BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್
ಇನ್ನೂ ಹೆಚ್ಚು ಓದಿ2ನೇ ಎಸೆತದಲ್ಲೇ ವಿಕೆಟ್ ಉರುಳಿಸಿ ವಿಶೇಷ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
ಭಾರತ-ಅಫ್ಘಾನಿಸ್ತಾನ ಮೊದಲ T20 ಪಂದ್ಯದಲ್ಲಿ ಅಫ್ಘಾನಿಸ್ತಾನ 157 ರನ್ ಗಳಿಸಿತು. ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ 350ನೇ T20 ವಿಕೆಟ್ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು. ಈ ಸಾಧನೆಯೊಂದಿಗೆ, ಅವರು ಯಜುವೇಂದ್ರ ಚಾಹಲ್ ಮತ್ತು ಭುವನೇಶ್ವರ್ ಕುಮಾರ್ ನಂತರ T20 ಕ್ರಿಕೆಟ್ನಲ್ಲಿ 350 ವಿಕೆಟ್ಗಳನ್ನು ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡರು. ಭಾರತೀಯ ಬೌಲರ್ಗಳ ಅಗ್ರಸ್ಥಾನದಲ್ಲಿ ಚಾಹಲ್ ಇದ್ದಾರೆ.
- pruthvi Shankar
- Updated on: Sep 13, 2026
- 9:54 pm
ದೆಹಲಿ ಮೈದಾನದಲ್ಲಿ ಟೀಂ ಇಂಡಿಯಾ ಎಚ್ಚರ ತಪ್ಪಿದರೆ ಸೋಲು ಖಚಿತ..!
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20 ಸರಣಿ ಇಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ತವರಿನಲ್ಲಿ ಪ್ರವಾಸಿ ತಂಡವಾಗಿ ಆಡುತ್ತಿದ್ದರೂ, ಮೈದಾನದ ಪರಿಚಯ ಲಾಭ ನೀಡಲಿದೆ. ಆದರೆ, ಕ್ರೀಡಾಂಗಣದಲ್ಲಿ ಭಾರತದ ಹಿಂದಿನ T20 ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ, ಎಚ್ಚರಿಕೆ ಅಗತ್ಯ. ಪಿಚ್ ಮೊದಲು ಬೌಲಿಂಗ್ ಮಾಡುವ ತಂಡಗಳಿಗೆ ಹೆಚ್ಚು ಸಹಕಾರಿಯಾಗಲಿದೆ.
- pruthvi Shankar
- Updated on: Sep 13, 2026
- 3:36 pm
ಅಪರೂಪದ ಸಾಧನೆಯ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ
ಭಾರತ-ಅಫ್ಘಾನಿಸ್ತಾನ ಟಿ20 ಸರಣಿಗೆ ಗಾಯದಿಂದ ಚೇತರಿಸಿದ ಜಸ್ಪ್ರೀತ್ ಬುಮ್ರಾ ಮರಳಿದ್ದಾರೆ. ಸೆಪ್ಟೆಂಬರ್ 13ಕ್ಕೆ ಆರಂಭವಾಗುವ ಸರಣಿಯ ಮೊದಲ ಪಂದ್ಯ ಬುಮ್ರಾಗೆ ವಿಶೇಷ. ಕೇವಲ ಒಂದು ವಿಕೆಟ್ ಪಡೆದರೆ, ಅವರು ಟಿ20 ಕ್ರಿಕೆಟ್ನಲ್ಲಿ 350 ವಿಕೆಟ್ಗಳ ಐತಿಹಾಸಿಕ ಮೈಲಿಗಲ್ಲು ತಲುಪಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಆಗಲಿದ್ದಾರೆ. ಚಾಹಲ್ ಮತ್ತು ಭುವನೇಶ್ವರ್ ನಂತರ ಈ ಪಟ್ಟಿಗೆ ಬುಮ್ರಾ ಸೇರಲಿದ್ದಾರೆ.
