WPL 2024: ಆರ್​ಸಿಬಿ ಕ್ವೀನ್ ಶ್ರೇಯಾಂಕ ಪಾಟೀಲ್​ಗೆ ಬಂತು ಮದುವೆ ಪ್ರಪೋಸಲ್

Shreyanka Patil: ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್​ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

|

Updated on: Feb 28, 2024 | 8:22 PM

ತನ್ನ ಆಲ್‌ರೌಂಡರ್ ಪ್ರದರ್ಶನದಿಂದಲೇ ಆರ್​ಸಿಬಿ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್​ ಆಟಕ್ಕೆ ಮನಸೋಲದವರಿಲ್ಲ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೂ ಸೈ, ಮಧ್ಯಮ ಓವರ್​ಗಳಲ್ಲಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡಿರುವ ಶ್ರೇಯಾಂಕ ಆರ್​ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ತನ್ನ ಆಲ್‌ರೌಂಡರ್ ಪ್ರದರ್ಶನದಿಂದಲೇ ಆರ್​ಸಿಬಿ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್​ ಆಟಕ್ಕೆ ಮನಸೋಲದವರಿಲ್ಲ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೂ ಸೈ, ಮಧ್ಯಮ ಓವರ್​ಗಳಲ್ಲಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡಿರುವ ಶ್ರೇಯಾಂಕ ಆರ್​ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

1 / 8
ಲೀಗ್​ನ ಮೊದಲ ಆವೃತ್ತಿಯಲ್ಲಿ ಬೌಲಿಂಗ್​ನಲ್ಲಿ 6ವಿಕೆಟ್ ಕಬಳಿಸಿದ್ದ ಶ್ರೇಯಾಂಕ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿ 62 ರನ್ ಕಲೆಹಾಕಿದ್ದರು. ಹೀಗಾಗಿ ಎರಡನೇ ಆವೃತ್ತಿಯಲ್ಲಿ ಶ್ರೇಯಾಂಕರನ್ನು ತಂಡದ ಪ್ರಮುಖ ಸದಸ್ಯರನ್ನಾಗಿ ಆಡಿಸಲಾಗುತ್ತಿದೆ.

ಲೀಗ್​ನ ಮೊದಲ ಆವೃತ್ತಿಯಲ್ಲಿ ಬೌಲಿಂಗ್​ನಲ್ಲಿ 6ವಿಕೆಟ್ ಕಬಳಿಸಿದ್ದ ಶ್ರೇಯಾಂಕ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿ 62 ರನ್ ಕಲೆಹಾಕಿದ್ದರು. ಹೀಗಾಗಿ ಎರಡನೇ ಆವೃತ್ತಿಯಲ್ಲಿ ಶ್ರೇಯಾಂಕರನ್ನು ತಂಡದ ಪ್ರಮುಖ ಸದಸ್ಯರನ್ನಾಗಿ ಆಡಿಸಲಾಗುತ್ತಿದೆ.

2 / 8
ಆದರೆ ಎರಡನೇ ಸೀಸನ್​ನಲ್ಲಿ ಇದುವರೆಗೆ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡದ ಶ್ರೇಯಾಂಕ, ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 32 ರನ್ ನೀಡಿದರೆ, ಎರಡನೇ ಪಂದ್ಯದಲ್ಲಿ 1 ಓವರ್ ಬೌಲ್ ಮಾಡಿ 13 ರನ್ ಬಿಟ್ಟುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿಲ್ಲ.

ಆದರೆ ಎರಡನೇ ಸೀಸನ್​ನಲ್ಲಿ ಇದುವರೆಗೆ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡದ ಶ್ರೇಯಾಂಕ, ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 32 ರನ್ ನೀಡಿದರೆ, ಎರಡನೇ ಪಂದ್ಯದಲ್ಲಿ 1 ಓವರ್ ಬೌಲ್ ಮಾಡಿ 13 ರನ್ ಬಿಟ್ಟುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿಲ್ಲ.

