IND vs AUS: 3 ಜೀವದಾನ ನೀಡಿ ಕೆಟ್ಟ ಗಿಲ್ ಪಡೆ..! ಟೀಂ ಇಂಡಿಯಾ ಸೋಲಿಗೆ ಇದುವೇ ಕಾರಣ

Updated on: Oct 23, 2025 | 7:39 PM

India vs Australia ODI: ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. 17 ವರ್ಷಗಳ ನಂತರ ಈ ಮೈದಾನದಲ್ಲಿ ಭಾರತ ಸೋಲು ಕಂಡಿದೆ. ಕಳಪೆ ಫೀಲ್ಡಿಂಗ್, ವಿಶೇಷವಾಗಿ ಮ್ಯಾಥ್ಯೂ ಶಾರ್ಟ್‌ಗೆ ಮೂರು ಜೀವದಾನ ನೀಡಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣ. ಅಕ್ಷರ್ ಪಟೇಲ್, ಸಿರಾಜ್ ಕೈಚೆಲ್ಲಿದ ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು, ಇದರಿಂದ ಭಾರತ ಸರಣಿಯನ್ನು ಕಳೆದುಕೊಂಡಿತು.

1 / 6
ಅಡಿಲೇಡ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿದೆ. ಈ ಮೂಲಕ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದು ಮಾತ್ರವಲ್ಲದೆ ಬರೋಬ್ಬರಿ 17 ವರ್ಷಗಳ ಬಳಿಕ ಅಡಿಲೇಡ್‌ ಮೈದಾನದಲ್ಲಿ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಗಿಲ್ ಪಡೆಯ ಸೋಲಿಗೆ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣ ಎನ್ನಬಹುದು.

ಅಡಿಲೇಡ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿದೆ. ಈ ಮೂಲಕ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದು ಮಾತ್ರವಲ್ಲದೆ ಬರೋಬ್ಬರಿ 17 ವರ್ಷಗಳ ಬಳಿಕ ಅಡಿಲೇಡ್‌ ಮೈದಾನದಲ್ಲಿ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಗಿಲ್ ಪಡೆಯ ಸೋಲಿಗೆ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣ ಎನ್ನಬಹುದು.

2 / 6

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಮೂವರನ್ನು ಬಿಟ್ಟು ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಈ ಕಾರಣದಿಂದಾಗಿ ಕೇವಲ 264 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೂ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಆದರೆ ಟೀಂ ಇಂಡಿಯಾ ಫಿಲ್ಡಿಂಗ್​ನಲ್ಲಿ ಮಾಡಿದ ಈ ಮೂರು ತಪ್ಪುಗಳು ತುಂಬಾ ದುಬಾರಿಯಾದವು.

3 / 6

ಮೊದಲಿಗೆ ಆಸ್ಟ್ರೇಲಿಯಾದ ಈ ಗೆಲುವಿನ ಕ್ರೆಡಿಟ್ ಮ್ಯಾಥ್ಯೂ ಶಾರ್ಟ್‌ಗೆ ಸಲ್ಲಬೇಕು. ಇದರ ಜೊತೆಗೆ ಅವರಿಗೆ ಮೂರು ಮೂರು ಜೀವದಾನ ನೀಡಿದ ಟೀಂ ಇಂಡಿಯಾ ಫಿಲ್ಡರ್​ಗಳಿಗೂ ಸಲ್ಲಬೇಕು. ವಾಸ್ತವವಾಗಿ ಆಸೀಸ್ ಇನ್ನಿಂಗ್ಸ್​ನ 16 ನೇ ಓವರ್‌ನಲ್ಲಿ, ನಿತೀಶ್ ರೆಡ್ಡಿ ಬೌಲಿಂಗ್‌ನಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಶಾರ್ಟ್ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು. ಆ ಸಮಯದಲ್ಲಿ ಶಾರ್ಟ್ 24 ರನ್‌ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ವೇಳೆ ಅಕ್ಷರ್ ಆ ಕ್ಯಾಚ್ ತೆಗೆದುಕೊಂಡಿದ್ದರೆ, ಪಂದ್ಯ ಭಾರತದತ್ತ ವಾಲುತ್ತಿತ್ತು.

4 / 6

ಮ್ಯಾಥ್ಯೂ ಶಾರ್ಟ್‌ಗೆ ಅಕ್ಷರ್ ಪಟೇಲ್ ಮಾತ್ರವಲ್ಲ, ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಜೀವದಾನ ನೀಡಿದರು. ಇನ್ನಿಂಗ್ಸ್​ನ 29 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಶಾರ್ಟ್‌ಗೆ ಜೀವದಾನ ನೀಡಿದರು. ಸುಂದರ್ ಬೌಲಿಂಗ್‌ನಲ್ಲಿ ಶಾರ್ಟ್​ ನೀಡಿದ ಸರಳ ಕ್ಯಾಚ್ ಅನ್ನು ಪಾಯಿಂಟ್‌ನಲ್ಲಿ ನಿಂತಿದ್ದ ಸಿರಾಜ್ ಕೈಚೆಲ್ಲಿದರು. ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿತು.

5 / 6

ಒಂದು ಹಂತದಲ್ಲಿ ಶಾರ್ಟ್ ಅವರನ್ನು ಔಟ್ ಮಾಡುವ ಅವಕಾಶವಿತ್ತು. ಮ್ಯಾಟ್ ರೆನ್‌ಶಾ ಮತ್ತು ಶಾರ್ಟ್ ನಡುವೆ ಸಂವಹನದ ಕೊರತೆಯಿಂದಾಗಿ ರನೌಟ್ ಮಾಡುವ ಅವಕಾಶವಿತ್ತು. ಆದರೆ ಕೆ.ಎಲ್. ರಾಹುಲ್ ಸ್ಟ್ರೈಕರ್‌ನ ತುದಿಯಲ್ಲಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ಇದರ ಪರಿಣಾಮವಾಗಿ ಶಾರ್ಟ್‌ಗೆ ಜೀವದಾನ ದೊರೆಯಿತು.

6 / 6

ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು ಮೂರು ಕ್ಯಾಚ್‌ಗಳು ಮತ್ತು ಒಂದು ರನ್-ಔಟ್ ಅನ್ನು ಕೈಬಿಟ್ಟಿತು, ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ಫೀಲ್ಡಿಂಗ್ ಉತ್ತಮವಾಗಿರುತ್ತಿದ್ದರೆ, ಫಲಿತಾಂಶ ಭಾರತದ ಪರವಾಗಿ ಬರುತ್ತಿತ್ತು.

Loading...
Unable to load recommendations.
Follow Us