AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Playoffs: ಇಂದಿನ ಪಂದ್ಯದಲ್ಲಿ ಆರ್​ಸಿಬಿ ಸೋತರೆ ಏನು ಗತಿ?: ಇಲ್ಲಿದೆ ಸಂಪೂರ್ಣ ಮಾಹಿತಿ

RCB vs GT, IPL 2023: ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ.

Vinay Bhat
|

Updated on: May 21, 2023 | 10:44 AM

Share
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಎರಡೂ ಕೂಡ ರೋಚಕತೆ ಸೃಷ್ಟಿಸಿದೆ. ಮಧ್ಯಾಹ್ನ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್-ಸನ್​ರೈಸರ್ಸ್ ಮುಖಾಮುಖಿ ಆದರೆ, ದ್ವಿತೀಯ ಪಂದ್ಯ ಆರ್​ಸಿಬಿ-ಗುಜರಾತ್ ನಡುವೆ ನಡೆಯಲಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಎರಡೂ ಕೂಡ ರೋಚಕತೆ ಸೃಷ್ಟಿಸಿದೆ. ಮಧ್ಯಾಹ್ನ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್-ಸನ್​ರೈಸರ್ಸ್ ಮುಖಾಮುಖಿ ಆದರೆ, ದ್ವಿತೀಯ ಪಂದ್ಯ ಆರ್​ಸಿಬಿ-ಗುಜರಾತ್ ನಡುವೆ ನಡೆಯಲಿದೆ.

1 / 7
ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮತ್ತು ಆರ್​ಸಿಬಿಗೆ ಈ ಪಂದ್ಯ ಬಹುಮುಖ್ಯ. ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್​ ನೆಟ್ ರನ್​ರೇಟ್​ ಕಾರಣಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ಕೂಡ 13 ಪಂದ್ಯಗಳಲ್ಲಿ 14 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ 4ನೇ ಸ್ಥಾನದಲ್ಲಿದೆ. ಹಾಗಾದರೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಏನಾಗಲಿದೆ?, ಗೆದ್ದರೆ ಏನಾಗಲಿದೆ?.

ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮತ್ತು ಆರ್​ಸಿಬಿಗೆ ಈ ಪಂದ್ಯ ಬಹುಮುಖ್ಯ. ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್​ ನೆಟ್ ರನ್​ರೇಟ್​ ಕಾರಣಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ಕೂಡ 13 ಪಂದ್ಯಗಳಲ್ಲಿ 14 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ 4ನೇ ಸ್ಥಾನದಲ್ಲಿದೆ. ಹಾಗಾದರೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಏನಾಗಲಿದೆ?, ಗೆದ್ದರೆ ಏನಾಗಲಿದೆ?.

2 / 7
ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ. ಅದೇ ಮುಂಬೈ ಗೆದ್ದರೆ ಆರ್​ಸಿಬಿ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು.

ಆರ್​ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್​ಆರ್​ಹೆಚ್ ಕದನ ಆರ್​ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ. ಅದೇ ಮುಂಬೈ ಗೆದ್ದರೆ ಆರ್​ಸಿಬಿ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು.

3 / 7
ಎಲ್ಲಾದರು ಮುಂಬೈ ಗೆದ್ದು ಆರ್​ಸಿಬಿ ಸೋತರೆ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ-ಆರ್​ಸಿಬಿ ಎರಡೂ ತಂಡ ಸೋತರೆ ಅತ್ತ ರಾಜಸ್ಥಾನ್ ಕೂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರನ್​ರೇಟ್ ಆಧಾರದ ಮೇಲೆ ಈ ಮೂರು ತಂಡಗಳ ಪೈಕಿ ಒಂದು ಟೀಮ್ ಕ್ವಾಲಿಫೈ ಆಗಲಿದೆ.

ಎಲ್ಲಾದರು ಮುಂಬೈ ಗೆದ್ದು ಆರ್​ಸಿಬಿ ಸೋತರೆ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ-ಆರ್​ಸಿಬಿ ಎರಡೂ ತಂಡ ಸೋತರೆ ಅತ್ತ ರಾಜಸ್ಥಾನ್ ಕೂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರನ್​ರೇಟ್ ಆಧಾರದ ಮೇಲೆ ಈ ಮೂರು ತಂಡಗಳ ಪೈಕಿ ಒಂದು ಟೀಮ್ ಕ್ವಾಲಿಫೈ ಆಗಲಿದೆ.

4 / 7
ಹೀಗಾಗಿ ಆರ್​ಸಿಬಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಫಾಫ್ ಪಡೆಗೆ ಗೆದ್ದರಷ್ಟೆ ಉಳಿಗಾಲ ಎಂದು ಹೇಳಬಹುದು.

ಹೀಗಾಗಿ ಆರ್​ಸಿಬಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಫಾಫ್ ಪಡೆಗೆ ಗೆದ್ದರಷ್ಟೆ ಉಳಿಗಾಲ ಎಂದು ಹೇಳಬಹುದು.

5 / 7
ಇದರ ನಡುವೆ ಆರ್​ಸಿಬಿ-ಜಿಟಿ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಸುರಿದಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಸಂಜೆ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.

ಇದರ ನಡುವೆ ಆರ್​ಸಿಬಿ-ಜಿಟಿ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಸುರಿದಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಸಂಜೆ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.

6 / 7
ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ 15 ಅಂಕ ಸಂಪಾದಿಸುತ್ತದೆ. ಇಲ್ಲುಕೂಡ ಮುಂಬೈ ಸೋತರಷ್ಟೆ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆರ್​ಸಿಬಿ ಯಾವುದೇ ಟೆನ್ಶನ್ ಇಲ್ಲದೆ ಪ್ಲೇ ಆಫ್ ಪ್ರವೇಶಿಸಬೇಕು ಎಂದಾದರೆ ಮುಂಬೈ ವಿರುದ್ಧ ಎಸ್​ಆರ್​​ಹೆಚ್ ಗೆಲ್ಲುವುದು ಮುಖ್ಯ.

ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ 15 ಅಂಕ ಸಂಪಾದಿಸುತ್ತದೆ. ಇಲ್ಲುಕೂಡ ಮುಂಬೈ ಸೋತರಷ್ಟೆ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆರ್​ಸಿಬಿ ಯಾವುದೇ ಟೆನ್ಶನ್ ಇಲ್ಲದೆ ಪ್ಲೇ ಆಫ್ ಪ್ರವೇಶಿಸಬೇಕು ಎಂದಾದರೆ ಮುಂಬೈ ವಿರುದ್ಧ ಎಸ್​ಆರ್​​ಹೆಚ್ ಗೆಲ್ಲುವುದು ಮುಖ್ಯ.

7 / 7
ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್