BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್
IND vs SA: ಒಂದೇ ಒಂದು ಅರ್ಧಶತಕವಿಲ್ಲದೆ ವರ್ಷ ಮುಗಿಸಿದ ಸೂರ್ಯಕುಮಾರ್
Suryakumar Yadav's T20 Form: ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವು ತಂಡಕ್ಕೆ ಆತಂಕ ಮೂಡಿಸಿದೆ. ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದರೂ, ಬ್ಯಾಟಿಂಗ್ನಲ್ಲಿ ಈ ವರ್ಷ ಒಂದೂ ಅರ್ಧಶತಕ ಗಳಿಸಿಲ್ಲ. ಅವರ ಕಡಿಮೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಟಿ20 ವಿಶ್ವಕಪ್ಗೆ ಮುನ್ನ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಫಾರ್ಮ್ಗೆ ಮರಳುವ ಅನಿವಾರ್ಯತೆ ಇದೆ.
- pruthvi Shankar
- Updated on: Dec 19, 2025
- 10:47 pm
IND vs SA: 1000, 8000..! ಟಿ20 ಕ್ರಿಕೆಟ್ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಶೋ
Sanju Samson 1000 T20I runs: ಶುಭ್ಮನ್ ಗಿಲ್ ಗಾಯದಿಂದಾಗಿ ಸಂಜು ಸ್ಯಾಮ್ಸನ್ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಅವಕಾಶ ದೊರೆಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಂಜು, ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 1000 ಅಂತರರಾಷ್ಟ್ರೀಯ T20 ರನ್ಗಳು ಹಾಗೂ ಒಟ್ಟಾರೆ 8000 T20 ರನ್ಗಳ ಗಡಿ ದಾಟಿದರು.
- pruthvi Shankar
- Updated on: Dec 19, 2025
- 8:11 pm
24 ಗಂಟೆಗಳೊಳಗೆ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ಅಧಿಕೃತ ಮಾಹಿತಿ
Team India for 2026 T20 World Cup: 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಪಂದ್ಯಾವಳಿಗೆ ಭಾರತ ತಂಡವನ್ನು ಡಿಸೆಂಬರ್ 20 ರಂದು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಅದೇ ದಿನ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗೂ ತಂಡವನ್ನು ಆಯ್ಕೆ ಮಾಡಲಾಗುವುದು. ಸೂರ್ಯಕುಮಾರ್ ಯಾದವ್ ಮತ್ತು ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
- pruthvi Shankar
- Updated on: Dec 19, 2025
- 7:35 pm
SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್
Syed Mushtaq Ali Trophy: ಜಾರ್ಖಂಡ್ ಕ್ರಿಕೆಟ್ ತಂಡವು ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದೆ. ಫೈನಲ್ನಲ್ಲಿ ಹರಿಯಾಣವನ್ನು 69 ರನ್ಗಳಿಂದ ಸೋಲಿಸಿತು. ಇಶಾನ್ ಕಿಶನ್ ಕೇವಲ 45 ಎಸೆತಗಳಲ್ಲಿ 101 ರನ್ ಗಳಿಸಿ ತಂಡಕ್ಕೆ 262 ರನ್ಗಳ ದಾಖಲೆಯ ಮೊತ್ತವನ್ನು ತಲುಪಲು ಸಹಾಯ ಮಾಡಿದರು. ಅನುಕುಲ್ ರಾಯ್ ಅವರ ಆಲ್ರೌಂಡ್ ಪ್ರದರ್ಶನವೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಜಾರ್ಖಂಡ್ನ ಈ ಐತಿಹಾಸಿಕ ಗೆಲುವು ದೇಶೀಯ ಕ್ರಿಕೆಟ್ನಲ್ಲಿ ದೊಡ್ಡ ಮೈಲಿಗಲ್ಲು.
- pruthvi Shankar
- Updated on: Dec 19, 2025
- 3:11 pm
IND vs SA: ಟಾಸ್ ಕೂಡ ನಡೆಯದೆ 4ನೇ ಟಿ20 ಪಂದ್ಯ ರದ್ದು; ಟಿಕೆಟ್ ಖರೀದಿಸಿದವರ ಕಥೆ ಏನು?
India vs SA 4th T20 Cancelled: ಲಕ್ನೋದಲ್ಲಿ ಭಾರತ vs ದಕ್ಷಿಣ ಆಫ್ರಿಕಾ 4ನೇ T20 ಪಂದ್ಯ ದಟ್ಟ ಮಂಜಿನಿಂದ ರದ್ದಾಗಿದೆ. ಈ ಕಾರಣದಿಂದಾಗಿ, ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿ ಕುರಿತು ಪ್ರಶ್ನೆ ಮೂಡಿತ್ತು. ಬಿಸಿಸಿಐ ನಿಯಮದಂತೆ, ಒಂದೇ ಒಂದು ಚೆಂಡು ಎಸೆಯದೆ ಪಂದ್ಯ ರದ್ದಾದರೆ, ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮರುಪಾವತಿ ಮಾಡಲಾಗುತ್ತದೆ. ಅಂದರೆ ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿಯಾಗಲಿದೆ.
- pruthvi Shankar
- Updated on: Dec 18, 2025
- 2:06 pm
IPL 2026: ‘ನನಗೆ ಹೊಸ ಜೀವನ ಸಿಕ್ಕಿದೆ’; ಸಿಎಸ್ಕೆಗೆ ಧನ್ಯವಾದ ತಿಳಿಸಿದ ಸರ್ಫರಾಜ್ ಖಾನ್
Sarfaraz Khan IPL Comeback: ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ನಿರಾಸೆಗೊಂಡಿದ್ದ ಸರ್ಫರಾಜ್ ಖಾನ್ಗೆ ಐಪಿಎಲ್ ಹರಾಜಿನಲ್ಲಿ ಆರಂಭದಲ್ಲಿ ಆಘಾತ ಎದುರಾಗಿತ್ತು. ಆದರೆ, ಅಂತಿಮವಾಗಿ ಸಿಎಸ್ಕೆ ಫ್ರಾಂಚೈಸಿ ಅವರನ್ನು ಖರೀದಿಸುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಎರಡು ವರ್ಷಗಳ ನಂತರ ಸರ್ಫರಾಜ್ ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ. ತಮ್ಮ ಕಮ್ಬ್ಯಾಕ್ಗೆ ಸಿಎಸ್ಕೆ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
- pruthvi Shankar
- Updated on: Dec 18, 2025
- 7:57 am
Vijay Hazare Trophy: ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್ ಎಂಟ್ರಿ; 16 ಸದಸ್ಯರ ತಂಡ ಪ್ರಕಟ
Karnataka Vijay Hazare Squad 2025-26: ವಿಜಯ್ ಹಜಾರೆ ಟ್ರೋಫಿ 2025-26ಕ್ಕಾಗಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಯಾಂಕ್ ಅಗರ್ವಾಲ್ ನಾಯಕರಾಗಿದ್ದು, ಕೆಎಲ್ ರಾಹುಲ್, ಕರುಣ್ ನಾಯರ್ ತಂಡಕ್ಕೆ ಬಲ ತುಂಬಿದ್ದಾರೆ. ಬಿಸಿಸಿಐ ನಿಯಮದಂತೆ ರಾಹುಲ್ ದೇಶಿ ಟೂರ್ನಿಯಲ್ಲಿ ಆಡಲಿದ್ದಾರೆ. 5 ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ, ಈ ಬಾರಿಯೂ ಗೆಲುವಿನ ಫೇವರಿಟ್ ಎನಿಸಿದೆ.
- pruthvi Shankar
- Updated on: Dec 17, 2025
- 9:28 pm
IPL 2026: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ; ಚಿನ್ನಸ್ವಾಮಿಯಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯ
IPL 2026 Opening Ceremony: ಜೂನ್ 4ರ ದುರ್ಘಟನೆಯ ಬಳಿಕ ಸ್ಥಗಿತಗೊಂಡಿದ್ದ ಬೆಂಗಳೂರು ಕ್ರಿಕೆಟ್ಗೆ ಶುಭ ಸುದ್ದಿ ಸಿಕ್ಕಿದೆ. ವೆಂಕಟೇಶ್ ಪ್ರಸಾದ್ ಕೆಎಸ್ಸಿಎ ಅಧ್ಯಕ್ಷರಾದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡಿವೆ. 2026ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಬಿಸಿಸಿಐ ಆಸಕ್ತಿ ತೋರಿಸಿದೆ. ಅಂತರರಾಷ್ಟ್ರೀಯ ಪಂದ್ಯಗಳೂ ನಡೆಯಲಿವೆ. ರಾಜ್ಯ ಸರ್ಕಾರದ ಜೊತೆ ಸಭೆ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
- pruthvi Shankar
- Updated on: Dec 17, 2025
- 8:01 pm
IPL vs PSL: ಐಪಿಎಲ್ನಲ್ಲಿ ಬಂಪರ್ ಬೆಲೆ; ಪಾಕ್ ಕ್ರಿಕೆಟ್ ಲೀಗ್ಗೆ ಕೈಕೊಟ್ಟ 11 ಆಟಗಾರರು
IPL vs PSL: 19ನೇ ಐಪಿಎಲ್ ಮಿನಿ ಹರಾಜಿನಲ್ಲಿ 77 ಆಟಗಾರರು ತಂಡ ಸೇರಿದರು. ಮಾರ್ಚ್ 26 ರಿಂದ ಐಪಿಎಲ್ ಆರಂಭ. ಪಿಎಸ್ಎಲ್ ಕೂಡ ಅದೇ ಸಮಯದಲ್ಲಿ ನಡೆಯುವುದರಿಂದ, 11 ಪಿಎಸ್ಎಲ್ ಆಟಗಾರರು ಐಪಿಎಲ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಪಿಎಸ್ಎಲ್ಗೆ ನಷ್ಟವಾಗಿದ್ದು, ಐಪಿಎಲ್ನತ್ತ ಆಟಗಾರರ ಒಲವು ಸ್ಪಷ್ಟವಾಗಿದೆ. ಹರಾಜಾದ ಆಟಗಾರರು ಪಿಎಸ್ಎಲ್ನಲ್ಲಿ ಆಡುವುದಿಲ್ಲ.
- pruthvi Shankar
- Updated on: Dec 17, 2025
- 4:26 pm
IPL 2026 Auction: ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ? ಇಲ್ಲಿದೆ ವಿವರ
IPL 2026 Auction Sold Players list: ಐಪಿಎಲ್ 2026 ಮಿನಿ ಹರಾಜು ಮುಗಿದಿದ್ದು, ಎಲ್ಲಾ 10 ಫ್ರಾಂಚೈಸಿಗಳ 77 ಸ್ಥಾನಗಳು ಭರ್ತಿಯಾಗಿ 25 ಆಟಗಾರರ ತಂಡಗಳು ಪೂರ್ಣಗೊಂಡಿವೆ. ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ ಸೇರಿದರು, ಯಾವ ತಂಡಗಳು ಯಾರನ್ನು ಖರೀದಿಸಿದವು, ಹಾಗೂ ಹರಾಜಿನಲ್ಲಿ ಅಧಿಕ ಮೊತ್ತ ಪಡೆದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ.
- pruthvi Shankar
- Updated on: Dec 16, 2025
- 10:07 pm
RCB IPL Auction 2026: ಮಿನಿ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ 8 ಆಟಗಾರರು ಇವರೇ..
Royal Challengers Bengaluru Auction Players : 2026ರ ಐಪಿಎಲ್ ಮಿನಿ ಹರಾಜಿನಲ್ಲಿ 16.40 ಕೋಟಿ ರೂ. ಪರ್ಸ್ ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಆಟಗಾರರನ್ನು ಖರೀದಿಸಿದೆ. ವೆಂಕಟೇಶ್ ಅಯ್ಯರ್ 7 ಕೋಟಿ ರೂ.ಗೆ ಸೇರ್ಪಡೆಯಾದರೆ, ಮಂಗೇಶ್ ಯಾದವ್ 5.2 ಕೋಟಿ ರೂ.ಗೆ ಖರೀದಿಯಾಗಿದ್ದಾರೆ. 6 ಭಾರತೀಯ ಮತ್ತು 2 ವಿದೇಶಿ ಆಟಗಾರರನ್ನು ಸೇರಿಸಿಕೊಂಡಿರುವ ಆರ್ಸಿಬಿ, ತಮ್ಮ ತಂಡವನ್ನು ಬಲಪಡಿಸಿಕೊಂಡಿದೆ. ಈ ಹೊಸ ಸೇರ್ಪಡೆಗಳು ತಂಡಕ್ಕೆ ಹೊಸ ಹುರುಪು ನೀಡಲಿವೆ.
- pruthvi Shankar
- Updated on: Dec 16, 2025
- 9:43 pm
IPL Auction 2026: ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದ ಲಿವಿಂಗ್ಸ್ಟೋನ್ಗೆ 13 ಕೋಟಿ ಕೊಟ್ಟ ಕಾವ್ಯಾ
Liam Livingstone IPL 2026: ಇಂಗ್ಲೆಂಡ್ನ ಸ್ಫೋಟಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಐಪಿಎಲ್ 2026 ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂ.ಗೆ ಖರೀದಿಸಿದೆ. ಆರ್ಸಿಬಿಯಲ್ಲಿ ವೈಫಲ್ಯ ಕಂಡಿದ್ದರೂ, ಅವರ ಆಲ್ ರೌಂಡರ್ ಸಾಮರ್ಥ್ಯ (ಬ್ಯಾಟಿಂಗ್, ಬೌಲಿಂಗ್, ಮ್ಯಾಚ್ ಫಿನಿಷರ್) ಅವರನ್ನು ದುಬಾರಿ ಆಟಗಾರನನ್ನಾಗಿಸಿದೆ. ಎರಡನೇ ಸುತ್ತಿನಲ್ಲಿ ಹಲವು ತಂಡಗಳ ಪೈಪೋಟಿಯ ಬಳಿಕ ಎಸ್ಆರ್ಹೆಚ್ ಅವರನ್ನು ಪಡೆಯಿತು.
- pruthvi Shankar
- Updated on: Dec 16, 2025
- 8:50 pm