- pruthvi Shankar
- Updated on: Sep 12, 2026
- 9:52 pm
ಮೊದಲ ಟಿ20ಯಲ್ಲಿ ಇಶಾನ್ ಕಿಶನ್ ಆಡ್ತಾರಾ?; ಶ್ರೇಯಸ್ ಅಯ್ಯರ್ ಹೇಳಿದ್ದಿದು
ಭಾರತ-ಅಫ್ಘಾನಿಸ್ತಾನ ಟಿ20 ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ಗೆ ಗಾಯದ ಆತಂಕ ಎದುರಾಗಿತ್ತು. ಆದರೆ, ನಾಯಕ ಶ್ರೇಯಸ್ ಅಯ್ಯರ್, ಕಿಶನ್ ಗಂಭೀರವಾಗಿ ಗಾಯಗೊಂಡಿಲ್ಲ, ಕೇವಲ ಆಯಾಸದಿಂದ ವಿಶ್ರಾಂತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಿಶನ್ ಮೊದಲ ಟಿ20 ಪಂದ್ಯಕ್ಕೆ ಸಂಪೂರ್ಣವಾಗಿ ಲಭ್ಯವಿರಲಿದ್ದಾರೆ. ಅವರ ಲಭ್ಯತೆ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಲಿದೆ.
- pruthvi Shankar
- Updated on: Sep 12, 2026
- 9:22 pm
ಭಾರತ-ಅಫ್ಘನ್ ಮೊದಲ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ
ಭಾರತ-ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ T20 ಸರಣಿ ಸೆಪ್ಟೆಂಬರ್ 13 ರಿಂದ ಆರಂಭವಾಗುತ್ತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತವರಿನಲ್ಲಿ ಗೆಲುವಿನ ಓಟ ಮುಂದುವರಿಸಲು ಯತ್ನಿಸಿದರೆ, ಅಫ್ಘಾನಿಸ್ತಾನ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲ T20 ಪಂದ್ಯ ಸಂಜೆ 7 ಗಂಟೆಗೆ ಆರಂಭ. ಸೋನಿ ಮತ್ತು ಫ್ಯಾನ್ಕೋಡ್ನಲ್ಲಿ ವೀಕ್ಷಿಸಿ.
- pruthvi Shankar
- Updated on: Sep 12, 2026
- 9:22 pm
ನಾಯಕನಾಗಿ ಮೊದಲ ಗೆಲುವ ಹುಡುಕಾಟದಲ್ಲಿ ಶ್ರೇಯಸ್ ಅಯ್ಯರ್
ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ಭಾನುವಾರದಿಂದ ಆರಂಭವಾಗಲಿದ್ದು, ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ತಾಯ್ನಾಡಿನಲ್ಲಿ ಇದು ಅವರ ಮೊದಲ ನಾಯಕತ್ವದ ಟಿ20 ಪಂದ್ಯವಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಅಯ್ಯರ್ ತಮ್ಮ ನಾಯಕತ್ವದ ಪ್ರಯಾಣದಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದ್ದಾರೆ.
- pruthvi Shankar
- Updated on: Sep 12, 2026
- 4:45 pm
ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೆ ಟ್ರೋಫಿ ಜೊತೆಗೆ ಬಹುಮಾನವೂ ಸಿಗುವುದಿಲ್ಲ..!
2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಪ್ಟೆಂಬರ್ 13ರಂದು ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಆದರೆ, ಗೆದ್ದರೂ ಭಾರತಕ್ಕೆ ಟ್ರೋಫಿ ಅಥವಾ ಬಹುಮಾನದ ಹಣ ಸಿಗುವುದಿಲ್ಲ. ಬಿಸಿಸಿಐ ಬಹುಮಾನವನ್ನು ಇತರ ಕ್ರಿಕೆಟ್ ಮಂಡಳಿಗಳಿಗೆ ನೀಡುವ ಸಂಪ್ರದಾಯ ಹೊಂದಿದ್ದು, ACC ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದಿರುವ ನಿರ್ಧಾರ ಇದಕ್ಕೆ ಕಾರಣ.
- pruthvi Shankar
- Updated on: Sep 12, 2026
- 2:55 pm
ಏಕದಿನ ವಿಶ್ವಕಪ್ ಆಡ್ತೀರಾ? ಅಚ್ಚರಿಯ ಉತ್ತರ ನೀಡಿದ ರೋಹಿತ್ ಶರ್ಮಾ
ಮುಂದಿನ 2027ರ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾ ತಯಾರಿ ನಡೆಸಿದೆ. ಆದರೆ, ಅನುಭವಿ ಆಟಗಾರ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಸ್ವತಃ ರೋಹಿತ್ ನೀಡಿದ ಉತ್ತರ ಗೊಂದಲ ಸೃಷ್ಟಿಸಿದೆ. ‘ಅಕ್ಟೋಬರ್ 2027 ದೂರವಿದೆ, ನಂತರ ನೋಡೋಣ’ ಎಂದಿರುವುದು ಅವರ ಭವಿಷ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಬಿಸಿಸಿಐ ಸ್ಪಷ್ಟಪಡಿಸಿದ್ದರೂ, ರೋಹಿತ್ ಮೌನ ಮುಂದುವರೆಸಿದ್ದು, ಅವರ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿವೆ.
