ಪಾವಗಡ: ಅಂಗನವಾಡಿಗಳಿಗೆ ನೀಡುವ ಉಚಿತ ಕ್ಷೀರಭಾಗ್ಯ ಹಾಲಿನ ಪೌಡರ್ ಅಂಗಡಿಗಳಲ್ಲಿ ಮಾರಾಟ

ಮಹೇಶ್ ಇ, ಭೂಮನಹಳ್ಳಿ Edited By: ಆಯೇಷಾ ಬಾನು

Updated on: Jun 03, 2024 | 10:28 AM

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿಯ ಹಾಲಿನ ಪುಡಿ ಪ್ಯಾಕೇಟ್​ಗಳು ಪತ್ತೆಯಾಗಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪೌಡರನ್ನು ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ.

1 / 5
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ದುರ್ಬಳಕೆಯಾಗುತ್ತಿದೆ. ಅಂಗನವಾಡಿಯಲ್ಲಿ ಇರಬೇಕಿದ್ದ ಕ್ಷೀರಭಾಗ್ಯದ ಹಾಲುಪುಡಿ ಅಂಗಡಿಯಲ್ಲಿ ಪತ್ತೆಯಾಗಿದೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ದುರ್ಬಳಕೆಯಾಗುತ್ತಿದೆ. ಅಂಗನವಾಡಿಯಲ್ಲಿ ಇರಬೇಕಿದ್ದ ಕ್ಷೀರಭಾಗ್ಯದ ಹಾಲುಪುಡಿ ಅಂಗಡಿಯಲ್ಲಿ ಪತ್ತೆಯಾಗಿದೆ.

2 / 5

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿಯ ಹಾಲಿನ ಪುಡಿ ಪ್ಯಾಕೇಟ್​ಗಳು ಪತ್ತೆಯಾಗಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪೌಡರನ್ನು ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ.

3 / 5

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಸುತ್ತಿದೆ. ಆದರೆ ಅಕ್ರಮವಾಗಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದ್ದು ಸರ್ಕಾರದ ಹಾಲಿನ ಪೌಡರ್ ಈಗ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಉಚಿತವಾಗಿಸುವುದನ್ನು ದುಡ್ಡಿಗೆ ಮಾರಾಟ ಮಾಡಿ ಹಣ ಮಾಡಲಾಗುತ್ತಿದೆ.

4 / 5

ವೈಎನ್ ಹೊಸಕೋಟೆಯ ಸುಮಾರು 8 ಅಂಗಡಿಗಳಲ್ಲಿ ಸರ್ಕಾರದ ಹಾಲಿನ ಪೌಡರ್ ಮಾರಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದಲೇ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದ್ದು ಮಹಿಳಾ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ.

5 / 5

ಪಾವಗಡ ತಾಲೂಕಿನಲ್ಲೇ ಅತಿಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳಿದ್ದಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪಾವಗಡದತ್ತ ಗಮನ ಹರಿಸಬೇಕಿದೆ. ಮಕ್ಕಳಿಗೆ ಬಾಣಂತಿಯರಿಗೆ ನೀಡುವ ಹಾಲಿನ ಪೌಡರ್ ಮಾರಾಟವನ್ನು ತಪ್ಪಿಸಬೇಕಿದೆ.

Loading...
Unable to load recommendations.
Follow Us