AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI

BCCI

BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್​ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್​ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್​

ಇನ್ನೂ ಹೆಚ್ಚು ಓದಿ
Follow us:

IND vs SL: ‘ಜೈ ಜವಾನ್, ಜೈ ಕಿಸಾನ್’; ಧ್ರುವ್ ಜುರೇಲ್​ ಟ್ಯಾಟೂಗೆ ಭಾರಿ ಮೆಚ್ಚುಗೆ

Dhruv Jurel tattoo meaning: ಧ್ರುವ್ ಜುರೇಲ್ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ 115* ರನ್ ಗಳಿಸಿ ಎರಡನೇ ಶತಕ ಬಾರಿಸಿದರು. ಈ ಮೂಲಕ MS ಧೋನಿ ದಾಖಲೆ ಮುರಿದರು. ಶತಕದ ಸಂಭ್ರಮದಲ್ಲಿ 'ಜೈ ಜವಾನ್, ಜೈ ಕಿಸಾನ್' ಟ್ಯಾಟೂ ಪ್ರದರ್ಶಿಸಿ ವೈರಲ್ ಆದರು. ಸೈನಿಕ ತಂದೆ, ರೈತ ಅಜ್ಜನಿಗೆ ಅರ್ಪಿಸಿದ ಈ ಟ್ಯಾಟೂ, ಅವರ ಪಾಲಿನ ಹೆಮ್ಮೆಯ ಪ್ರತೀಕವಾಗಿದೆ.

IND vs SL: ಡಬ್ಲ್ಯೂಟಿಸಿಯಲ್ಲಿ ಅತ್ಯಧಿಕ ರನ್; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್

Rishabh Pant WTC record: ರಿಷಭ್ ಪಂತ್ ಕೊಲಂಬೊ ಟೆಸ್ಟ್‌ನಲ್ಲಿ 63 ರನ್ ಗಳಿಸುವ ಮೂಲಕ ಭಾರತದ ಪರ WTC ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಶುಭ್​ಮನ್ ಗಿಲ್ ಅವರ ದಾಖಲೆಯನ್ನು ಮುರಿದು 2948 ರನ್ ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಗಿಲ್ 76 ಇನ್ನಿಂಗ್ಸ್‌ಗಳಲ್ಲಿ 2917 ರನ್ ಗಳಿಸಿದ್ದರೆ, ಪಂತ್ ಕೇವಲ 74 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

IND vs SL: ಕೊಲಂಬೊ ಟೆಸ್ಟ್; ಮಳೆಯಿಂದ ಆಟ ಸ್ಥಗಿತ, ಶತಕದ ಸನಿದಲ್ಲಿ ಜುರೇಲ್

India Dominates Day 2 of Colombo Test: ಕೊಲಂಬೊ ಟೆಸ್ಟ್‌ನ ಎರಡನೇ ದಿನ ಭಾರತ ಉತ್ತಮ ಪ್ರದರ್ಶನ ನೀಡಿದೆ. ಪಂತ್ ಮತ್ತು ಜುರೇಲ್ ಶತಕದ ಜೊತೆಯಾಟ ನಿರ್ಮಿಸಿ ತಂಡವನ್ನು 475/8ಕ್ಕೆ ಕೊಂಡೊಯ್ದರು. ಪಂತ್ ಅರ್ಧಶತಕ ಗಳಿಸಿದರೆ, ಜುರೇಲ್ ಶತಕದ ಅಂಚಿನಲ್ಲಿದ್ದಾರೆ. ದುರದೃಷ್ಟವಶಾತ್, ಮಳೆಯಿಂದಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭಾರತದ ಬ್ಯಾಟಿಂಗ್ ಪ್ರಾಬಲ್ಯ ಮುಂದುವರೆಯಿತು.

IND vs SL: ರಿಷಭ್ ಪಂತ್ ಗಾಯದ ಬಗ್ಗೆ ಹೊರಬಿತ್ತು ಬಿಗ್ ಅಪ್​ಡೇಟ್

Rishabh Pant injury update: ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ರಿಷಭ್ ಪಂತ್ ಎಡಗೈಗೆ ಗಾಯಗೊಂಡು ನಿವೃತ್ತರಾಗಿದ್ದು ಆತಂಕ ಮೂಡಿಸಿತ್ತು. ಆದರೆ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಪಂತ್ ಸಂಪೂರ್ಣ ಗುಣಮುಖರಾಗಿದ್ದಾರೆಂದು ಖಚಿತಪಡಿಸಿದ್ದಾರೆ. ಅವರು ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದು, ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದು ಅಭಿಮಾನಿಗಳಿಗೆ ರಿಷಭ್ ಪಂತ್‌ ಕಂಬ್ಯಾಕ್ ಕುರಿತು ಸಂತಸದ ಸುದ್ದಿ.

