BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್
ಇನ್ನೂ ಹೆಚ್ಚು ಓದಿDuleep Trophy 2026: ದುಲೀಪ್ ಟ್ರೋಫಿಗೆ ಉತ್ತರ ವಲಯ ತಂಡ ಪ್ರಕಟ
North Zone Duleep Trophy 2026: 2026 ರ ದುಲೀಪ್ ಟ್ರೋಫಿಗಾಗಿ 15 ಸದಸ್ಯರ ಉತ್ತರ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಕನ್ಹಯ್ಯಾ ವಾಧವನ್ ನಾಯಕನಾಗಿ ಮತ್ತು ಆಯುಷ್ ಬದೋನಿ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಪಂದ್ಯಾವಳಿ ಆಗಸ್ಟ್ 23 ರಂದು ಪ್ರಾರಂಭವಾಗುತ್ತದೆ. ತಂಡವು ಜಮ್ಮು ಮತ್ತು ಕಾಶ್ಮೀರದ ಕಮ್ರಾನ್ ಇಕ್ಬಾಲ್ ಮತ್ತು ಅಬ್ದುಲ್ ಸಮದ್ ಅವರಂತಹ ಹಲವಾರು ಆಟಗಾರರನ್ನು ಒಳಗೊಂಡಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ವಾಧವನ್ಗೆ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.
- pruthvi Shankar
- Updated on: Aug 3, 2026
- 7:55 pm
ಬಿಸಿಸಿಐಗೆ ತಲೆನೋವಾದ ಆಟಗಾರರ ಗಾಯದ ಸಮಸ್ಯೆ; ತಂಡದ ಫಿಸಿಯೋಗೆ ಶೀಘ್ರದಲ್ಲೇ ಗೇಟ್ಪಾಸ್
Team India's Recurring Injury Woes: ಭಾರತ ಕ್ರಿಕೆಟ್ ತಂಡದ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ. ಪ್ರಮುಖ ಆಟಗಾರರ ಗಾಯದಿಂದ ತಂಡದ ಪ್ರದರ್ಶನಕ್ಕೆ ಹಿನ್ನಡೆಯಾಗುತ್ತಿದ್ದು, ನಾಯಕ ಶುಭ್ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ಗೆ ಇದು ಸವಾಲಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಬಿಸಿಸಿಐ ಟೀಂ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಅವರನ್ನು ಬದಲಿಸುವ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ. ಸೆಂಟರ್ ಆಫ್ ಎಕ್ಸಲೆನ್ಸ್ನ ಪಾತ್ರವೂ ಚರ್ಚೆಯಲ್ಲಿದೆ.
- pruthvi Shankar
- Updated on: Aug 3, 2026
- 6:26 pm
Asia Cup 2026: ಏಷ್ಯಾಕಪ್ಗೆ ಭಾರತ ಮಹಿಳಾ ತಂಡ ಪ್ರಕಟ; ಚೇತರಿಸಿಕೊಳ್ಳದ ಶ್ರೇಯಾಂಕ ಪಾಟೀಲ್
India Women's Asia Cup 2026 Squad: 2026ರ ಮಹಿಳಾ ಏಷ್ಯಾಕಪ್ಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ತಂಡವನ್ನೇ ಉಳಿಸಿಕೊಂಡಿದ್ದರೂ, ಗಾಯದಿಂದ ಚೇತರಿಸಿಕೊಳ್ಳದ ಕನ್ನಡತಿ ಶ್ರೇಯಾಂಕ ಪಾಟೀಲ್ ಬದಲಿಗೆ ಲೆಗ್-ಸ್ಪಿನ್ ಆಲ್ರೌಂಡರ್ ಪ್ರೇಮಾ ರಾವತ್ಗೆ ಸ್ಥಾನ ನೀಡಲಾಗಿದೆ. ಆಗಸ್ಟ್-ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ನಡೆಯಲಿದ್ದು, ನಂತರ ಏಷ್ಯನ್ ಕ್ರೀಡಾಕೂಟ ಇರಲಿದೆ.
- pruthvi Shankar
- Updated on: Aug 2, 2026
- 10:06 pm
ಏಕದಿನ ವಿಶ್ವಕಪ್ ನಡೆಯುವ 12 ಮೈದಾನಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿದೆ?
Virat Kohli's 2027 World Cup Impact: 2027ರ ಏಕದಿನ ವಿಶ್ವಕಪ್ ಆಫ್ರಿಕಾದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಆಫ್ರಿಕಾದ 12 ಆತಿಥೇಯ ಸ್ಥಳಗಳಲ್ಲಿ ಕೊಹ್ಲಿ 8ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ 25 ವಿಶ್ವಕಪ್ ಇನ್ನಿಂಗ್ಸ್ಗಳಲ್ಲಿ 71.47 ಸರಾಸರಿಯಲ್ಲಿ 1,358 ರನ್ ಗಳಿಸಿದ್ದಾರೆ. ಅವರ ಅನುಭವ ತಂಡಕ್ಕೆ ಬಲ ನೀಡಲಿದ್ದು, ಭಾರತದ ವಿಶ್ವಕಪ್ ಭರವಸೆಗಳಿಗೆ ಕೊಹ್ಲಿ ಪ್ರಮುಖ ಆಧಾರವಾಗಿದ್ದಾರೆ.
- pruthvi Shankar
- Updated on: Aug 2, 2026
- 7:25 pm
IND vs SL: ಟೆಸ್ಟ್ ಸರಣಿಯಿಂದ ಬುಮ್ರಾ ಔಟ್; ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ?
Jasprit Bumrah Injury: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಮಹತ್ವದ ಈ ಸರಣಿಯಲ್ಲಿ ಬುಮ್ರಾ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಬದಲಿಗೆ ಯಾರು ಬರಬಹುದು ಎಂಬ ಕುತೂಹಲ ಮನೆ ಮಾಡಿದೆ. ಜಮ್ಮು ಕಾಶ್ಮೀರದ ಯುವ ವೇಗಿ ಅಕಿಬ್ ನಬಿ ದಾರ್ ಬುಮ್ರಾ ಸ್ಥಾನ ಪಡೆಯುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
- pruthvi Shankar
- Updated on: Aug 2, 2026
- 3:37 pm
IND vs SL: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್
India vs Sri Lanka Test: ಆಗಸ್ಟ್ 15 ರಿಂದ ಭಾರತ-ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಗಸ್ಟ್ 6 ರಿಂದ ಅಭ್ಯಾಸ ಪಂದ್ಯ ಆಡಲಿದೆ. ಈ ಸರಣಿಗಾಗಿ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಬುಮ್ರಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ, ಇದು ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.
- pruthvi Shankar
- Updated on: Aug 2, 2026
- 2:45 pm
Duleep Trophy: ಆರ್ಸಿಬಿ ನಾಯಕ ರಜತ್ಗೆ ಕೇಂದ್ರ ವಲಯದ ನಾಯಕತ್ವ; ರಿಂಕುಗೆ ಉಪನಾಯಕತ್ವ
Duleep Trophy 2026-27: ದುಲೀಪ್ ಟ್ರೋಫಿ 2026-27 ಆಗಸ್ಟ್ 23 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಆರು ವಲಯ ತಂಡಗಳು ಸ್ಪರ್ಧಿಸಲಿವೆ. ರಜತ್ ಪಾಟಿದಾರ್ ಕೇಂದ್ರ ವಲಯಕ್ಕೆ, ರುತುರಾಜ್ ಗಾಯಕ್ವಾಡ್ ಪಶ್ಚಿಮ ವಲಯಕ್ಕೆ ಮತ್ತು ಇಶಾನ್ ಕಿಶನ್ ಪೂರ್ವ ವಲಯಕ್ಕೆ ನಾಯಕರಾಗಿ ತಂಡಗಳನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯಾವಳಿ ಭಾರತೀಯ ದೇಶೀಯ ಕ್ರಿಕೆಟ್ ಸೀಸನ್ಗೆ ಚಾಲನೆ ನೀಡಲಿದ್ದು, ನಂತರ ಇರಾನಿ ಕಪ್ ಮತ್ತು ರಣಜಿ ಟ್ರೋಫಿ ನಡೆಯಲಿವೆ.
- pruthvi Shankar
- Updated on: Aug 1, 2026
- 8:39 pm
IND vs SL: ಲಂಕಾ ವಿರುದ್ಧ ಟೆಸ್ಟ್ ಸರಣಿ ಆಡ್ತಾರಾ ಬುಮ್ರಾ? ಫಿಟ್ನೆಸ್ ವರದಿಯಲ್ಲಿ ಏನಿದೆ?
