IPL 2023: ಈ ಸೀಸನ್​​ನಲ್ಲಿ 200 ಕ್ಕೂ ಅಧಿಕ ರನ್ ಬಾರಿಸಿಯೂ ಸೋತ 5 ತಂಡಗಳಿವು

Updated on: May 04, 2023 | 6:42 PM

IPL 2023: 16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ.

1 / 6
16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ. ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸಿ ಸೋಲನುಭವಿಸಿರುವುದು ಒಂದು ಸೀಸನ್​​ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹಿಂದೆಂದೂ ಸಂಭವಿಸಿಲ್ಲ.

16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ. ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸಿ ಸೋಲನುಭವಿಸಿರುವುದು ಒಂದು ಸೀಸನ್​​ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹಿಂದೆಂದೂ ಸಂಭವಿಸಿಲ್ಲ.

2 / 6
ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಬಾರಿಸಿದ್ದರೂ 5 ತಂಡಗಳು ಸೋತಿವೆ. ಇತ್ತೀಚೆಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ 214 ರನ್ ಟಾರ್ಗೆಟ್ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡ ಹೀನಾಯ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ಈ ಗುರಿಯನ್ನು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.

ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಬಾರಿಸಿದ್ದರೂ 5 ತಂಡಗಳು ಸೋತಿವೆ. ಇತ್ತೀಚೆಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ 214 ರನ್ ಟಾರ್ಗೆಟ್ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡ ಹೀನಾಯ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ಈ ಗುರಿಯನ್ನು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.

3 / 6
ಈ ತಂಡಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್​ಗಳ ಗುರಿ ನೀಡಿತ್ತು. ಆದರೂ ಕೂಡ ಆ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಸೋಲಬೇಕಾಯಿತು.

ಈ ತಂಡಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್​ಗಳ ಗುರಿ ನೀಡಿತ್ತು. ಆದರೂ ಕೂಡ ಆ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಸೋಲಬೇಕಾಯಿತು.

4 / 6
ಇದೇ ಐಪಿಎಲ್​​ನಲ್ಲಿ ಏಪ್ರಿಲ್ 10 ರಂದು ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ, ಲಕ್ನೋ ವಿರುದ್ಧ  212 ರನ್​ಗಳ ಗುರಿ ನಿಗಧಿ ಮಾಡಿತ್ತು. ಈ ಗುರಿಯನ್ನು ಲಕ್ನೋ ಕೊನೆಯ ಎಸೆತದಲ್ಲಿ ಮುಟ್ಟಿತ್ತು.

ಇದೇ ಐಪಿಎಲ್​​ನಲ್ಲಿ ಏಪ್ರಿಲ್ 10 ರಂದು ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ, ಲಕ್ನೋ ವಿರುದ್ಧ 212 ರನ್​ಗಳ ಗುರಿ ನಿಗಧಿ ಮಾಡಿತ್ತು. ಈ ಗುರಿಯನ್ನು ಲಕ್ನೋ ಕೊನೆಯ ಎಸೆತದಲ್ಲಿ ಮುಟ್ಟಿತ್ತು.

5 / 6
ಏಪ್ರಿಲ್ 9 ರಂದು ಗುಜರಾತ್ ಟೈಟಾನ್ಸ್ ತಂಡ ಕೆಕೆಆರ್ ವಿರುದ್ಧ 204 ರನ್ ಬಾರಿಸಿತ್ತಾದರೂ ಸೋಲನುಭವಿಸಿತ್ತು.

ಏಪ್ರಿಲ್ 9 ರಂದು ಗುಜರಾತ್ ಟೈಟಾನ್ಸ್ ತಂಡ ಕೆಕೆಆರ್ ವಿರುದ್ಧ 204 ರನ್ ಬಾರಿಸಿತ್ತಾದರೂ ಸೋಲನುಭವಿಸಿತ್ತು.

6 / 6
ಹಾಗೆಯೇ ಏಪ್ರಿಲ್ 30 ರಂದು 200 ರನ್ ಗಳಿಸಿದ್ದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್,  ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತ್ತು.

ಹಾಗೆಯೇ ಏಪ್ರಿಲ್ 30 ರಂದು 200 ರನ್ ಗಳಿಸಿದ್ದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತ್ತು.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us