AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Playoffs: ಇಂದಿನ ಪಂದ್ಯದಲ್ಲಿ ಆರ್​ಸಿಬಿ ಸೋತರೆ ಏನು ಗತಿ?: ಇಲ್ಲಿದೆ ಸಂಪೂರ್ಣ ಮಾಹಿತಿ

RCB vs GT, IPL 2023: ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ.

Vinay Bhat
|

Updated on: May 21, 2023 | 10:44 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಎರಡೂ ಕೂಡ ರೋಚಕತೆ ಸೃಷ್ಟಿಸಿದೆ. ಮಧ್ಯಾಹ್ನ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್-ಸನ್​ರೈಸರ್ಸ್ ಮುಖಾಮುಖಿ ಆದರೆ, ದ್ವಿತೀಯ ಪಂದ್ಯ ಆರ್​ಸಿಬಿ-ಗುಜರಾತ್ ನಡುವೆ ನಡೆಯಲಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಎರಡೂ ಕೂಡ ರೋಚಕತೆ ಸೃಷ್ಟಿಸಿದೆ. ಮಧ್ಯಾಹ್ನ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್-ಸನ್​ರೈಸರ್ಸ್ ಮುಖಾಮುಖಿ ಆದರೆ, ದ್ವಿತೀಯ ಪಂದ್ಯ ಆರ್​ಸಿಬಿ-ಗುಜರಾತ್ ನಡುವೆ ನಡೆಯಲಿದೆ.

1 / 7
ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮತ್ತು ಆರ್​ಸಿಬಿಗೆ ಈ ಪಂದ್ಯ ಬಹುಮುಖ್ಯ. ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್​ ನೆಟ್ ರನ್​ರೇಟ್​ ಕಾರಣಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ಕೂಡ 13 ಪಂದ್ಯಗಳಲ್ಲಿ 14 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ 4ನೇ ಸ್ಥಾನದಲ್ಲಿದೆ. ಹಾಗಾದರೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಏನಾಗಲಿದೆ?, ಗೆದ್ದರೆ ಏನಾಗಲಿದೆ?.

ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮತ್ತು ಆರ್​ಸಿಬಿಗೆ ಈ ಪಂದ್ಯ ಬಹುಮುಖ್ಯ. ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್​ ನೆಟ್ ರನ್​ರೇಟ್​ ಕಾರಣಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ಕೂಡ 13 ಪಂದ್ಯಗಳಲ್ಲಿ 14 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ 4ನೇ ಸ್ಥಾನದಲ್ಲಿದೆ. ಹಾಗಾದರೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಏನಾಗಲಿದೆ?, ಗೆದ್ದರೆ ಏನಾಗಲಿದೆ?.

2 / 7
ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ. ಅದೇ ಮುಂಬೈ ಗೆದ್ದರೆ ಆರ್​ಸಿಬಿ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು.

ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ. ಅದೇ ಮುಂಬೈ ಗೆದ್ದರೆ ಆರ್​ಸಿಬಿ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು.

3 / 7
ಎಲ್ಲಾದರು ಮುಂಬೈ ಗೆದ್ದು ಆರ್​ಸಿಬಿ ಸೋತರೆ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ-ಆರ್​ಸಿಬಿ ಎರಡೂ ತಂಡ ಸೋತರೆ ಅತ್ತ ರಾಜಸ್ಥಾನ್ ಕೂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರನ್​ರೇಟ್ ಆಧಾರದ ಮೇಲೆ ಈ ಮೂರು ತಂಡಗಳ ಪೈಕಿ ಒಂದು ಟೀಮ್ ಕ್ವಾಲಿಫೈ ಆಗಲಿದೆ.

ಎಲ್ಲಾದರು ಮುಂಬೈ ಗೆದ್ದು ಆರ್​ಸಿಬಿ ಸೋತರೆ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ-ಆರ್​ಸಿಬಿ ಎರಡೂ ತಂಡ ಸೋತರೆ ಅತ್ತ ರಾಜಸ್ಥಾನ್ ಕೂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರನ್​ರೇಟ್ ಆಧಾರದ ಮೇಲೆ ಈ ಮೂರು ತಂಡಗಳ ಪೈಕಿ ಒಂದು ಟೀಮ್ ಕ್ವಾಲಿಫೈ ಆಗಲಿದೆ.

4 / 7
ಹೀಗಾಗಿ ಆರ್​ಸಿಬಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಫಾಫ್ ಪಡೆಗೆ ಗೆದ್ದರಷ್ಟೆ ಉಳಿಗಾಲ ಎಂದು ಹೇಳಬಹುದು.

ಹೀಗಾಗಿ ಆರ್​ಸಿಬಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಫಾಫ್ ಪಡೆಗೆ ಗೆದ್ದರಷ್ಟೆ ಉಳಿಗಾಲ ಎಂದು ಹೇಳಬಹುದು.

5 / 7
ಇದರ ನಡುವೆ ಆರ್​ಸಿಬಿ-ಜಿಟಿ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಸುರಿದಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಸಂಜೆ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.

ಇದರ ನಡುವೆ ಆರ್​ಸಿಬಿ-ಜಿಟಿ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಸುರಿದಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಸಂಜೆ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.

6 / 7
ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ 15 ಅಂಕ ಸಂಪಾದಿಸುತ್ತದೆ. ಇಲ್ಲುಕೂಡ ಮುಂಬೈ ಸೋತರಷ್ಟೆ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆರ್​ಸಿಬಿ ಯಾವುದೇ ಟೆನ್ಶನ್ ಇಲ್ಲದೆ ಪ್ಲೇ ಆಫ್ ಪ್ರವೇಶಿಸಬೇಕು ಎಂದಾದರೆ ಮುಂಬೈ ವಿರುದ್ಧ ಎಸ್​ಆರ್​​ಹೆಚ್ ಗೆಲ್ಲುವುದು ಮುಖ್ಯ.

ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ 15 ಅಂಕ ಸಂಪಾದಿಸುತ್ತದೆ. ಇಲ್ಲುಕೂಡ ಮುಂಬೈ ಸೋತರಷ್ಟೆ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆರ್​ಸಿಬಿ ಯಾವುದೇ ಟೆನ್ಶನ್ ಇಲ್ಲದೆ ಪ್ಲೇ ಆಫ್ ಪ್ರವೇಶಿಸಬೇಕು ಎಂದಾದರೆ ಮುಂಬೈ ವಿರುದ್ಧ ಎಸ್​ಆರ್​​ಹೆಚ್ ಗೆಲ್ಲುವುದು ಮುಖ್ಯ.

7 / 7
Follow us
‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು