ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಲಿದ್ದಾರೆ. ₹800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರಿಡಾರ್ ಇದಾಗಿದ್ದು 5 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನದಿಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು ಮಂತ್ರಪಠಣೆ ಮಾಡಿದ್ರು.
ಉತ್ತರ ಪ್ರದೇಶದ ಲಲಿತ್ ಘಾಟ್ನಲ್ಲಿ ಪ್ರಧಾನಿ ತೀರ್ಥಸ್ನಾನ
ಪ್ರಧಾನಿ ನರೇಂದ್ರ ಮೋದಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಕಾಲ ಭೈರವ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರು
ಗಂಗಾನದಿ ಘಾಟ್ನಿಂದ ನೇರವಾಗಿ ದೇವಾಲಯಕ್ಕೆ ಬರಲು ಈ ಹಿಂದೆ ಕಿರಿದಾದ ರಸ್ತೆಯಲ್ಲಿ ಭಕ್ತರು ತೆರಳಬೇಕಿತ್ತು. ಸದ್ಯ ಈಗ ಕಾಶಿ ದೇಗುಲಕ್ಕೆ ವಿಶಾಲವಾದ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ದೇವಾಲಯ ಪ್ರವೇಶಕ್ಕೆ ದೊಡ್ಡ ಬಾಗಿಲು ನಿರ್ಮಿಸಿದ್ದು, ದೇವಾಲಯದ ಒಳಭಾಗ ಕೂಡ ಮರು ನಿರ್ಮಾಣ ಮಾಡಲಾಗಿದೆ.
ಕಾಶಿ ಕಾರಿಡಾರ್ನಲ್ಲಿ ಸ್ವಚ್ಛತೆ, ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ರಸ್ತೆ ನಿರ್ಮಾಣ ಮಾಡಲಾಗಿದ್ದು 2ನೇ ಹಂತದ ಕಾಮಗಾರಿ ಮುಂದಿನ ವರ್ಷ ಪೂರ್ಣ ಪೂರ್ಣಗೊಳ್ಳಲಿದೆ.
ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ನಿಂದ ಕಡಿತವಾಲಿದೆ.
,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ. ಜೊತೆಯಲ್ಲಿ ಮೋಕ್ಷ ಗೃಹ ಹಾಗೂ ಗೋಡೋಲಿಯಾ ಗೇಟ್ ಮತ್ತು ಭೋಗಶಾಲಾ ಕೂಡ ತಲೆ ಎತ್ತಿವೆ. ಕಾರಿಡಾರ್ ಉದ್ದಕ್ಕೂ ಭಕ್ತರಿಗಾಗಿ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದುವರೆಗೂ ಏರ್ ಆಂಬುಲೆನ್ಸ್ ಕೇಳಿದ್ದಿವಿ. ಇದೀಗ ವಾಟರ್ ಆಂಬುಲೆನ್ಸ್ ಸಹ ಬಂದಿದೆ ನೋಡಿ! ಕಾಶಿ ಕಾರಿಡಾರ್ನಲ್ಲಿ ವಾಟರ್ ಆಂಬುಲೆನ್ಸ್!
Published On - 1:00 pm, Mon, 13 December 21