
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಶ್ರೀ ಗಂಗಾಜಲ ಮತ್ತು ತುಂಗಾಜಲ ಚೌಡೇಶ್ವರಿ ಅಮ್ಮನವರ ಜಾತ್ರಾ ಪ್ರಯುಕ್ತ ನಡೆದ ಕುಸ್ತಿಯ ಸೆಣಸಾಟ ನೋಡಲು ಜನಸಾಗರವೇ ಹರಿದು ಬಂದಿತ್ತು. ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಬೀರೆಶ್ವರ ವ್ಯಾಯಾಮ ಶಾಲೆಯ ವತಿಯಿಂದ ಕುಸ್ತಿ ಪಂದ್ಯಾವಳಿ ನಡೆಸಲಾಯಿತು.

ಈ ಬಯಲು ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು. ಪ್ರಥಮ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಕೊಡವಿ ಹೋರಾಡಿದರು. ಇದನ್ನು ಕಂಡು ಕುಸ್ತಿ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನು ಇಂದಿನ ಮಕ್ಕಳು ಮೊಬೈಲ್ಗೆ ದಾಸರಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ತಂದೆ-ತಾಯಿ ಎಚ್ಚೆತ್ತುಕೊಂಡು ಮಕ್ಕಳನ್ನು ಪೈಲ್ವಾನರಾಗಲು ಹುರಿದುಂಬಿಸಬೇಕು, ದೇಹ ದಂಡಿಸಿ ಗಟ್ಟಿಮುಟ್ಟಾಗಿ ಕುಸ್ತಿ ಪಟುವಾಗಲು ಮುಂದಾಗಬೇಕು ಅಂತಾರೆ ಕುಸ್ತಿ ಅಭಿಮಾನಿಗಳು.

ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಥಮ ಬಹುಮಾನವಾಗಿ ಎರಡು ಲಕ್ಷ ಬೆಳ್ಳಿ ಗದೆ. ದ್ವಿತಿಯ ಬಹುಮಾನ ಒಂದು ಲಕ್ಷ ಬೆಳ್ಳಿ ಗದೆ. ತೃತಿಯ ಬಹುಮಾನ 50 ಸಾವಿರಾರದಂತೆ ಕಮಿಟಿಯವರು ಬಹುಮಾನ ಘೋಷಣೆ ಮಾಡಿದರು.

ಈ ವೇಳೆ 34 ಜೊತೆ ಕಾಟಾ ನಿಕಾಲಿ ಕುಸ್ತಿಪಟುಗಳನ್ನು ಆಡಿಸಲಾಯಿತು. ಕಟ್ಟುಮಸ್ತಾದ ಪೈಲ್ವಾನರು ಉಪಾಯದಿಂದ ಎದುರಾಳಿಗಳ ಜೊತೆ ಕಾದಾಡಿ ನೇರಿದಿದ್ದ ಜನರನ್ನ ಕುಣಿದು ಕುಪ್ಪಳಿಸುವಂತೆ ಮಾಡಿದರು. ಬಹಳ ಅಚ್ಚುಕಟ್ಟಾಗಿ ಪಂದ್ಯವನ್ನು ಆಯೋಜಕರಾದ ರಾಜು ಮೈಲಾರ ಅವರು ಏರ್ಪಡಿಸಿ, ಕುಸ್ತಿಪಟುಗಳು ಶ್ರಮದ ಬಗ್ಗೆ ಮಾತಾಡಿದರು.

ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ ಕಾಪಾಡಿ,ಉಳಿಸಿ ಬೆಳಸಬೇಕು ಮತ್ತು ನಶಿಸಿ ಹೋಗುತ್ತಿರುವ ಗರಡಿಮನೆಗಳ ಅಭಿವೃದ್ಧಿ ಗಾಗಿ ಸರ್ಕಾರ ಮುಂದಾಗಬೇಕು ಗರಡಿ ಮನೆಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಒಟ್ಟಾರೆಯಾಗಿ ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಗರಡಿಮನಿಗಳು ಅಳವಿಂಚಿನಲ್ಲಿ ಇವೆ.ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾಟಗಳನ್ನು ಮಾಡುವ ಮೂಲಕ ಕುಸ್ತಿ ಆಟವನ್ನ ಮತ್ತಷ್ಟು ಜೀವಂತವಾಗಿರಿಸಿದೆ.