾವೇನು ಕಮ್ಮಿ ಇಲ್ಲ ಎಂದು ಹೇಳುತ್ತಾ ಸಣ್ಣ ಮಕ್ಕಳು ಕೂಡ ಅಂಕಣಕ್ಕೆ ಇಳಿದು ಕುಸ್ತಿ ಆಡಿದರು. ಆರಂಭಿಕ ಪಂದ್ಯದಲ್ಲಿ ಭಾರಿ ಸೆಣೆಸಾಟ ನಡೆಸಿದ ಕುಸ್ತಿ ಕುಸ್ತಿಪಟುಗಳನ್ನ ನೋಡಿದ ಪ್ರೇಕ್ಷಕರು ಕುಸ್ತಿಪ್ರೇಮಿಗಳು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸಿದರು. ಹಲವು ಕುಸ್ತಿ ಪಟುಗಳು ಅನಿರೀಕ್ಷಿತ ಫಲಿತಾಂಶ ನೀಡುವ ಮೂಲಕ ನೆರದಿದ್ದವರನ್ನು ಚಕಿತಗೊಳಿಸಿದರು.
4 / 7
ಈ ಕುಸ್ತಿ ಪಂದ್ಯಾವಳಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 40ವರ್ಷ ವಯಸ್ಸಿನವರೆಗಿನ ಕುಸ್ತಿ ಪಟುಗಳು ಭಾಗವಹಿ ತಮ್ಮ ಸಾಮರ್ಥ್ಯವನ್ನ ಪ್ರದರ್ಶಿಸಿದರು. ಬೆಳಗಾವಿ, ಕೊಲ್ಲಾಪುರ, ಸಾಂಗ್ಲಿ, ಹರಪನಹಳ್ಳಿ, ದಾವಣಗೆರೆ, ಹೊಸಪೇಟೆ, ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.
5 / 7
ಪ್ರತಿ ವರ್ಷದಂತೆ ಈ ವರ್ಷ ಕೂಡ ಇಲ್ಲಿ ನೂರಾರು ಪಟುಗಳು ಬಂದಿದ್ದು ಅದರಲ್ಲಿ ಮಹರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕುಸ್ತಿ ಆಡಲು ಪಟುಗಳು ಬಂದು ತಕ್ಕ ಸಾಮರ್ಥ್ಯ ಪಟುವನ್ನ ಆಯ್ಕೆ ಮಾಡಿಕೊಂಡು ಕುಸ್ತಿಗೆ ಇಳಿಯುತ್ತಾರೆ. ಇಲ್ಲಿ ಹಣ ನೀಡುತ್ತಾರೆ ಎಂಬುದಕ್ಕಿಂತ ಕುಸ್ತಿ ಆಡಿ ತಮ್ಮ ಸಾಮರ್ಥ್ಯ ತೊರಿಸುತ್ತಾರೆ ಅಂತಾ ಆಯೋಜಕರು ಹೇಳುತ್ತಿದ್ದಾರೆ.
6 / 7
ಈ ಭಾರಿ ಕುಸ್ತಿಯಲ್ಲಿ ಈ ಬಾರಿ ವಿಶೇಷ ಆಕರ್ಷಣೆ ಎಂದರೆ ಬೆಳ್ಳಿಯ ಕಡ್ಗವನ್ನ ಬಹುಮಾನವಾಗಿ ಇಟ್ಟಿದ್ದರು. ಹೀಗಾಗಿ ಘಟಾನುಘಟಿ ಕುಸ್ತಿಯ ಪಟುಗಳು ಆಗಮಿಸಿದ್ದರಿಂದ ಜನರು ಕಣ್ಣು ಪೀಳುಕಿಸದೆ ಕುಸ್ತಿಯನ್ನ ನೋಡಿದರು. ಅದರಂತೆ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿದ ಕುಸ್ತಿಪಟು ಪವನ್ ಬೆಳ್ಳಿ ಖಡ್ಗ ಗೆದ್ದುಕೊಂಡರು. (ವರದಿ: ಸುರೇಶ್ ನಾಯಕ್, ಟಿವಿ9 ಬೀದರ್)