
ಆರೋಪಿಗಳು


ಇದರ ಮಧ್ಯೆ ಮೋಸ ಹೋದ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಹಾಲಶ್ರೀ ಯಡಿಯೂರಪ್ಪನವರನ್ನು ಪರಿಚಯಿಸಿದ್ದು, ಇದೀಗ ಫೋಟೋಗಳು ವೈರಲ್ ಆಗುತ್ತಿವೆ.

ಬೈಂದೂರು ವಿಧಾನಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿಯನ್ನು ಬಿಎಸ್ ಯಡಿಯೂರಪ್ಪ ಅವರಿಗೆ ಪರಿಚಯಿಸುವ ಮೂಲಕ ಹಾಲಶ್ರೀ ತಮಗೆ ಇರುವ ಪ್ರಭಾವವನ್ನು ತೋರಿಸುವ ಪ್ರಯತ್ನ ಮಾಡಿದ್ದರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ

ಹಾಗಾದರೆ ಹಾಲಶ್ರೀ, ಬಿಎಸ್ ಯಡಿಯೂರಪ್ಪ, ಗೋವಿಂದ ಪೂಜಾರಿ ಭೇಟಿಯ ರಹಸ್ಯ ಏನು? ಉದ್ಯಮಿ ಗೋವಿಂದ ಬಾಬು ಪೂಜಾರಿಯವರನ್ನು ಬಿಎಸ್ವೈಗೆ ಪರಿಚಯಿಸಿದ ಉದ್ದೇಶ ಏನು? ವಂಚನೆಗೊಂಡ ಗೋವಿಂದಬಾಬು ಅವರನ್ನು ಪರಿಚಿಯಿಸಿದ್ದು ಯಾಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುಕೊಂಡಿವೆ.

ಅಭಿನವ ಹಾಲಶ್ರೀ

ಒಟ್ಟಿನಲ್ಲಿ ಚೈತ್ರಾ ಕುಂದಾಪುರ ನಾಟಕ ಡ್ರಾಮಾದಲ್ಲಿ ಹಾಲಶ್ರೀ ಸಹ ಪ್ರಮುಖ ಕಿಂಗ್ಪಿನ್ ಆಗಿದ್ದು, ಹಾಲಶ್ರೀ ಬಂಧನವಾದರೆ ದೊಡ್ಡ ದೊಡ್ಡ ಹೆಸರು ಬಯಲಿಗೆ ಬರಲಿವೆ ಎಂದು ಚೈತ್ರಾ ಹೇಳಿಕೆ ನೀಡಿದ್ದಾಳೆ. ಆದ್ರೆ, ಸ್ವಾಮೀಜಿ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ್ದಾರೆ.
Published On - 4:47 pm, Mon, 18 September 23