IND vs SL: ಐದು ಟೆಸ್ಟ್ ಅಥವಾ ಅಜೀವ ನಿಷೇಧ..! ಸಂಕಷ್ಟದಲ್ಲಿ ಜೈಸ್ವಾಲ್

Yashasvi Jaiswal ICC ban: ಕೊಲಂಬೊ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಸಿತಾ ಫೆರ್ನಾಂಡೊಗೆ ಹೆಲ್ಮೆಟ್‌ನಿಂದ ಗುದ್ದಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಈ ನಡೆ ICC ನಿಯಮಗಳ Level 4 ಉಲ್ಲಂಘನೆಯಾಗಿದ್ದು, ಐದು ಟೆಸ್ಟ್ ಪಂದ್ಯಗಳಿಂದ ಜೀವಾವಧಿ ನಿಷೇಧದಂತಹ ಕಠಿಣ ಶಿಕ್ಷೆ ಎದುರಿಸುವ ಸಾಧ್ಯತೆಯಿದೆ. ಜೈಸ್ವಾಲ್ ವೃತ್ತಿಜೀವನಕ್ಕೆ ಇದು ದೊಡ್ಡ ಹೊಡೆತ ನೀಡಬಹುದೆಂಬ ಆತಂಕವಿದೆ. ICC ನಿರ್ಧಾರ ಕುತೂಹಲ ಮೂಡಿಸಿದೆ.

IND vs SL: ಕೈಗೆ ಗಂಭೀರ ಗಾಯ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್

Rishabh Pant Injury: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಸರಣಿ ಆರಂಭಕ್ಕೂ ಮುನ್ನ ಬುಮ್ರಾ, ಸಾಯಿ ಸುದರ್ಶನ್ ಹೊರಬಿದ್ದ ಬೆನ್ನಲ್ಲೇ, ಕೊಲಂಬೊ ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್ ತಮ್ಮ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಶಾರ್ಟ್ ಬಾಲ್‌ಗೆ ಪೆಟ್ಟು ಬಿದ್ದು ರಿಟೈರ್ಡ್ ಹರ್ಟ್ ಆದ ಪಂತ್, ತಂಡದ ಆತಂಕ ಹೆಚ್ಚಿಸಿದ್ದಾರೆ. ಪಂತ್ ಮತ್ತೆ ಬ್ಯಾಟಿಂಗ್‌ಗೆ ಇಳಿಯುವ ಬಗ್ಗೆಯೂ ಅನಿಶ್ಚಿತತೆ ಇದೆ.

IND vs SL: ಪಡಿಕ್ಕಲ್​ಗೆ 2 ಜೀವದಾನ ನೀಡಿದ ಶ್ರೀಲಂಕಾಕ್ಕೆ ಬರೋಬ್ಬರಿ 117 ರನ್ ದಂಡ

Devdutt Padikkal dropped catches: ಕ್ರಿಕೆಟ್‌ನಲ್ಲಿ ಕ್ಯಾಚ್ ಕೈಚೆಲ್ಲುವುದು ತಂಡಕ್ಕೆ ಎಷ್ಟು ದುಬಾರಿ ಎಂಬುದಕ್ಕೆ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯ ಉದಾಹರಣೆ. ದೇವದತ್ ಪಡಿಕ್ಕಲ್ ನೀಡಿದ ಎರಡೆರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಶ್ರೀಲಂಕಾ 117 ರನ್‌ಗಳ ದಂಡ ತೆರಬೇಕಾಯಿತು. ಇದರಿಂದಾಗಿ ಪಡಿಕ್ಕಲ್ ಶತಕ ಗಳಿಸಿ, ಪ್ರಮುಖ ಜೊತೆಯಾಟಗಳನ್ನು ಕಟ್ಟಿದರು. ಫೀಲ್ಡಿಂಗ್ ತಪ್ಪುಗಳು ಪಂದ್ಯದ ಗತಿಯನ್ನೇ ಹೇಗೆ ಬದಲಿಸುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.

ಆ.23 ರಿಂದ ದುಲೀಪ್ ಟ್ರೋಫಿ ಆರಂಭ; ದೇಶೀ ಟೂರ್ನಿಯ ಪೂರ್ಣ ವಿವರ ಇಲ್ಲಿದೆ

Duleep Trophy 2026: ದುಲೀಪ್ ಟ್ರೋಫಿ 2026 ಆಗಸ್ಟ್ 23 ರಿಂದ ಆರಂಭವಾಗಲಿದೆ, ಇದು ಭಾರತೀಯ ದೇಶೀಯ ಕ್ರಿಕೆಟ್‌ನ ಹೊಸ ಸೀಸನ್‌ಗೆ ನಾಂದಿ ಹಾಡಲಿದೆ. ಬೆಂಗಳೂರಿನಲ್ಲಿ ಕ್ವಾರ್ಟರ್-ಫೈನಲ್ ಪಂದ್ಯಗಳು ನಡೆಯಲಿದ್ದು, ಚೆನ್ನೈನಲ್ಲಿ ಫೈನಲ್ ನಡೆಯಲಿದೆ. ರಜತ್ ಪಾಟಿದಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಸೇರಿದಂತೆ ಆರು ವಲಯಗಳ ನಾಯಕರು ತಂಡಗಳನ್ನು ಮುನ್ನಡೆಸಲಿದ್ದಾರೆ. ಈ ಪ್ರಮುಖ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ಮಾಹಿತಿ ಇಲ್ಲಿದೆ.

