
ಭಾರತ ಇಂದು 75ನೇ ಗಣರಾಜ್ಯೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ. ಈ ಕಾರ್ಯಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಪರೇಡ್ ಪ್ರದರ್ಶನ ಕೂಡ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೋಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ವೈವಿಧ್ಯಮಯ ಮತ್ತು ರೋಮಾಂಚಕ ಪರಂಪರೆಯ ಚೈತನ್ಯವನ್ನು ಸಾರುವ ಭವ್ಯ ಮೆರವಣಿಗೆ ವೀಕ್ಷಣೆ ಮಾಡಲು ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಕರ್ತವ್ಯ ಪಥದಲ್ಲಿ ಸೇರಿದರು.

ಭಾರತೀಯ ವಾಯು ಸೇನೆಯು ಸಕ್ಷಮ್, ಸಶಕ್ತ್, ಆತ್ಮನಿರ್ಭರ್' ಎಂಬ ಥೀಮ್ ಅನ್ನು ಪ್ರದರ್ಶಿಸಿದೆ.

ದೆಹಲಿ ಪೊಲೀಸ್ ತುಕಡಿಯನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಶ್ವೇತಾ ಕೆ ಸುಗತನ್ ಅವರು ಮುನ್ನಡೆಸಿದ್ದಾರೆ.

ಬಿಎಸ್ಎಫ್ ಮಹಿಳಾ ಬ್ರಾಸ್ ಬ್ಯಾಂಡ್ ಮತ್ತು ಗಡಿ ಭದ್ರತಾ ಪಡೆಯ ಮಹಿಳಾ ತುಕಡಿ 'ನಾರಿ ಶಕ್ತಿ'ಯನ್ನು ತಿಳಿಸುವ ಪ್ರದರ್ಶನವನ್ನು ನೀಡಿದೆ.

ಇದೆ ಮೊದಲ ಬಾರಿಗೆ ಅಗ್ನಿವೀರ್ ಮೂರು ಸೇನೆಗಳ ಮಹಿಳಾ ತಂಡವು ಕರ್ತವ್ಯ ಪಥದಲ್ಲಿ ಪರೇಡ್ ನಡೆಸಿದೆ.

ಭಾರತೀಯ ಸೇನೆಯ ಅತ್ಯಂತ ಹಳೆಯ ಕಾಲಾಳುಪಡೆ ರೆಜಿಮೆಂಟ್ ಮದ್ರಾಸ್ ರೆಜಿಮೆಂಟ್ ಪ್ರದರ್ಶನ ನೀಡಿದೆ.

ರಾಮ್ ಲಲ್ಲಾನ ಪ್ರಾಣಪ್ರತಿಷ್ಠಾ ಸಮಾರಂಭವನ್ನು ಸಂಕೇತಿಸುವ ಪ್ರದರ್ಶನ ಗಣರಾಜ್ಯೋತ್ಸವದಲ್ಲಿ ನಡೆಯಿತು.

ತಾಸರ್ ಸಿಲ್ಕ್ ಉತ್ಪಾದನೆಯಲ್ಲಿ ಬುಡಕಟ್ಟು ಮಹಿಳೆಯರ ಕಾರ್ಯವೈಖರಿ ಬಗೆಗ್ಗಿನ ಪ್ರದರ್ಶನ ನೀಡಲಾಗಿತ್ತು.
Published On - 12:26 pm, Fri, 26 January 24