AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಮೊದಲ ಹಿಮಪಾತ; ಶಿಮ್ಲಾ, ಗುಲ್ಮಾರ್ಗ್, ಮನಾಲಿಯಲ್ಲಿ ಪ್ರವಾಸಿಗರ ದಂಡು

ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಶಿಮ್ಲಾ, ಕಸೌಲಿ, ಗುಲ್ಮಾರ್ಗ್, ಮನಾಲಿಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಿಮಾಚಲ ಪ್ರದೇಶದ ಹೆಚ್ಚಿನ ಪ್ರದೇಶಗಳು ಮತ್ತು ಪ್ರಮುಖ ಪಟ್ಟಣಗಳಾದ ಶಿಮ್ಲಾ, ಮನಾಲಿ ಮತ್ತು ಕುಫ್ರಿ ಭಾನುವಾರ ಲಘು ಹಿಮಪಾತವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿಯೂ ತಾಪಮಾನ ಗಣನೀಯವಾಗಿ ಕುಸಿದಿದೆ.

ಸುಷ್ಮಾ ಚಕ್ರೆ
|

Updated on: Dec 09, 2024 | 1:32 PM

Share
ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ 'ಅದ್ಭುತ'ವಾಗಿ ರೂಪಾಂತರಗೊಂಡಿದೆ.

ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ 'ಅದ್ಭುತ'ವಾಗಿ ರೂಪಾಂತರಗೊಂಡಿದೆ.

1 / 10
ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.

ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.

2 / 10
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರದೇಶಗಳು ಭಾನುವಾರ ಋತುವಿನ ಮೊದಲ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರದೇಶಗಳು ಭಾನುವಾರ ಋತುವಿನ ಮೊದಲ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.

3 / 10
ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಇಲ್ಲಿ ಎರಡರಿಂದ ಮೂರು ಇಂಚುಗಳಷ್ಟು ಹಿಮವು ಸಂಗ್ರಹವಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಇಲ್ಲಿ ಎರಡರಿಂದ ಮೂರು ಇಂಚುಗಳಷ್ಟು ಹಿಮವು ಸಂಗ್ರಹವಾಗಿದೆ.

4 / 10
ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

5 / 10
ಶಿಮ್ಲಾ ಮತ್ತು ಪಕ್ಕದ ಪ್ರವಾಸಿ ರೆಸಾರ್ಟ್ ಪಟ್ಟಣಗಳಾದ ಕುಫ್ರಿ ಮತ್ತು ಫಾಗು ಭಾನುವಾರದಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದವು.

ಶಿಮ್ಲಾ ಮತ್ತು ಪಕ್ಕದ ಪ್ರವಾಸಿ ರೆಸಾರ್ಟ್ ಪಟ್ಟಣಗಳಾದ ಕುಫ್ರಿ ಮತ್ತು ಫಾಗು ಭಾನುವಾರದಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದವು.

6 / 10
ತಾಜಾ ಹಿಮಪಾತದಿಂದ ಲಾಹೌಲ್‌ನ ರಸ್ತೆಗಳು ಹಿಮದ ತೆಳುವಾದ ಪದರದಿಂದ ಮುಚ್ಚಲ್ಪಟ್ಟವು. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತಾಜಾ ಹಿಮಪಾತದಿಂದ ಲಾಹೌಲ್‌ನ ರಸ್ತೆಗಳು ಹಿಮದ ತೆಳುವಾದ ಪದರದಿಂದ ಮುಚ್ಚಲ್ಪಟ್ಟವು. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

7 / 10
ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂನಂತಹ ಗಿರಿಧಾಮಗಳು ತಾಜಾ ಹಿಮಪಾತವನ್ನು ಅನುಭವಿಸಿದವು. ಗುಲ್ಮಾರ್ಗ್ ಮತ್ತು ಬೋಟಪತ್ರಿ ಪ್ರದೇಶದ ಪ್ರವಾಸಿಗರು ಹಿಮಪಾತದಿಂದ ಸಂಚರಿಸಲು ಪರದಾಡಿದರು.

ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂನಂತಹ ಗಿರಿಧಾಮಗಳು ತಾಜಾ ಹಿಮಪಾತವನ್ನು ಅನುಭವಿಸಿದವು. ಗುಲ್ಮಾರ್ಗ್ ಮತ್ತು ಬೋಟಪತ್ರಿ ಪ್ರದೇಶದ ಪ್ರವಾಸಿಗರು ಹಿಮಪಾತದಿಂದ ಸಂಚರಿಸಲು ಪರದಾಡಿದರು.

8 / 10
ಪ್ರವಾಸಿಗರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣ ಟಂಗ್‌ಮಾರ್ಗ್‌ನಿಂದ ಗುಲ್ಮಾರ್ಗ್‌ಗೆ ಚೈನ್‌ಗಳಿಲ್ಲದ ವಾಹನಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

ಪ್ರವಾಸಿಗರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣ ಟಂಗ್‌ಮಾರ್ಗ್‌ನಿಂದ ಗುಲ್ಮಾರ್ಗ್‌ಗೆ ಚೈನ್‌ಗಳಿಲ್ಲದ ವಾಹನಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

9 / 10
ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಅದೇ ರೀತಿ, ಶ್ರೀನಗರ-ಲೇಹ್ ಮತ್ತು ಬಂಡಿಪೋರಾ-ಗುರೆಜ್ ರಸ್ತೆಗಳು ಸಹ ಹಿಮದಿಂದ ಕೂಡಿದ್ದು, ಸಂಪರ್ಕದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ.

ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಅದೇ ರೀತಿ, ಶ್ರೀನಗರ-ಲೇಹ್ ಮತ್ತು ಬಂಡಿಪೋರಾ-ಗುರೆಜ್ ರಸ್ತೆಗಳು ಸಹ ಹಿಮದಿಂದ ಕೂಡಿದ್ದು, ಸಂಪರ್ಕದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ.

10 / 10
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