Jasprit Bumrah fitness: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವೇಗಿ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ. ಗಾಯದಿಂದ ಚೇತರಿಸಿಕೊಂಡ ಬುಮ್ರಾ ಎಲ್ಲಾ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಆಗಸ್ಟ್ 15 ರಿಂದ ಆರಂಭವಾಗುವ ಈ ಮಹತ್ವದ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಈ ಸರಣಿ ಭಾರತಕ್ಕೆ ನಿರ್ಣಾಯಕವಾಗಿದೆ.
- pruthvi Shankar
- Updated on: Jul 31, 2026
- 6:55 pm
‘ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ’; ರಹಾನೆ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದಿದು
Ajinkya Rahane Retires: ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದ ರಹಾನೆಗೆ ಅವಕಾಶ ಸಿಗಲಿಲ್ಲ. ತಮ್ಮ 38ನೇ ವಯಸ್ಸಿನಲ್ಲಿ ರಹಾನೆ ಈ ನಿರ್ಧಾರ ಕೈಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ದಿಗ್ಗಜರು ರಹಾನೆ ಅವರ ಅದ್ಭುತ ವೃತ್ತಿಜೀವನಕ್ಕೆ ಶುಭಾಶಯ ಕೋರಿದ್ದಾರೆ.
- pruthvi Shankar
- Updated on: Jul 30, 2026
- 10:46 pm
ಒಂದೇ ಒಂದು ಸೋಲಿಲ್ಲದ ಏಕೈಕ ನಾಯಕ ಅಜಿಂಕ್ಯ ರಹಾನೆ
Ajinkya Rahane Test captaincy record: ಭಾರತ ಕ್ರಿಕೆಟ್ನ 'ಜಂಟಲ್ಮ್ಯಾನ್' ಎಂದೇ ಖ್ಯಾತರಾಗಿದ್ದ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲಿ ಈ ನಿರ್ಧಾರ ಕೈಗೊಂಡ ರಹಾನೆ, ಭಾರತಕ್ಕಾಗಿ 85 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಸಹಿತ 5077 ರನ್ ಗಳಿಸಿದ್ದಾರೆ. ಅಜೇಯ ಟೆಸ್ಟ್ ನಾಯಕತ್ವದ ದಾಖಲೆ ಹೊಂದಿರುವ ರಹಾನೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- pruthvi Shankar
- Updated on: Jul 30, 2026
- 4:28 pm
Duleep Trophy 2026: ಪೂರ್ವ ವಲಯ ತಂಡ ಪ್ರಕಟ; ವೈಭವ್ಗೆ ಉಪನಾಯಕತ್ವ
Duleep Trophy 2026 East Zone: 2026 ರ ದುಲೀಪ್ ಟ್ರೋಫಿ ಆಗಸ್ಟ್ 23 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈ ಪಂದ್ಯಾವಳಿಗೆ ಪೂರ್ವ ವಲಯ ತಂಡ ಪ್ರಕಟಗೊಂಡಿದ್ದು, ಇಶಾನ್ ಕಿಶನ್ ನಾಯಕರಾಗಿದ್ದಾರೆ. 15 ವರ್ಷದ ವೈಭವ್ ಸೂರ್ಯವಂಶಿ ಉಪನಾಯಕನಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಉಪನಾಯಕತ್ವ ಪಡೆದ ವೈಭವ್, ಇಶಾನ್ ಕಿಶನ್ಗೆ ಟೆಸ್ಟ್ ತಂಡಕ್ಕೆ ಮರಳಲು ಈ ಟ್ರೋಫಿ ನಿರ್ಣಾಯಕವಾಗಿದೆ.
- pruthvi Shankar
- Updated on: Jul 29, 2026
- 9:27 pm
ICC ODI Ranking: ಏಕದಿನದಲ್ಲಿ ಪ್ರಿನ್ಸ್ ಶುಭ್ಮನ್ ಗಿಲ್ಗೆ ನಂ.1 ಕಿರೀಟ
Shubman Gill No. 1 ODI Batsman: ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಇದೀಗ ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 801 ಅಂಕಗಳೊಂದಿಗೆ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ಆಗಿರುವ ಗಿಲ್, ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ ಈ ಗರಿಮೆಗೆ ಕಾರಣವಾಗಿದೆ.
- pruthvi Shankar
- Updated on: Jul 29, 2026
- 3:28 pm