AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Avesh Khan: ಅಂದು ನಡೆದ ಘಟನೆಗೆ ಇಂದು ಕ್ಷಮೆ ಕೇಳಿದ ಆವೇಶ್ ಖಾನ್

IPL 2023: ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು.

Vinay Bhat
|

Updated on: Jun 19, 2023 | 9:17 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡು ಸುಮಾರು 20 ದಿನಗಳು ಕಳೆದಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈಗ ಎಲ್ಲ ಆಟಗಾರರು ತಮ್ಮ ತಮ್ಮ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡು ಸುಮಾರು 20 ದಿನಗಳು ಕಳೆದಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈಗ ಎಲ್ಲ ಆಟಗಾರರು ತಮ್ಮ ತಮ್ಮ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ.

1 / 8
ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು.

ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು.

2 / 8
ಇದೀಗ ಹೆಲ್ಮೆಟ್ ಎಸೆದ ಘಟನೆಯ ಬಗ್ಗೆ ಮಾತನಾಡಿರುವ ಲಖನೌ ಸೂಪರ್ ಜೇಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಕ್ಷಮೆಯಾಚಿಸಿದ್ದಾರೆ. ಅಂದು ನಾನು ಆರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಇದೀಗ ಹೆಲ್ಮೆಟ್ ಎಸೆದ ಘಟನೆಯ ಬಗ್ಗೆ ಮಾತನಾಡಿರುವ ಲಖನೌ ಸೂಪರ್ ಜೇಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಕ್ಷಮೆಯಾಚಿಸಿದ್ದಾರೆ. ಅಂದು ನಾನು ಆರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ.

3 / 8
ಅಂದು ಆ ಘಟನೆ ನಡೆದ ಬಳಿಕ ಜನರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ದೂಷಿಸುತ್ತಿದ್ದರು. ನಾನು ಆರೀತಿ ಮಾಡಬಾರದಿತ್ತು ಎಂದು ನಂತರ ಅರಿತುಕೊಂಡೆ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ಇದರಿಂದ ನನಗೆ ಈಗ ಬೇಸರವಾಗಿದೆ ಎಂದು ಆವೇಶ್ ಖಾನ್ ಹೇಳಿದ್ದಾರೆ.

ಅಂದು ಆ ಘಟನೆ ನಡೆದ ಬಳಿಕ ಜನರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ದೂಷಿಸುತ್ತಿದ್ದರು. ನಾನು ಆರೀತಿ ಮಾಡಬಾರದಿತ್ತು ಎಂದು ನಂತರ ಅರಿತುಕೊಂಡೆ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ಇದರಿಂದ ನನಗೆ ಈಗ ಬೇಸರವಾಗಿದೆ ಎಂದು ಆವೇಶ್ ಖಾನ್ ಹೇಳಿದ್ದಾರೆ.

4 / 8
ಇದೇವೇಳೆ ಅವೇಶ್ ಖಾನ್ ಅವರ ಹಿಂದಿನ ಎರಡು ಸೀಸನ್‌ಗಳಿಗೆ ಹೋಲಿಸಿದರೆ, 2023 ರ ಐಪಿಎಲ್ ಸೀಸನ್ ನನಗೆ ಅಷ್ಟು ಯಶಸ್ವಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಋತುವಿನಲ್ಲಿ ಆವೇಶ್ 9 ಪಂದ್ಯಗಳಿಂದ ಕೇವಲ 8 ವಿಕೆಟ್​ಗಳನ್ನಷ್ಟೆ ಪಡೆದುಕೊಂಡಿದ್ದರು.

ಇದೇವೇಳೆ ಅವೇಶ್ ಖಾನ್ ಅವರ ಹಿಂದಿನ ಎರಡು ಸೀಸನ್‌ಗಳಿಗೆ ಹೋಲಿಸಿದರೆ, 2023 ರ ಐಪಿಎಲ್ ಸೀಸನ್ ನನಗೆ ಅಷ್ಟು ಯಶಸ್ವಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಋತುವಿನಲ್ಲಿ ಆವೇಶ್ 9 ಪಂದ್ಯಗಳಿಂದ ಕೇವಲ 8 ವಿಕೆಟ್​ಗಳನ್ನಷ್ಟೆ ಪಡೆದುಕೊಂಡಿದ್ದರು.

