AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anil Kumble Family Tree: ಅನಿಲ್ ಕುಂಬ್ಳೆ ಫ್ಯಾಮಿಲಿ ಟ್ರೀ: ಅನಿಲ್ ಕುಂಬ್ಳೆ ಕುಟುಂಬದಲ್ಲಿ ಯಾರು ಯಾರು ಇದ್ದಾರೆ ಗೊತ್ತೇ?

Anil Kumble family tree: ಇಂದು ಭಾರತದ ಮಾಜಿ ಕ್ರಿಕೆಟಿಗ, ಕೋಚ್ ಹಾಗೂ ಕಾಮೆಂಟೇಟರ್ ಅನಿಲ್ ಕುಂಬ್ಳೆ ಅವರ 53ನೇ ಹುಟ್ಟುಹಬ್ಬ. 17 ಅಕ್ಟೋಬರ್ 1970 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದ ಇವರ ತಂದೆಯ ಹೆಸರು ಶ್ರೀ ಕೃಷ್ಣ ಸ್ವಾಮಿ ಮತ್ತು ತಾಯಿಯ ಹೆಸರು ಶ್ರೀಮತಿ ಸರೋಜ. ಇವರ ಹೆಂಡತಿಯ ಹೆಸರು ಚೇತನ ರಾಮತೀರ್ಥ. ಕುಂಬ್ಳೆ ಅವರಿಗೆ ಒಬ್ಬ ಮಗ ಮಾಯಾ ಮತ್ತು ಇಬ್ಬರು ಹೆಣ್ಣುಮಕ್ಕಳ ಹೆಸರು ಅರುಣಿ ಮತ್ತು ಸ್ವಸ್ತಿ.

Vinay Bhat
|

Updated on: Oct 17, 2023 | 12:14 PM

Share
ಅನಿಲ್ ಕುಂಬ್ಳೆ ಅವರಿಗೆ ಇಂದು (ಅ. 17) 53ನೇ ಹುಟ್ಟುಹಬ್ಬದ ಸಂಭ್ರಮ. 17 ಅಕ್ಟೋಬರ್ 1970 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶ್ರೀ ಕೃಷ್ಣ ಸ್ವಾಮಿ ಮತ್ತು ತಾಯಿ ಶ್ರೀಮತಿ ಸರೋಜ. ಕುಂಬ್ಳೆ ಅವರ ಫ್ಯಾನ್ಸ್ ಬಳಗ ದೊಡ್ಡದಿದೆ. ಇವರ ಅಭಿಮಾನಿಗಳ ಪಟ್ಟಿಯಲ್ಲಿ ಹುಡುಗಿಯರು ಕೂಡ ಇದ್ದರು.

ಅನಿಲ್ ಕುಂಬ್ಳೆ ಅವರಿಗೆ ಇಂದು (ಅ. 17) 53ನೇ ಹುಟ್ಟುಹಬ್ಬದ ಸಂಭ್ರಮ. 17 ಅಕ್ಟೋಬರ್ 1970 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶ್ರೀ ಕೃಷ್ಣ ಸ್ವಾಮಿ ಮತ್ತು ತಾಯಿ ಶ್ರೀಮತಿ ಸರೋಜ. ಕುಂಬ್ಳೆ ಅವರ ಫ್ಯಾನ್ಸ್ ಬಳಗ ದೊಡ್ಡದಿದೆ. ಇವರ ಅಭಿಮಾನಿಗಳ ಪಟ್ಟಿಯಲ್ಲಿ ಹುಡುಗಿಯರು ಕೂಡ ಇದ್ದರು.

1 / 6
ಭಾರತೀಯ ಕ್ರಿಕೆಟ್‌ನಲ್ಲಿ 'ಜಂಬೋ' ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಮ್ಮೆಯೂ ವಿವಾದದಲ್ಲಿ ಸಿಲುಕಿಕೊಳ್ಳಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕುಂಬ್ಳೆ ನಾಯಕ ಹಾಗೂ ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ, ಟೀಮ್ ಇಂಡಿಯಾ ನಾಯಕನೂ ಆಗಿದ್ದರು. ನಿವೃತ್ತಿಯ ನಂತರ ಅವರು ಭಾರತ ತಂಡದ ಕೋಚ್‌ ಜವಾಬ್ದಾರಿಯನ್ನೂ ಹೊತ್ತಿದ್ದರು.

ಭಾರತೀಯ ಕ್ರಿಕೆಟ್‌ನಲ್ಲಿ 'ಜಂಬೋ' ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಮ್ಮೆಯೂ ವಿವಾದದಲ್ಲಿ ಸಿಲುಕಿಕೊಳ್ಳಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕುಂಬ್ಳೆ ನಾಯಕ ಹಾಗೂ ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ, ಟೀಮ್ ಇಂಡಿಯಾ ನಾಯಕನೂ ಆಗಿದ್ದರು. ನಿವೃತ್ತಿಯ ನಂತರ ಅವರು ಭಾರತ ತಂಡದ ಕೋಚ್‌ ಜವಾಬ್ದಾರಿಯನ್ನೂ ಹೊತ್ತಿದ್ದರು.

2 / 6
ಅನಿಲ್ ಕುಂಬ್ಳೆ ಅವರ ಮಡದಿಯ ಹೆಸರು ಚೇತನಾ ರಾಮತೀರ್ಥ. ಚೇತನಾ ಅವರಿಗೆ ಇದು ಎರಡನೇ ಮದುವೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಭೇಟಿಯಾದರು. ಆ ಸಮಯದಲ್ಲಿ ಚೇತನಾ ಮದುವೆಯಾಗಿದ್ದರು. ಆದರೆ ಸಂತೋಷವಾಗಿರಲಿಲ್ಲ.