‘ರ‍್ಯಾಂಕ್ ಮುಖ್ಯವಲ್ಲ, ಟ್ರೋಫಿಗಳಷ್ಟೇ ಮುಖ್ಯ’; ಗೌತಮ್ ಗಂಭೀರ್

India vs Sri Lanka Test: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಈ ಪಂದ್ಯ ಗೆಲ್ಲುವುದು ಮುಖ್ಯ. ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಂಡದ ಪ್ರದರ್ಶನ, ಡಬ್ಲ್ಯೂಟಿಸಿ ಸ್ಥಾನ ಮತ್ತು ಕುಲ್ದೀಪ್ ಯಾದವ್ ಬೌಲಿಂಗ್ ಕುರಿತು ನೇರ ಉತ್ತರ ನೀಡಿದರು. "ಶ್ರೇಯಾಂಕಗಳ ಬಗ್ಗೆ ನಮಗೆ ಕಾಳಜಿ ಇಲ್ಲ, ಟ್ರೋಫಿ ಗೆಲ್ಲುವುದೇ ನನ್ನ ಕೆಲಸ" ಎಂದು ಗಂಭೀರ್ ಸ್ಪಷ್ಟಪಡಿಸಿದರು.

IND vs SL: ಭಾರತ- ಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ನಡೆಯಲಿದೆ?

India vs Sri Lanka 2nd Test: ಭಾರತವು ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಗೆದ್ದು WTC ಫೈನಲ್ ಆಸೆ ಜೀವಂತವಾಗಿರಿಸಿದೆ. ಸರಣಿ ಕ್ಲೀನ್ ಸ್ವೀಪ್ ಮಾಡಿ ಫೈನಲ್ ಸ್ಥಾನ ಗಟ್ಟಿಗೊಳಿಸಲು 2ನೇ ಟೆಸ್ಟ್ ಗೆಲ್ಲುವುದು ನಿರ್ಣಾಯಕ. ಆಗಸ್ಟ್ 23 ರಂದು ಕೊಲಂಬೊದಲ್ಲಿ ಬೆಳಿಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ಮತ್ತು ಸೋನಿ ಲಿವ್‌ನಲ್ಲಿ ವೀಕ್ಷಿಸಿ. ತಂಡಗಳ ವಿವರ ಲಭ್ಯವಿದೆ.

Duleep Trophy 2026: ದುಲೀಪ್ ಟ್ರೋಫಿ ಫೈನಲ್ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ

Duleep Trophy 2026: ದುಲೀಪ್ ಟ್ರೋಫಿ ಆಗಸ್ಟ್ 23 ರಿಂದ ಆರಂಭವಾಗಲಿದ್ದು, ದೇಶೀ ಕ್ರಿಕೆಟ್ ಸೀಸನ್‌ಗೆ ಚಾಲನೆ ನೀಡಲಿದೆ. ಬೆಂಗಳೂರಿನಲ್ಲಿ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ನಿಗದಿಯಾಗಿದ್ದ ಪಂದ್ಯಗಳ ವೇಳಾಪಟ್ಟಿಯಲ್ಲಿ ಬಿಸಿಸಿಐ ಬದಲಾವಣೆ ಮಾಡಿದೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲಾಗಿದ್ದು, ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಈ ಟೂರ್ನಿ ನಡೆಯಲಿದೆ.

IND vs SL: ದಿಗ್ಗಜ ಬೌಲರ್​ಗಳಿಗೆ ಸಾಧ್ಯವಾಗದ್ದನ್ನು 2ನೇ ಟೆಸ್ಟ್​ನಲ್ಲೇ ಸಾಧಿಸಿದ ಸುತಾರ್

Manav Suthar's 10-Wicket Haul: ಸುತಾರ್, ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ ಟೀಂ ಇಂಡಿಯಾಕ್ಕೆ ಗೆಲುವು ತಂದಿತ್ತರು. ಯುವ ಸ್ಪಿನ್ನರ್ ಸುತಾರ್ ಅವರ ಈ ಮಾಂತ್ರಿಕ ಪ್ರದರ್ಶನವು ವಿಶ್ವದ ಅನೇಕ ದಿಗ್ಗಜ ಬೌಲರ್‌ಗಳಾದ ಬುಮ್ರಾ, ಶಮಿ, ಬ್ರೆಟ್ ಲೀ ಅವರಂತಹವರ ಇಡೀ ವೃತ್ತಿಜೀವನದಲ್ಲಿಯೂ ಸಾಧಿಸದ ದಾಖಲೆಯನ್ನು ಸೃಷ್ಟಿಸಿತು. ಕೇವಲ ಎರಡು ಟೆಸ್ಟ್‌ಗಳಲ್ಲಿ 17 ವಿಕೆಟ್ ಪಡೆದು ಸುತಾರ್ ಭರವಸೆ ಮೂಡಿಸಿದ್ದಾರೆ.