3 / 8
ಆದರೂ ಶ್ರೇಯಾಂಕಗಿರುವ ಬೇಡಿಕೆ ಏನು ಕಡಿಮೆಯಾಗಿಲ್ಲ. ಈ ನಡುವೆ ಶ್ರೇಯಾಂಕ ತನ್ನ ಆಟದ ಹೊರತಾಗಿ ಮೈದಾನದಲ್ಲಿ ನಡೆದ ಅಪರೂಪದ ಘಟನೆಯಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಲೈವ್ ಪಂದ್ಯದ ವೇಳೆ ಶ್ರೇಯಾಂಕಗೆ ಮದುವೆ ಪ್ರಪೋಸಲ್ ಬಂದಿದ್ದು, ಯುವಕನ ಮದುವೆ ನಿವೇದನೆಯ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಆದರೂ ಶ್ರೇಯಾಂಕಗಿರುವ ಬೇಡಿಕೆ ಏನು ಕಡಿಮೆಯಾಗಿಲ್ಲ. ಈ ನಡುವೆ ಶ್ರೇಯಾಂಕ ತನ್ನ ಆಟದ ಹೊರತಾಗಿ ಮೈದಾನದಲ್ಲಿ ನಡೆದ ಅಪರೂಪದ ಘಟನೆಯಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಲೈವ್ ಪಂದ್ಯದ ವೇಳೆ ಶ್ರೇಯಾಂಕಗೆ ಮದುವೆ ಪ್ರಪೋಸಲ್ ಬಂದಿದ್ದು, ಯುವಕನ ಮದುವೆ ನಿವೇದನೆಯ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

4 / 8
ವಾಸ್ತವವಾಗಿ ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್​ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಾಸ್ತವವಾಗಿ ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್​ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

5 / 8
ಬೆಂಗಳೂರು ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆರ್‌ಸಿಬಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಪ್ಲೇ ಕಾರ್ಡ್ ಹಿಡಿದು ಶ್ರೇಯಾಂಕಾ ಪಾಟೀಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲಿ ವಿಲ್ ಯು ಮ್ಯಾರಿ ಮಿ.. ಶ್ರೇಯಾಂಕಾ ಪಾಟೀಲ್ ಎಂದು ಬರೆದುಕೊಂಡಿದ್ದಾನೆ.

ಬೆಂಗಳೂರು ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆರ್‌ಸಿಬಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಪ್ಲೇ ಕಾರ್ಡ್ ಹಿಡಿದು ಶ್ರೇಯಾಂಕಾ ಪಾಟೀಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲಿ ವಿಲ್ ಯು ಮ್ಯಾರಿ ಮಿ.. ಶ್ರೇಯಾಂಕಾ ಪಾಟೀಲ್ ಎಂದು ಬರೆದುಕೊಂಡಿದ್ದಾನೆ.

6 / 8
ಪ್ಲೇ ಕಾರ್ಡ್ ನಲ್ಲಿ ಬರೆದಿದ್ದ ಮದುವೆ ಪ್ರಸ್ತಾವನೆಯ ವಿಡಿಯೋ ಮೈದಾನದ ಪ್ರೊಜೆಕ್ಟರ್​ನಲ್ಲಿ ಭಿತ್ತರವಾಗುತ್ತಿದ್ದಂತೆ ಬೆಂಗಳೂರು ತಂಡದ ಡಗ್ ಔಟ್​ನಲ್ಲಿ ಕುಳಿತಿದ್ದ ಇತರೆ ಆಟಗಾರ್ತಿಯರು ನಗಲಾರಂಭಿಸಿದರು. ಇತ್ತ ಯುವಕ ಕೂಡ ತನ್ನ ಪ್ಲೇ ಕಾರ್ಡ್ ಭಿತ್ತರವಾಗಿದ್ದನ್ನು ಕಂಡ ಹರ್ಷ ವ್ಯಕ್ತಪಡಿಸಿದ್ದಾನೆ.

ಪ್ಲೇ ಕಾರ್ಡ್ ನಲ್ಲಿ ಬರೆದಿದ್ದ ಮದುವೆ ಪ್ರಸ್ತಾವನೆಯ ವಿಡಿಯೋ ಮೈದಾನದ ಪ್ರೊಜೆಕ್ಟರ್​ನಲ್ಲಿ ಭಿತ್ತರವಾಗುತ್ತಿದ್ದಂತೆ ಬೆಂಗಳೂರು ತಂಡದ ಡಗ್ ಔಟ್​ನಲ್ಲಿ ಕುಳಿತಿದ್ದ ಇತರೆ ಆಟಗಾರ್ತಿಯರು ನಗಲಾರಂಭಿಸಿದರು. ಇತ್ತ ಯುವಕ ಕೂಡ ತನ್ನ ಪ್ಲೇ ಕಾರ್ಡ್ ಭಿತ್ತರವಾಗಿದ್ದನ್ನು ಕಂಡ ಹರ್ಷ ವ್ಯಕ್ತಪಡಿಸಿದ್ದಾನೆ.

7 / 8
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 7 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಉತ್ತರವಾಗಿ ಬೆಂಗಳೂರು 13ನೇ ಓವರ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ದಾಟಿತು. ಹೀಗಾಗಿ ಬೆಂಗಳೂರು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 7 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಉತ್ತರವಾಗಿ ಬೆಂಗಳೂರು 13ನೇ ಓವರ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ದಾಟಿತು. ಹೀಗಾಗಿ ಬೆಂಗಳೂರು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.

8 / 8
Follow us
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?