BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್
SMAT 2025: ವೈಭವ್ ಎದುರು ಸೋತ ಅರ್ಜುನ್; ಆದರೂ ಬಿಹಾರ ವಿರುದ್ಧ ಗೆದ್ದ ಗೋವಾ
Syed Mushtaq Ali Trophy 2025: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ರಲ್ಲಿ ಬಿಹಾರ ಮತ್ತು ಗೋವಾ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಅರ್ಜುನ್ ತೆಂಡೂಲ್ಕರ್ ಮುಖಾಮುಖಿಯಾದರು. ವೈಭವ್ ಅರ್ಜುನ್ ಬೌಲಿಂಗ್ನಲ್ಲಿ ಮಿಂಚಿ, 25 ಎಸೆತಗಳಲ್ಲಿ 46 ರನ್ ಗಳಿಸಿದರು. ಅರ್ಜುನ್ 2 ವಿಕೆಟ್ ಪಡೆದರೂ ಬ್ಯಾಟಿಂಗ್ನಲ್ಲಿ ವಿಫಲರಾದರು. ಗೋವಾ ಈ ರೋಚಕ ಪಂದ್ಯದಲ್ಲಿ ಬಿಹಾರವನ್ನು ಸೋಲಿಸಿ ಗೆಲುವು ಸಾಧಿಸಿತು.
- pruthvi Shankar
- Updated on: Dec 4, 2025
- 6:29 pm
ಏಕದಿನ ಸರಣಿಯ ನಡುವೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ
Mohit Sharma Retires: ಭಾರತೀಯ ಕ್ರಿಕೆಟಿಗ ಮೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಹಲವು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಮೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್ನೊಂದಿಗೆ ಐಪಿಎಲ್ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಈ ನಿರ್ಧಾರ ಪ್ರಕಟಿಸಿದ್ದು, ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ಅವರ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ.
- pruthvi Shankar
- Updated on: Dec 3, 2025
- 8:37 pm
T20 World Cup 2026: 2026 ರ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿ ಅನಾವರಣ
BCCI Unveils New India T20 World Cup 2026 Jersey: ದಕ್ಷಿಣ ಆಫ್ರಿಕಾ ಸರಣಿ ನಡುವೆ ಬಿಸಿಸಿಐ ಪ್ರಮುಖ ಘೋಷಣೆಗಳನ್ನು ಮಾಡಿದೆ. 2026ರ ಟಿ20 ವಿಶ್ವಕಪ್ಗೆ ಭಾರತದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು, ಭಾರತ-ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 8 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಜೊತೆಗೆ 5 ತಂಡಗಳ ನಾಲ್ಕು ಗುಂಪುಗಳನ್ನು ಪ್ರಕಟಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ.
- pruthvi Shankar
- Updated on: Dec 3, 2025
- 6:56 pm
IND vs SA: ರಾಯ್ಪುರದಲ್ಲೂ ಕಿಂಗ್ ಕೊಹ್ಲಿಯದ್ದೇ ಕಾರುಬಾರು; ಸತತ 2ನೇ ಶತಕ
Virat Kohli century: ರಾಂಚಿ ಮತ್ತು ರಾಯ್ಪುರ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ರಾಂಚಿಯಲ್ಲಿ 135 ರನ್ ಗಳಿಸಿದ ನಂತರ, ರಾಯ್ಪುರದಲ್ಲಿ ತಮ್ಮ 53ನೇ ಏಕದಿನ ಶತಕವನ್ನು ಪೂರೈಸಿದ್ದಾರೆ. ರುತುರಾಜ್ ಗಾಯಕ್ವಾಡ್ ಜೊತೆ ಶತಕದ ಜೊತೆಯಾಟವಾಡಿ ಭಾರತ ತಂಡವನ್ನು 200 ರನ್ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
- pruthvi Shankar
- Updated on: Dec 3, 2025
- 5:18 pm
IND vs SA: ರಾಯ್ಪುರದಲ್ಲಿ ರುತುರಾಜ್- ಕೊಹ್ಲಿ ಅರ್ಧಶತಕ; ಶತಕದ ಜೊತೆಯಾಟ
India vs South Africa 2nd ODI: ಭಾರತ-ದಕ್ಷಿಣ ಆಫ್ರಿಕಾ 2ನೇ ಏಕದಿನದಲ್ಲಿ ಟೀಂ ಇಂಡಿಯಾ ಟಾಸ್ ಸೋತರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ರಾಯ್ಪುರದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ವಿರಾಟ್ ಕೊಹ್ಲಿ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಇವರ ಶತಕದ ಜೊತೆಯಾಟದಿಂದ ಭಾರತ 200 ರನ್ ಗಡಿ ದಾಟಿತು. ಕೊಹ್ಲಿ ತಮ್ಮ ಸತತ ಮೂರನೇ ಅರ್ಧಶತಕ ಗಳಿಸಿ ಉತ್ತಮ ಫಾರ್ಮ್ ಮುಂದುವರೆಸಿದರು.
- pruthvi Shankar
- Updated on: Dec 3, 2025
- 3:47 pm
IND vs SA: ಸರಣಿ ನಿರ್ಧಾರಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
India vs South Africa 2nd ODI: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ನಿರ್ಣಾಯಕ 2ನೇ ಏಕದಿನ ಪಂದ್ಯ ರಾಯ್ಪುರದಲ್ಲಿ ನಡೆಯಲಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ಗೆಲುವಿನ ಲಯ ಮುಂದುವರಿಸಲು ನೋಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ರಲ್ಲಿ ಆರಂಭಿಕರು (ಜೈಸ್ವಾಲ್/ರುತುರಾಜ್) ಮತ್ತು ಮಧ್ಯಮ ಕ್ರಮಾಂಕದಲ್ಲಿ (ರುತುರಾಜ್/ತಿಲಕ್ ವರ್ಮಾ) ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಗೆಲುವಿಗಾಗಿ ತೀವ್ರ ಹೋರಾಟ ನಡೆಸಲಿವೆ.
