AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಮೊದಲ ಹಿಮಪಾತ; ಶಿಮ್ಲಾ, ಗುಲ್ಮಾರ್ಗ್, ಮನಾಲಿಯಲ್ಲಿ ಪ್ರವಾಸಿಗರ ದಂಡು

ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಶಿಮ್ಲಾ, ಕಸೌಲಿ, ಗುಲ್ಮಾರ್ಗ್, ಮನಾಲಿಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಿಮಾಚಲ ಪ್ರದೇಶದ ಹೆಚ್ಚಿನ ಪ್ರದೇಶಗಳು ಮತ್ತು ಪ್ರಮುಖ ಪಟ್ಟಣಗಳಾದ ಶಿಮ್ಲಾ, ಮನಾಲಿ ಮತ್ತು ಕುಫ್ರಿ ಭಾನುವಾರ ಲಘು ಹಿಮಪಾತವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿಯೂ ತಾಪಮಾನ ಗಣನೀಯವಾಗಿ ಕುಸಿದಿದೆ.

ಸುಷ್ಮಾ ಚಕ್ರೆ
|

Updated on: Dec 09, 2024 | 1:32 PM

Share
ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ 'ಅದ್ಭುತ'ವಾಗಿ ರೂಪಾಂತರಗೊಂಡಿದೆ.

ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ 'ಅದ್ಭುತ'ವಾಗಿ ರೂಪಾಂತರಗೊಂಡಿದೆ.

1 / 10
ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.

ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.

2 / 10
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರದೇಶಗಳು ಭಾನುವಾರ ಋತುವಿನ ಮೊದಲ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರದೇಶಗಳು ಭಾನುವಾರ ಋತುವಿನ ಮೊದಲ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.

3 / 10
ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಇಲ್ಲಿ ಎರಡರಿಂದ ಮೂರು ಇಂಚುಗಳಷ್ಟು ಹಿಮವು ಸಂಗ್ರಹವಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಇಲ್ಲಿ ಎರಡರಿಂದ ಮೂರು ಇಂಚುಗಳಷ್ಟು ಹಿಮವು ಸಂಗ್ರಹವಾಗಿದೆ.

4 / 10
ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

5 / 10
ಶಿಮ್ಲಾ ಮತ್ತು ಪಕ್ಕದ ಪ್ರವಾಸಿ ರೆಸಾರ್ಟ್ ಪಟ್ಟಣಗಳಾದ ಕುಫ್ರಿ ಮತ್ತು ಫಾಗು ಭಾನುವಾರದಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದವು.

ಶಿಮ್ಲಾ ಮತ್ತು ಪಕ್ಕದ ಪ್ರವಾಸಿ ರೆಸಾರ್ಟ್ ಪಟ್ಟಣಗಳಾದ ಕುಫ್ರಿ ಮತ್ತು ಫಾಗು ಭಾನುವಾರದಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದವು.

6 / 10
ತಾಜಾ ಹಿಮಪಾತದಿಂದ ಲಾಹೌಲ್‌ನ ರಸ್ತೆಗಳು ಹಿಮದ ತೆಳುವಾದ ಪದರದಿಂದ ಮುಚ್ಚಲ್ಪಟ್ಟವು. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತಾಜಾ ಹಿಮಪಾತದಿಂದ ಲಾಹೌಲ್‌ನ ರಸ್ತೆಗಳು ಹಿಮದ ತೆಳುವಾದ ಪದರದಿಂದ ಮುಚ್ಚಲ್ಪಟ್ಟವು. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

7 / 10
ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂನಂತಹ ಗಿರಿಧಾಮಗಳು ತಾಜಾ ಹಿಮಪಾತವನ್ನು ಅನುಭವಿಸಿದವು. ಗುಲ್ಮಾರ್ಗ್ ಮತ್ತು ಬೋಟಪತ್ರಿ ಪ್ರದೇಶದ ಪ್ರವಾಸಿಗರು ಹಿಮಪಾತದಿಂದ ಸಂಚರಿಸಲು ಪರದಾಡಿದರು.

ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂನಂತಹ ಗಿರಿಧಾಮಗಳು ತಾಜಾ ಹಿಮಪಾತವನ್ನು ಅನುಭವಿಸಿದವು. ಗುಲ್ಮಾರ್ಗ್ ಮತ್ತು ಬೋಟಪತ್ರಿ ಪ್ರದೇಶದ ಪ್ರವಾಸಿಗರು ಹಿಮಪಾತದಿಂದ ಸಂಚರಿಸಲು ಪರದಾಡಿದರು.

8 / 10
ಪ್ರವಾಸಿಗರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣ ಟಂಗ್‌ಮಾರ್ಗ್‌ನಿಂದ ಗುಲ್ಮಾರ್ಗ್‌ಗೆ ಚೈನ್‌ಗಳಿಲ್ಲದ ವಾಹನಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

ಪ್ರವಾಸಿಗರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣ ಟಂಗ್‌ಮಾರ್ಗ್‌ನಿಂದ ಗುಲ್ಮಾರ್ಗ್‌ಗೆ ಚೈನ್‌ಗಳಿಲ್ಲದ ವಾಹನಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

9 / 10
ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಅದೇ ರೀತಿ, ಶ್ರೀನಗರ-ಲೇಹ್ ಮತ್ತು ಬಂಡಿಪೋರಾ-ಗುರೆಜ್ ರಸ್ತೆಗಳು ಸಹ ಹಿಮದಿಂದ ಕೂಡಿದ್ದು, ಸಂಪರ್ಕದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ.

ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಅದೇ ರೀತಿ, ಶ್ರೀನಗರ-ಲೇಹ್ ಮತ್ತು ಬಂಡಿಪೋರಾ-ಗುರೆಜ್ ರಸ್ತೆಗಳು ಸಹ ಹಿಮದಿಂದ ಕೂಡಿದ್ದು, ಸಂಪರ್ಕದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ.

10 / 10
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?