5 / 8
ನನ್ನ ಹಿಂದಿನ ಎರಡು ಐಪಿಎಲ್ ಸೀಸನ್‌ಗಳನ್ನು ನೀವು ಹೋಲಿಕೆ ಮಾಡಿದರೆ, ಅದು ನಾನು ಬಯಸಿದ ರೀತಿಯಲ್ಲಿ ನಡೆಯಿತು. ಆದರೆ ಈ ಋತುವು ನಾನು ಅಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರೂ 10 ಕ್ಕಿಂತ ಕಡಿಮೆ ರನ್​ರೇಟ್ ಬರುವ ರೀತಿ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಹಿಂದಿನ ಎರಡು ಐಪಿಎಲ್ ಸೀಸನ್‌ಗಳನ್ನು ನೀವು ಹೋಲಿಕೆ ಮಾಡಿದರೆ, ಅದು ನಾನು ಬಯಸಿದ ರೀತಿಯಲ್ಲಿ ನಡೆಯಿತು. ಆದರೆ ಈ ಋತುವು ನಾನು ಅಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರೂ 10 ಕ್ಕಿಂತ ಕಡಿಮೆ ರನ್​ರೇಟ್ ಬರುವ ರೀತಿ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

6 / 8
ಏಪ್ರಿಲ್ 10 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ರೋಚಕತೆಯಿಂದ ಕೂಡಿತ್ತು. ಇದರಲ್ಲಿ ಎಲ್​ಎಸ್​ಜಿ 1 ವಿಕೆಟ್​ಗಳ ಜಯ ಸಾಧಿಸಿತ್ತು.

ಏಪ್ರಿಲ್ 10 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ರೋಚಕತೆಯಿಂದ ಕೂಡಿತ್ತು. ಇದರಲ್ಲಿ ಎಲ್​ಎಸ್​ಜಿ 1 ವಿಕೆಟ್​ಗಳ ಜಯ ಸಾಧಿಸಿತ್ತು.

7 / 8
ಕೊನೆಯ ಎಸೆತದಲ್ಲಿ ಲಖನೌ ಗೆಲುವಿಗೆ ಒಂದು ರನ್ ಬೇಕಿತ್ತು. ಸ್ಟ್ರೈಕ್​ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್​ಗೆ ತಾಗದೆ ಕೀಪರ್ ಸೈರಿತು. ಬೈಸ್ ಮೂಲಕ ಓಡಿ ಆವೇಶ್ ಒಂದು ರನ್ ಕಲೆಹಾಕಿ ತಂದುಕೊಟ್ಟರು. ಈ ಸಂದರ್ಭ ಆವೇಶ್ ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಅನ್ನು ಕೈಯಿಂದ ತೆಗೆದು ಮೈದಾನದ ಕೆಳಕ್ಕೆ ಜೋರಾಗಿ ಎಸೆದಿದ್ದರು. ಇದಕ್ಕಾಗಿ ದಂಡ ಕೂಡ ಪಾವತಿಸಿದ್ದರು.

ಕೊನೆಯ ಎಸೆತದಲ್ಲಿ ಲಖನೌ ಗೆಲುವಿಗೆ ಒಂದು ರನ್ ಬೇಕಿತ್ತು. ಸ್ಟ್ರೈಕ್​ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್​ಗೆ ತಾಗದೆ ಕೀಪರ್ ಸೈರಿತು. ಬೈಸ್ ಮೂಲಕ ಓಡಿ ಆವೇಶ್ ಒಂದು ರನ್ ಕಲೆಹಾಕಿ ತಂದುಕೊಟ್ಟರು. ಈ ಸಂದರ್ಭ ಆವೇಶ್ ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಅನ್ನು ಕೈಯಿಂದ ತೆಗೆದು ಮೈದಾನದ ಕೆಳಕ್ಕೆ ಜೋರಾಗಿ ಎಸೆದಿದ್ದರು. ಇದಕ್ಕಾಗಿ ದಂಡ ಕೂಡ ಪಾವತಿಸಿದ್ದರು.

8 / 8
Follow us
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?