- pruthvi Shankar
- Updated on: Sep 11, 2026
- 8:19 pm
ದೆಹಲಿಯಲ್ಲಿ ಟೀಂ ಇಂಡಿಯಾಕ್ಕೆ ಭದ್ರತೆಯೇ ಇಲ್ಲ..!
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20 ಸರಣಿ ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿದೆ. ಆದರೆ, BRICS ಶೃಂಗಸಭೆ ನಡೆಯುತ್ತಿರುವ ಕಾರಣ ಟೀಮ್ ಇಂಡಿಯಾ ಅಭ್ಯಾಸಕ್ಕೆ ಸೂಕ್ತ ಭದ್ರತೆ ಸಿಕ್ಕಿಲ್ಲ. ಪೊಲೀಸರು ಭದ್ರತೆ ಕಲ್ಪಿಸಲು ಅಸಮರ್ಥತೆ ವ್ಯಕ್ತಪಡಿಸಿದ್ದರೂ, ಪಂದ್ಯ ನಿಗದಿಯಾಗಿದೆ. ತಂಡದ ಬಸ್ಗೆ ಭದ್ರತಾ ವಾಹನಗಳ ವ್ಯವಸ್ಥೆ ಇರಲಿಲ್ಲ. ಪಂದ್ಯದ ದಿನದಂದು ಮಾತ್ರ ಭದ್ರತೆ ಒದಗಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
- pruthvi Shankar
- Updated on: Sep 11, 2026
- 3:08 pm
ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್ಗೇರಿದ ಟೀಂ ಇಂಡಿಯಾ
2026ರ ಮಹಿಳಾ ಟಿ20 ಏಷ್ಯಾಕಪ್ ಸೆಮಿಫೈನಲ್ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಿ ಅಜೇಯವಾಗಿ ಫೈನಲ್ಗೆ ಪ್ರವೇಶಿಸಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ವರ್ಮಾ 64 ರನ್ ಗಳಿಸಿ ಮಿಂಚಿದರೆ, ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಬೌಲಿಂಗ್ನಲ್ಲಿ ಪ್ರಬಲ ಪ್ರದರ್ಶನ ನೀಡಿದರು. 149 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಭಾರತದ ಬೌಲಿಂಗ್ ಮುಂದೆ ಶರಣಾಯಿತು.
- pruthvi Shankar
- Updated on: Sep 10, 2026
- 11:12 pm
ಏಷ್ಯಾಕಪ್ ಸೆಮಿಫೈನಲ್; ಭಾರತದ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ
2026 ರ ಮಹಿಳಾ ಟಿ20 ಏಷ್ಯಾಕಪ್ನ ನಾಕೌಟ್ ಹಂತ ಆರಂಭವಾಗಿದೆ. ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ದುಬೈನಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದ ವಿಜೇತರು ನೇರವಾಗಿ ಫೈನಲ್ಗೆ ಪ್ರವೇಶಿಸಲಿದ್ದಾರೆ. ಇದುವರೆಗೆ ಅಜೇಯವಾಗಿರುವ ಟೀಂ ಇಂಡಿಯಾ ಫೇವರಿಟ್ ಎನಿಸಿದೆ. ಇತ್ತ ಬಾಂಗ್ಲಾದೇಶ ಸಹ ಫೈನಲ್ ಪ್ರವೇಶಿಸಲು ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ.
- pruthvi Shankar
- Updated on: Sep 10, 2026
- 7:49 pm
ಭಾರತ-ಅಫ್ಘನ್ ಟಿ20 ಸರಣಿ ವೇಳಾಪಟ್ಟಿ ಬದಲಾವಣೆಗೆ ದೆಹಲಿ ಪೊಲೀಸರ ಮನವಿ
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 13 ರಂದು ದೆಹಲಿಯಲ್ಲಿ ನಡೆಯಲಿದೆ. BRICS ಶೃಂಗಸಭೆಯ ಭದ್ರತಾ ಕಾಳಜಿ ಮತ್ತು ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಪಂದ್ಯವನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಆದಾಗ್ಯೂ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (DDCA) ಪಂದ್ಯವು ನಿಗದಿಯಂತೆ ನಡೆಯಲಿದೆ ಎಂದು ದೃಢಪಡಿಸಿದೆ.
- pruthvi Shankar
- Updated on: Sep 10, 2026
- 7:31 pm