ಚಿಕ್ಕಬಳ್ಳಾಪುರ: ನಂದಿ ನೋಡಲು ಬಂದವರು, ಒಂಟಿ ಕಾಲಲ್ಲಿ ನಿಂತು ಯೋಗ-ಭಕ್ತಿ ಭಾವದಿಂದ ಆದಿಯೋಗಿ ಶಿವನ ಕಣ್ತುಂಬಿಕೊಂಡರು! ಚಿತ್ರಗಳಿವೆ ನೋಡಿ

Edited By: ಸಾಧು ಶ್ರೀನಾಥ್​

Updated on: Jan 23, 2023 | 4:33 PM

Adiyogi statue: ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ.  ಈ ಕುರಿತು ಒಂದು ವರದಿ.

1 / 14
ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.

ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.

2 / 14

ಆದಿಯೋಗಿ ವಿಗ್ರಹ ನೋಡಲು ಮುಗಿಬಿದ್ದಿದ್ದಾರೆ. ಆದಿಯೋಗಿ ಸ್ಥಳದಲ್ಲಿ ಒಂದೆಡೆ ಭಕ್ತಿಯ ಪರಾಕಷ್ಠೆಯಾದ್ರೆ... ಮತ್ತೊಂದೆಡೆ ಎಲ್ಲೆಲ್ಲಿ ನೋಡಿದರೂ ಜನ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ ಸಾಮಾನ್ಯವಾಗಿದೆ. (ವರದಿ-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

3 / 14

ಬೃಹತ್ ಶಿವನ ವಿಗ್ರಹದ ಮುಂದೆ ನಿಂತು ಕೆಲವರು ಒಂಟಿ ಕಾಲಲ್ಲಿ ಯೋಗ, ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಿದರು...

4 / 14

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

5 / 14

ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್ ನ ನೂತನ ಆಶ್ರಮದಲ್ಲಿ.

6 / 14

ವೀಕೆಂಡ್ ರಜೆಯಾದ ಕಾರಣ ಶನಿವಾರ-ಭಾನುವಾರ ರಾಜಧಾನಿ ಬೆಂಗಳೂರಿನ ಜನ, ಸಾವಿರಾರು ಕಾರುಗಳಲ್ಲಿ ಆಶ್ರಮಕ್ಕೆ ಆಗಮಿಸಿ ಆದಿಯೋಗಿ ಶಿವನ ಸನ್ನಿಧಿಯಲ್ಲಿ ಒಂದು ದಿನ ಕಳೆದ್ರು.

7 / 14

ತಮಿಳುನಾಡಿನ ಕೊಯಮತ್ತೂರು ಬಳಿ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ... ಎಲ್ಲಿಯೂ 112 ಅಡಿಗಳ ಶಿವನ ವಿಗ್ರಹ ಇಲ್ಲ. ಇದ್ರಿಂದ ಶಿವನ ಭಕ್ತರು ಶಿವನನ್ನು ನೋಡಿ ಕಣ್ತುಂಬಿಕೊಳ್ತಿದ್ದ ದೃಶ್ಯಗಳು ಕಂಡು ಬಂತು.

8 / 14

ವಾರಾಂತ್ಯ ಸಂಜೆ 7 ಗಂಟೆ ಸಮಯದಲ್ಲಿ ಶಿವನ ವಿಗ್ರಹದ ಮೇಲೆ ಲೇಸರ್ ಶೋ ನಡೆಯುತ್ತೆ ಎಂಬುದನ್ನು ಅರಿತು ಸಾವಿರಾರು ಜನ ಮಧ್ಯಾಹ್ನದಿಂದ ಸಂಜೆವರೆಗೂ ಕಾದು ಕುಳಿತಿದ್ರು. ಆದ್ರೆ ತಾಂತ್ರಿಕ ಅಡಚಣೆಯಿಂದ ಲೇಸರ್ ಶೋ ರದ್ದು ಮಾಡಿರುವ ಕಾರಣ ಜನ ನಿರಾಸೆಯಿಂದ ವಾಪಸ್ ಮರಳುವಂತಾಯಿತು.

9 / 14

ವಿಕೆಂಡ್ ನಲ್ಲಿ ನಂದಿಗಿರಿಧಾಮ ಪ್ರವಾಸಕ್ಕೆ ಬರ್ತಿರುವ ರಾಜಧಾನಿ ಬೆಂಗಳೂರಿನ ಜನ...

10 / 14

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

11 / 14

ನಂದಿಗಿರಿಧಾಮ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ಬಳಿ ಆಗಮಿಸ್ತಿದ್ದಾರೆ.

12 / 14

ಆದ್ರೆ ಆಶ್ರಮ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಯಾವುದೆ ಮೂಲಭೌತ ಸೌಕರ್ಯಗಳು ಇಲ್ಲ.

13 / 14

14 / 14

ಇದ್ರಿಂದ ಆದಿಯೋಗಿ ಬಳಿ ಹೋಗುವವರು ಊಟ ತಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಹೋದರೆ ಕೆಲ ಹೊತ್ತು ಕಾಲ ಕಳೆಯಬಹುದು.

Published On - 12:58 pm, Mon, 23 January 23

Loading...
Unable to load recommendations.
Follow Us