AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI

BCCI

BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್​ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್​ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್​

ಇನ್ನೂ ಹೆಚ್ಚು ಓದಿ

ಬಿಸಿಸಿಐ ಐತಿಹಾಸಿಕ ನಿರ್ಧಾರ; ವರ್ಷಾಂತ್ಯದಲ್ಲಿ ಮಹಿಳಾ ಆಟಗಾರ್ತಿಯರಿಗೆ ಭರ್ಜರಿ ಗಿಫ್ಟ್

BCCI Hikes Women's Domestic Match Fees: ಭಾರತ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ವಿಜಯದ ನಂತರ, ಬಿಸಿಸಿಐ ದೇಶೀಯ ಮಹಿಳಾ ಕ್ರಿಕೆಟಿಗರಿಗೆ ಮಹತ್ವದ ನಿರ್ಧಾರ ಘೋಷಿಸಿದೆ. ಪುರುಷ ಕ್ರಿಕೆಟಿಗರಂತೆ ಮಹಿಳೆಯರಿಗೂ ಸಮಾನ ಪಂದ್ಯ ಶುಲ್ಕ ನಿಗದಿಪಡಿಸಲಾಗಿದೆ. ಹಿರಿಯ ಆಟಗಾರ್ತಿಯರಿಗೆ ಪ್ರತಿ ಪಂದ್ಯಕ್ಕೆ 50,000 ರೂ, ಜೂನಿಯರ್ ಮಟ್ಟದಲ್ಲಿ 25,000 ರೂ. ಶುಲ್ಕ ದೊರೆಯಲಿದೆ. ಇದು ದೇಶೀಯ ಕ್ರಿಕೆಟ್‌ನಲ್ಲಿ ಸಮಾನತೆಯನ್ನು ತಂದಿದ್ದು, ಅಂಪೈರ್‌ಗಳ ಶುಲ್ಕವೂ ಹೆಚ್ಚಿದೆ.

ಆರನೇ ಸ್ಥಾನಕ್ಕೆ ಕುಸಿದಿರುವ ಭಾರತ WTC ಫೈನಲ್ ತಲುಪುವುದು ಹೇಗೆ?

Team India WTC Final 2025-27: 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾದ ಹಾದಿ ಕಠಿಣವಾಗಿದೆ. ಪ್ರಸ್ತುತ 6ನೇ ಸ್ಥಾನದಲ್ಲಿರುವ ಭಾರತ, ಫೈನಲ್ ತಲುಪಲು ಉಳಿದ 9 ಪಂದ್ಯಗಳಲ್ಲಿ ಕನಿಷ್ಠ 7 ಗೆಲ್ಲಬೇಕು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧದ ಮುಂಬರುವ ಸರಣಿಗಳು ನಿರ್ಣಾಯಕವಾಗಿವೆ. ಈ ಲೇಖನವು ಟೀಂ ಇಂಡಿಯಾ ಎದುರಿಸುತ್ತಿರುವ ಸವಾಲುಗಳು ಮತ್ತು WTC ಫೈನಲ್ ತಲುಪಲು ಅಗತ್ಯವಿರುವ ಗೆಲುವಿನ ಮಾರ್ಗಸೂಚಿಗಳನ್ನು ವಿವರಿಸುತ್ತದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ರೋಹಿತ್, ಕೊಹ್ಲಿ ದಾಖಲೆ ಹೇಗಿದೆ?

Vijay Hazare Trophy: ವಿಜಯ್ ಹಜಾರೆ ಟ್ರೋಫಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಹು ವರ್ಷಗಳ ನಂತರ ಮರಳುತ್ತಿದ್ದಾರೆ. ರೋಹಿತ್ 18 ಪಂದ್ಯಗಳಲ್ಲಿ 581 ರನ್ ಗಳಿಸಿದ್ದರೆ, ಕೊಹ್ಲಿ 13 ಪಂದ್ಯಗಳಲ್ಲಿ 819 ರನ್ ಗಳಿಸಿದ್ದಾರೆ. ಇಬ್ಬರೂ ತಲಾ ಒಂದು ಶತಕ ಗಳಿಸಿದ್ದಾರೆ. ದೆಹಲಿ ಮತ್ತು ಮುಂಬೈ ತಂಡಗಳನ್ನು ಪ್ರತಿನಿಧಿಸುವ ಇವರು ಈ ಟೂರ್ನಿಯಲ್ಲಿ ಕೆಲವು ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಅಭಿಷೇಕ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಶುಭ್​ಮನ್ ಗಿಲ್

Shubman Gill: ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ ಶುಭ್​ಮನ್ ಗಿಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ಪರ ಆಡಲಿದ್ದಾರೆ. ಫಾರ್ಮ್ ಮರುಗಳಿಕೆಗೆ ಇದೊಂದು ಸುವರ್ಣಾವಕಾಶವಾಗಿದ್ದು, ಗಿಲ್ ಎಲ್ಲಾ ಲೀಗ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಪಂಜಾಬ್ ತಂಡವು ಅಭಿಷೇಕ್ ಶರ್ಮಾ ಮತ್ತು ಅರ್ಷದೀಪ್ ಸಿಂಗ್ ಅವರನ್ನೂ ಒಳಗೊಂಡಿದೆ. ಬಿಸಿಸಿಐ ನಿರ್ದೇಶನದಂತೆ ಗಿಲ್ ಆಡಲಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಿದ್ಧರಾಗಿದ್ದಾರೆ.

ಎರಡೆರಡು ವಿಶ್ವಕಪ್‌; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು

ICC World Cup 2026: 2026ರ ICC ವಿಶ್ವಕಪ್‌ಗಳಿಗೆ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕರ ಫಾರ್ಮ್ ದೊಡ್ಡ ಸಮಸ್ಯೆಯಾಗಿದೆ. ಹಿರಿಯ ತಂಡದ ಸೂರ್ಯಕುಮಾರ್ ಯಾದವ್ ಮತ್ತು ಅಂಡರ್-19 ತಂಡದ ಆಯುಷ್ ಮ್ಹಾತ್ರೆ ಇಬ್ಬರೂ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಆಯುಷ್ ಕಳಪೆ ಪ್ರದರ್ಶನ ನೀಡಿದ್ದರೆ, ಸೂರ್ಯಕುಮಾರ್ ಕೂಡ ರನ್ ಗಳಿಸಲು ವಿಫಲರಾಗಿದ್ದಾರೆ. ವಿಶ್ವಕಪ್‌ಗಳಲ್ಲಿ ಭಾರತದ ಪ್ರಶಸ್ತಿ ಆಕಾಂಕ್ಷೆಗಳಿಗೆ ಇದು ಗಂಭೀರ ಕಾಳಜಿಯಾಗಿದೆ.

ಆರ್​ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ

2026 T20 World Cup India squad: 2026ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಜಿತ್ ಅಗರ್ಕರ್ ಸಮಿತಿ ಆಯ್ಕೆ ಮಾಡಿದ 15 ಸದಸ್ಯರ ತಂಡದಲ್ಲಿ ಮುಂಬೈ ಇಂಡಿಯನ್ಸ್‌ನ 4 ಆಟಗಾರರು ಸೇರಿದಂತೆ ಏಳು ಐಪಿಎಲ್ ತಂಡಗಳ ಆಟಗಾರರಿಗೆ ಸ್ಥಾನ ಸಿಕ್ಕಿದೆ. ಆದರೆ, ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಂದ ಒಬ್ಬರೂ ಆಯ್ಕೆಯಾಗಿಲ್ಲ. ಈ ಬಾರಿ ಭಾರತವೇ ಚಾಂಪಿಯನ್ ಆಗುವ ವಿಶ್ವಾಸವಿದೆ.

IND vs SA: ಒಂದೇ ಒಂದು ಅರ್ಧಶತಕವಿಲ್ಲದೆ ವರ್ಷ ಮುಗಿಸಿದ ಸೂರ್ಯಕುಮಾರ್

Suryakumar Yadav's T20 Form: ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವು ತಂಡಕ್ಕೆ ಆತಂಕ ಮೂಡಿಸಿದೆ. ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದರೂ, ಬ್ಯಾಟಿಂಗ್‌ನಲ್ಲಿ ಈ ವರ್ಷ ಒಂದೂ ಅರ್ಧಶತಕ ಗಳಿಸಿಲ್ಲ. ಅವರ ಕಡಿಮೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಟಿ20 ವಿಶ್ವಕಪ್‌ಗೆ ಮುನ್ನ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅನಿವಾರ್ಯತೆ ಇದೆ.

IND vs SA: 1000, 8000..! ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಶೋ

Sanju Samson 1000 T20I runs: ಶುಭ್​ಮನ್ ಗಿಲ್ ಗಾಯದಿಂದಾಗಿ ಸಂಜು ಸ್ಯಾಮ್ಸನ್​ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಅವಕಾಶ ದೊರೆಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಂಜು, ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 1000 ಅಂತರರಾಷ್ಟ್ರೀಯ T20 ರನ್​ಗಳು ಹಾಗೂ ಒಟ್ಟಾರೆ 8000 T20 ರನ್‌ಗಳ ಗಡಿ ದಾಟಿದರು.