ಅನಿಲ್ ಕುಂಬ್ಳೆ ಅವರ ಮಡದಿಯ ಹೆಸರು ಚೇತನಾ ರಾಮತೀರ್ಥ. ಚೇತನಾ ಅವರಿಗೆ ಇದು ಎರಡನೇ ಮದುವೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಭೇಟಿಯಾದರು. ಆ ಸಮಯದಲ್ಲಿ ಚೇತನಾ ಮದುವೆಯಾಗಿದ್ದರು. ಆದರೆ ಸಂತೋಷವಾಗಿರಲಿಲ್ಲ.

3 / 6
1986 ರಲ್ಲಿ ಚೇತನಾ ಅವರು ಮೈಸೂರಿನಲ್ಲಿ ಸ್ಟೋರ್ ಬ್ರೋಕರ್ ಅವರನ್ನು ವಿವಾಹವಾಗಿದ್ದರು. ಆದಾಗ್ಯೂ, ಇವರಿಬ್ಬರ ನಡುವೆ ಸರಿಯಾದ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಗಂಡನಿಂದ ದೂರವಾಗಿ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮದುವೆಯಿಂದ ಚೇತನಾ ಅವರಿಗೆ ಮಗಳೂ ಇದ್ದರು. ಬಳಿಕ 1998ರಲ್ಲಿ ಕುಂಬ್ಳೆ ಬೆಂಬಲದೊಂದಿಗೆ ಚೇತನಾ ತನ್ನ ಪತಿಯಿಂದ ಬೇರ್ಪಟ್ಟರು.

1986 ರಲ್ಲಿ ಚೇತನಾ ಅವರು ಮೈಸೂರಿನಲ್ಲಿ ಸ್ಟೋರ್ ಬ್ರೋಕರ್ ಅವರನ್ನು ವಿವಾಹವಾಗಿದ್ದರು. ಆದಾಗ್ಯೂ, ಇವರಿಬ್ಬರ ನಡುವೆ ಸರಿಯಾದ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಗಂಡನಿಂದ ದೂರವಾಗಿ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮದುವೆಯಿಂದ ಚೇತನಾ ಅವರಿಗೆ ಮಗಳೂ ಇದ್ದರು. ಬಳಿಕ 1998ರಲ್ಲಿ ಕುಂಬ್ಳೆ ಬೆಂಬಲದೊಂದಿಗೆ ಚೇತನಾ ತನ್ನ ಪತಿಯಿಂದ ಬೇರ್ಪಟ್ಟರು.

4 / 6
ಚೇತನಾ-ಕುಂಬ್ಳೆ 1999 ರಲ್ಲಿ ವಿವಾಹವಾದರು. ಆದರೆ, ಚೇತನಾ ತನ್ನ ಮಗಳನ್ನು ತನ್ನೊಂದಿಗೆ ಇರಲು ಬಯಸಿದ್ದರು. ಇದಕ್ಕೆ ಕುಂಬ್ಳೆ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಮೊದಲ ಪತಿ ಇದಕ್ಕೆ ಒಪ್ಪೊರಲಿಲ್ಲ. ಬಳಿಕ ಕಾನೂನು ಹೋರಾಟ ನಡೆಸಿ ಕುಂಬ್ಳೆ-ಚೇತನಾ ಅವರಿಗೆ ನ್ಯಾಯ ಸಿಕ್ಕಿತು.

ಚೇತನಾ-ಕುಂಬ್ಳೆ 1999 ರಲ್ಲಿ ವಿವಾಹವಾದರು. ಆದರೆ, ಚೇತನಾ ತನ್ನ ಮಗಳನ್ನು ತನ್ನೊಂದಿಗೆ ಇರಲು ಬಯಸಿದ್ದರು. ಇದಕ್ಕೆ ಕುಂಬ್ಳೆ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಮೊದಲ ಪತಿ ಇದಕ್ಕೆ ಒಪ್ಪೊರಲಿಲ್ಲ. ಬಳಿಕ ಕಾನೂನು ಹೋರಾಟ ನಡೆಸಿ ಕುಂಬ್ಳೆ-ಚೇತನಾ ಅವರಿಗೆ ನ್ಯಾಯ ಸಿಕ್ಕಿತು.

5 / 6
ಕುಂಬ್ಳೆ-ಚೇತನಾ ಅವರು ಈಗ ಅರುಣಿ, ಮಾಯಾ ಮತ್ತು ಸ್ವಸ್ತಿ ಎಂಬ ಮೂವರು ಮಕ್ಕಳ ಜೊತೆ ಖುಷಿಯಾಗಿದ್ದಾರೆ. ಅನಿಲ್ ಕುಂಬ್ಳೆ ಮೂವರೂ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕುಂಬ್ಳೆ-ಚೇತನಾ ಅವರು ಈಗ ಅರುಣಿ, ಮಾಯಾ ಮತ್ತು ಸ್ವಸ್ತಿ ಎಂಬ ಮೂವರು ಮಕ್ಕಳ ಜೊತೆ ಖುಷಿಯಾಗಿದ್ದಾರೆ. ಅನಿಲ್ ಕುಂಬ್ಳೆ ಮೂವರೂ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