AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗನ್ನಾಥನ ದರ್ಶನ ಪಡೆದ ನಾಗ ಚೈತನ್ಯ-ಶೋಭಿತಾ ದಂಪತಿ

ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಇತ್ತೀಚೆಗೆ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಅವರ ವೈವಾಹಿಕ ಜೀವನದ ಆರಂಭದ ನಂತರದ ಮೊದಲ ದೇವಸ್ಥಾನ ಭೇಟಿ ಇದಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ನಾಗ ಚೈತನ್ಯ ಅವರ ಮುಂಬರುವ 'ವೃಷಕರ್ಮ' ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದೆ.

ಜಗನ್ನಾಥನ ದರ್ಶನ ಪಡೆದ ನಾಗ ಚೈತನ್ಯ-ಶೋಭಿತಾ ದಂಪತಿ
Nag Chaitanya
ರಾಜೇಶ್ ದುಗ್ಗುಮನೆ
|

Updated on: Mar 07, 2026 | 9:09 AM

Share

ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಹಾಗೂ ಅವರ ಪತ್ನಿ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ನಾಗ ಚೈತನ್ಯ ಅವರು ‘ಯೆ ಮಾಯ ಚೇಸಾವೆ’ ಚಿತ್ರದ ಮೂಲಕ ಸೂಪರ್ ಹಿಟ್ ಆದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ‘ವೃಷಕರ್ಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಗ್ಲಿಂಪ್ಸ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಕಾರ್ತಿಕ್ ದಂಡು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಚೈತನ್ಯಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಈ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ನಾಗ ಚೈತನ್ಯ ಅವರು ದೇವರ ದರ್ಶನ ಪಡೆದಿದ್ದಾರೆ.

ಇತ್ತೀಚೆಗೆ, ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಂಪತಿ ಭಗವಂತನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರಿಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ನಾಗ ಚೈತನ್ಯ ಹಾಗೂ ಶೋಭಿತಾ 2024ರಲ್ಲಿ ವಿವಾಹ ಆದರು. ಸಮಂತಾ ಜೊತೆ ಬೇರೆ ಆದ ಬಳಿಕ ನಾಗ ಚೈತನ್ಯ ಅವರು ಒಂಟಿಯಾಗಿದ್ದರು. ಆಗ ಅವರಿಗೆ ಶೋಭಿತಾ ಪರಿಚಯ ಆಯಿತು. ಇಬ್ಬರ ಮಧ್ಯೆ ಪ್ರೀತಿ ಮೂಡಿ, ವಿವಾಹ ಆದರು. ಅತ್ತ ಸಮಂತಾ ಕೂಡ ನಿರ್ದೇಶಕ ರಾಜ್ ಜೊತೆ ಹಸೆಮಣೆ ಏರಿದರು.

ಇದನ್ನೂ ಓದಿ: ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?

ಇತ್ತೀಚೆಗೆ ಬಿಡುಗಡೆಯಾದ ‘ವೃಷಕರ್ಮ’ ಗ್ಲಿಂಪ್ಸಸ್ ವಿಷಯಕ್ಕೆ ಬಂದರೆ, ‘ಅಲೌಕಿಕ ಶಕ್ತಿ ಜಾಗೃತವಾದಾಗ, ಸೃಷ್ಟಿ ನಿಯಮ ಉಲ್ಲಂಘಿಸಿದಾಗ, ವಿಧಿ ವೃಷಕರ್ಮನನ್ನು ಆಯ್ಕೆ ಮಾಡಿದಾಗ’ ಎಂಬ ಡೈಲಾಗ್ ಗಮನ ಸೆಳೆದಿದೆ. ನಾಗ ಚೈತನ್ಯ ಅವರು ಸಿನಿಮಾ ಮೂಲಕ ಆ್ಯಕ್ಷನ್ ಮೆರೆಯಲು ರೆಡಿ ಆಗಿದ್ದಾರೆ. ಈ ಚಿತ್ರದ ಕಾರ್ಯಕ್ರಮದ ವೇಳೆ ನಾಗ ಚೈತನ್ಯ ಅವರು ಚೇರ್​​ನಿಂದ ಬಿದ್ದು ಸುದ್ದಿ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us