24 ಗಂಟೆಗಳೊಳಗೆ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ಅಧಿಕೃತ ಮಾಹಿತಿ

Team India for 2026 T20 World Cup: 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಪಂದ್ಯಾವಳಿಗೆ ಭಾರತ ತಂಡವನ್ನು ಡಿಸೆಂಬರ್ 20 ರಂದು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಅದೇ ದಿನ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗೂ ತಂಡವನ್ನು ಆಯ್ಕೆ ಮಾಡಲಾಗುವುದು. ಸೂರ್ಯಕುಮಾರ್ ಯಾದವ್ ಮತ್ತು ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್

Syed Mushtaq Ali Trophy: ಜಾರ್ಖಂಡ್ ಕ್ರಿಕೆಟ್ ತಂಡವು ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದೆ. ಫೈನಲ್‌ನಲ್ಲಿ ಹರಿಯಾಣವನ್ನು 69 ರನ್‌ಗಳಿಂದ ಸೋಲಿಸಿತು. ಇಶಾನ್ ಕಿಶನ್ ಕೇವಲ 45 ಎಸೆತಗಳಲ್ಲಿ 101 ರನ್ ಗಳಿಸಿ ತಂಡಕ್ಕೆ 262 ರನ್‌ಗಳ ದಾಖಲೆಯ ಮೊತ್ತವನ್ನು ತಲುಪಲು ಸಹಾಯ ಮಾಡಿದರು. ಅನುಕುಲ್ ರಾಯ್ ಅವರ ಆಲ್‌ರೌಂಡ್ ಪ್ರದರ್ಶನವೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಜಾರ್ಖಂಡ್‌ನ ಈ ಐತಿಹಾಸಿಕ ಗೆಲುವು ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಮೈಲಿಗಲ್ಲು.

IND vs SA: ಟಾಸ್ ಕೂಡ ನಡೆಯದೆ 4ನೇ ಟಿ20 ಪಂದ್ಯ ರದ್ದು; ಟಿಕೆಟ್ ಖರೀದಿಸಿದವರ ಕಥೆ ಏನು?

India vs SA 4th T20 Cancelled: ಲಕ್ನೋದಲ್ಲಿ ಭಾರತ vs ದಕ್ಷಿಣ ಆಫ್ರಿಕಾ 4ನೇ T20 ಪಂದ್ಯ ದಟ್ಟ ಮಂಜಿನಿಂದ ರದ್ದಾಗಿದೆ. ಈ ಕಾರಣದಿಂದಾಗಿ, ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿ ಕುರಿತು ಪ್ರಶ್ನೆ ಮೂಡಿತ್ತು. ಬಿಸಿಸಿಐ ನಿಯಮದಂತೆ, ಒಂದೇ ಒಂದು ಚೆಂಡು ಎಸೆಯದೆ ಪಂದ್ಯ ರದ್ದಾದರೆ, ಟಿಕೆಟ್ ಬುಕಿಂಗ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮರುಪಾವತಿ ಮಾಡಲಾಗುತ್ತದೆ. ಅಂದರೆ ಅಭಿಮಾನಿಗಳಿಗೆ ಟಿಕೆಟ್ ಹಣ ಮರುಪಾವತಿಯಾಗಲಿದೆ.

IPL 2026: ‘ನನಗೆ ಹೊಸ ಜೀವನ ಸಿಕ್ಕಿದೆ’; ಸಿಎಸ್​ಕೆಗೆ ಧನ್ಯವಾದ ತಿಳಿಸಿದ ಸರ್ಫರಾಜ್ ಖಾನ್

Sarfaraz Khan IPL Comeback: ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ನಿರಾಸೆಗೊಂಡಿದ್ದ ಸರ್ಫರಾಜ್ ಖಾನ್‌ಗೆ ಐಪಿಎಲ್ ಹರಾಜಿನಲ್ಲಿ ಆರಂಭದಲ್ಲಿ ಆಘಾತ ಎದುರಾಗಿತ್ತು. ಆದರೆ, ಅಂತಿಮವಾಗಿ ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಖರೀದಿಸುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಎರಡು ವರ್ಷಗಳ ನಂತರ ಸರ್ಫರಾಜ್ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ತಮ್ಮ ಕಮ್‌ಬ್ಯಾಕ್‌ಗೆ ಸಿಎಸ್‌ಕೆ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.