ರಾಯಚೂರು: ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನಡೆಯಿತು ಕೃಷಿ ಪಾಠ
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಸರ್ಕಾರಿ ಶಾಲೆ ಈಗ ಮಾದರಿ ಪಾಠ ಶಾಲೆಯಾಗಿದೆ. ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ನಾಟಿ ಮಾಡಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಕೃಷಿಯ ಪಾಠ ಹೇಳಿಕೊಟ್ಟಿದ್ದಾರೆ. ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೃಷಿ ಪಾಠ ಮಾಡಿದ್ದಾರೆ. ಶಾಲೆಯಲ್ಲಿ ಪ್ರತಿ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಲಾಗುತ್ತೆ. ಇದರ ಅಂಗವಾಗಿ ಈ ಬಾರಿ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Updated on: Sep 19, 2023 | 10:50 AM

ಶಿಕ್ಷಣವೆಂಬುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರುವ ಇಂದಿನ ದಿನಗಳಲ್ಲಿ ಈ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗದ್ದೆಗೆ ಇಳಿದು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಾಟಿ ಮಾಡುವುದು, ಕೃಷಿ ಬಳಕೆಯ ವಸ್ತುಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಸರ್ಕಾರಿ ಶಾಲೆ ಈಗ ಮಾದರಿ ಪಾಠ ಶಾಲೆಯಾಗಿದೆ. ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ನಾಟಿ ಮಾಡಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಕೃಷಿಯ ಪಾಠ ಹೇಳಿಕೊಟ್ಟಿದ್ದಾರೆ.

ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೃಷಿ ಪಾಠ ಮಾಡಿದ್ದಾರೆ. ಶಾಲೆಯಲ್ಲಿ ಪ್ರತಿ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಲಾಗುತ್ತೆ. ಇದರ ಅಂಗವಾಗಿ ಈ ಬಾರಿ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳಿಕೆ ಕೃಷಿ ಪರಿಕರಗಳನ್ನ ಪರಿಚಯಿಸಿ, ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. ಶಿಕ್ಷಕರಾದ ಸುನೀತಾ ನೇತೃತ್ವದಲ್ಲಿ ಮಕ್ಕಳ ತಂಡ ಗದ್ದೆಯಲ್ಲಿ ನಾಟಿ ಮಾಡಿತು.

ಮಣ್ಣಿನ ಫಲವತ್ತತೆ, ಸಾವಯವ ಕೃಷಿ, ರಾಸಾಯನಿಕ ಗೊಬ್ಬರ ಬಳಕೆ, ಏಕದಳ, ದ್ವಿದಳ ಬೆಳೆಗಳ ಮಾಹಿತಿ ಸೇರಿದಂತೆ ಹೊಸ ತಳಿಗಳ ಬಗ್ಗೆ ಶಿಕ್ಷಕರು ಮಾಹಿತಿ ನೀಡಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದರು.

ಹಾಗೂ ರೈತನ ಕಷ್ಟ ಹೇಗಿರುತ್ತೆ, ದೇಶದ ಬೆಳವಣಿಗೆಗೆ ರೈತನ ಪಾತ್ರವೇನು? ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಜೇನುಕೃಷಿ, ಸೌರಶಕ್ತಿ ಬಳಕೆ, ಕೀಟ ನಿಯಂತ್ರಣ ತಿಳಿಸಿಕೊಡಲಾಯಿತು.

ಹನಿ ನೀರಾವರಿ ಹಾಗೂ ಕೃಷಿ ಸಂಬಂಧಿತ ಇನ್ನಿತರ ವಿಷಯಗಳ ಬಗ್ಗೆ ಶಿಕ್ಷಕರು ಪ್ರಾಕ್ಟಿಕಲ್ ಮಾಹಿತಿ ನೀಡಿದರು. ಶಿಕ್ಷಕರ ಹೊಸ ಬಗೆಯ ತರಬೇತಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ನಾಲ್ಕು ಗೋಡೆಗಳ ನಡುವೆ ಪಠ್ಯದಲ್ಲಿರುವ ವಿಷಯವನ್ನು ಕಲಿಯುತ್ತಿದ್ದ ಮಕ್ಕಳು ಗದ್ದೆಗೆ ಇಳಿದು ಮೈ-ಕೈ ಕೆಸರು ಮಾಡಿಕೊಂಡು ಅಪರೂಪದ ಅನುಭವವನ್ನು ಪಡೆದಿದ್ದಾರೆ. ಪ್ರಾಯೋಗಿಕವಾಗಿ ಕೃಷಿ ವಿಷಯದ ಅಧ್ಯನ ಮಾಡಿದ್ದಾರೆ.

ರೈತರು ಹೊಲದಲ್ಲಿ ಕೆಲಸ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ ವಿದ್ಯಾರ್ಥಿಗಳು ಬಳಿಕ ತಾವೇ ಗದ್ದೆಗೆ ಇಳಿದು ನಾಟಿ ಮಾಡುವ ಮೂಲಕ ಗಮನ ಸೆಳೆದರು.
