- pruthvi Shankar
- Updated on: Dec 2, 2025
- 8:37 pm
SMAT 2025: 7 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದ ಶಾರ್ದೂಲ್; ಮುಂಬೈಗೆ 98 ರನ್ ಜಯ
Shardul Thakur's Five-Wicket Haul: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರಲ್ಲಿ ಮುಂಬೈ ತಂಡ ಅಸ್ಸಾಂ ವಿರುದ್ಧ ಭರ್ಜರಿ 98 ರನ್ಗಳ ಜಯ ಸಾಧಿಸಿದೆ. ನಾಯಕ ಶಾರ್ದೂಲ್ ಠಾಕೂರ್ ಅವರ ಮಾರಕ ಬೌಲಿಂಗ್ ಪ್ರದರ್ಶನದಿಂದ ಮುಂಬೈ ಅಜೇಯ ಓಟ ಮುಂದುವರಿಸಿದೆ. ಶಾರ್ದೂಲ್ ಕೇವಲ 23 ರನ್ಗಳಿಗೆ ಐದು ವಿಕೆಟ್ಗಳನ್ನು ಕಬಳಿಸಿ, ಅಸ್ಸಾಂ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಸ್ಸಾಂ ತಂಡ 122 ರನ್ಗಳಿಗೆ ಆಲೌಟ್ ಆಗುವ ಮೂಲಕ ಮುಂಬೈ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.
- pruthvi Shankar
- Updated on: Dec 2, 2025
- 7:41 pm
SMAT 2025: W,W,W.. ಅರ್ಜುನ್ ಮಾರಕ ದಾಳಿಗೆ ತತ್ತರಿಸಿದ ಮಧ್ಯಪ್ರದೇಶ; ಗೋವಾಗೆ 2ನೇ ಜಯ
Arjun Tendulkar's 3-Wicket Haul: ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋವಾ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಜುನ್ ಮೂರು ವಿಕೆಟ್ ಕಬಳಿಸಿದರು. ಪವರ್ಪ್ಲೇನಲ್ಲಿಯೇ ಪ್ರಮುಖ ವಿಕೆಟ್ ಉರುಳಿಸಿ ಎದುರಾಳಿಯನ್ನು ಕಟ್ಟಿಹಾಕಿದರು. ಅರ್ಜುನ್ ಅವರ ಆಲ್ರೌಂಡ್ ಪ್ರದರ್ಶನದಿಂದ ಗೋವಾ 7 ವಿಕೆಟ್ಗಳಿಂದ ಜಯಭೇರಿ ಬಾರಿಸಿತು.
- pruthvi Shankar
- Updated on: Dec 2, 2025
- 5:57 pm
ಶರವೇಗದ ಶತಕ ಬಾರಿಸಿ ಮತ್ತೆ ಟೀಂ ಇಂಡಿಯಾದ ಕದ ತಟ್ಟಿದ ಸರ್ಫರಾಜ್ ಖಾನ್
Sarfaraz Khan Century: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅಸ್ಸಾಂ ವಿರುದ್ಧ ಭರ್ಜರಿ ಚೊಚ್ಚಲ ಟಿ20 ಶತಕ ಸಿಡಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಸರ್ಫರಾಜ್, ಕೇವಲ 47 ಎಸೆತಗಳಲ್ಲಿ 100 ರನ್ ಗಳಿಸಿದರು. ಈ ಸಾಧನೆಯು ಮುಂಬರುವ ಐಪಿಎಲ್ ಹರಾಜಿನಲ್ಲಿ ಅವರಿಗೆ ಪ್ರಮುಖ ಪಾತ್ರ ವಹಿಸಲಿದ್ದು, ಬಿಳಿ ಚೆಂಡಿನ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
- pruthvi Shankar
- Updated on: Dec 2, 2025
- 5:35 pm
ಟೀಂ ಇಂಡಿಯಾದಲ್ಲಿ ಒಡಕು? ಸಂಭ್ರಮಾಚರಣೆಯಿಂದಲೂ ಕೊಹ್ಲಿ ದೂರ ದೂರ! ವಿಡಿಯೋ
Virat Kohli: ಭಾರತ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 17 ರನ್ಗಳಿಂದ ಗೆದ್ದಿತು, ವಿರಾಟ್ ಕೊಹ್ಲಿ 135 ರನ್ ಗಳಿಸಿ ಪಂದ್ಯಶ್ರೇಷ್ಠರಾದರು. ಆದರೆ, ಹೋಟೆಲ್ನಲ್ಲಿ ನಡೆದ ಗೆಲುವಿನ ಸಂಭ್ರಮದಲ್ಲಿ, ಸಿಬ್ಬಂದಿ ಪದೇ ಪದೇ ಕರೆದರೂ ಕೊಹ್ಲಿ ಕೇಕ್ ಕಟಿಂಗ್ನಲ್ಲಿ ಭಾಗವಹಿಸದೆ ತಮ್ಮ ಕೊಠಡಿಗೆ ತೆರಳಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
- pruthvi Shankar
- Updated on: Dec 1, 2025
- 7:17 pm