Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿಯಲ್ಲಿ ತಲೆಎತ್ತಿದ ಸ್ಕೈ ಬ್ರಿಡ್ಜ್; ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವ ಅನುಭವ

ಕೊಡಗು ಜಿಲ್ಲೆ ಇತ್ತೀಚೆಗೆ ಸಾಹ ಪ್ರವಾಸೋಧ್ಯಮಕ್ಕೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿದೆ. ಜಲಸಾಹಸ ಕ್ರಿಡೆ ಬೆನ್ನಿಗೇ ಇದೀಗ ಅತ್ಯದ್ಭುತ ಎನ್ನಬಹುದಾದ ಸ್ಕೈ ವೇ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಸಖತ್ ಥ್ರಿಲ್ ನೀಡಲು ಸಜ್ಜಾಗಿರೋ ಈ ಸೇತುವೆ ಇದೀಗ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on:May 01, 2024 | 4:22 PM

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ, ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದಲ್ಲಿ ಕಂಡು ಬರೋ ದೃಶ್ಯವಲ್ಲ. ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರುವುದು ನಮ್ಮ ಮಡಿಕೇರಿಯಲ್ಲಿ.

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ, ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದಲ್ಲಿ ಕಂಡು ಬರೋ ದೃಶ್ಯವಲ್ಲ. ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರುವುದು ನಮ್ಮ ಮಡಿಕೇರಿಯಲ್ಲಿ.

1 / 6
ಹೌದು,ಮಡಿಕೇರಿ ನಗರದಿಂದ 5 ಕಿಲೋ ಮೀಟರ್ ದೂರದ ನಂದಿ​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ ರೆಸ್ತೆಯಲ್ಲೇ ಈ ಸ್ಕೈ ಬ್ರಿಡ್ಜ್​ ಇದೆ.

ಹೌದು,ಮಡಿಕೇರಿ ನಗರದಿಂದ 5 ಕಿಲೋ ಮೀಟರ್ ದೂರದ ನಂದಿ​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ ರೆಸ್ತೆಯಲ್ಲೇ ಈ ಸ್ಕೈ ಬ್ರಿಡ್ಜ್​ ಇದೆ.

2 / 6
ಈ ಗ್ರಾಮದ ಭೀಮಯ್ಯ ಎಂಬುವವರು ಕಳೆದ 8 ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್​ನ್ನು ನಿರ್ಮಿಸಿದ್ದಾರೆ. ಇದಕ್ಕೆ 33 ಎಂಎಂ ದಪ್ಪದ ಗ್ಲಾಸ್ ಅನ್ನ ಮೂರು ಲೇಯರ್​ನಲ್ಲಿ ಬಳಸಲಾಗಿದ್ದು
ಒಟ್ಟು 80 ಅಡಿ ಉದ್ದವಿದ್ದು 250 ಅಡಿ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್​​ ಆಗಿ ಹೊರಹೊಮ್ಮಿದೆ.

ಈ ಗ್ರಾಮದ ಭೀಮಯ್ಯ ಎಂಬುವವರು ಕಳೆದ 8 ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್​ನ್ನು ನಿರ್ಮಿಸಿದ್ದಾರೆ. ಇದಕ್ಕೆ 33 ಎಂಎಂ ದಪ್ಪದ ಗ್ಲಾಸ್ ಅನ್ನ ಮೂರು ಲೇಯರ್​ನಲ್ಲಿ ಬಳಸಲಾಗಿದ್ದು ಒಟ್ಟು 80 ಅಡಿ ಉದ್ದವಿದ್ದು 250 ಅಡಿ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್​​ ಆಗಿ ಹೊರಹೊಮ್ಮಿದೆ.

3 / 6
ಕಳೆದ ಭಾನುವಾರ ಈ ಸೇತುವೆ ಲೋಕಾರ್ಪಣಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವೀವ್ ಪಾಯಿಂಟ್​ಗೆ ತಲುಪಿದ ಮೇಲೆ
ಕೆಳಗಡೆ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

ಕಳೆದ ಭಾನುವಾರ ಈ ಸೇತುವೆ ಲೋಕಾರ್ಪಣಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವೀವ್ ಪಾಯಿಂಟ್​ಗೆ ತಲುಪಿದ ಮೇಲೆ ಕೆಳಗಡೆ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

4 / 6
ಈ ವೀವ್ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸಂದರ್ಯ ಕಾಣಿಸಿದ್ರೆ, ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.
ಒಮ್ಮೆಗೆ ಕೇವಲ 10 ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು, ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

ಈ ವೀವ್ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸಂದರ್ಯ ಕಾಣಿಸಿದ್ರೆ, ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ. ಒಮ್ಮೆಗೆ ಕೇವಲ 10 ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು, ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

5 / 6
 ಕೊಡಗಿನಲ್ಲಿ ವಿಶ್ದರ್ಜೆಯ ಸಾಹಸ ಪ್ರವಾಸೋಧ್ಯಮ ಬೇಕು ಎಂದು ಬಯಸುವವರಿಗೆ ಈ ಸ್ಕೈ ಬ್ರಿಡ್ಜ್​ ಸಖತ್​ ಥ್ರಿಲ್ ನೀಡಲಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋಧ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ,

ಕೊಡಗಿನಲ್ಲಿ ವಿಶ್ದರ್ಜೆಯ ಸಾಹಸ ಪ್ರವಾಸೋಧ್ಯಮ ಬೇಕು ಎಂದು ಬಯಸುವವರಿಗೆ ಈ ಸ್ಕೈ ಬ್ರಿಡ್ಜ್​ ಸಖತ್​ ಥ್ರಿಲ್ ನೀಡಲಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋಧ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ,

6 / 6

Published On - 4:21 pm, Wed, 1 May 24

Follow us
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು