ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಕಳೆದ ನಾಲ್ಕು ದಿನಗಳಿಂದ ಕಾಲ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಶ್ರಿಗುರುದೇವ ರಾನಡೆ ಆಶ್ರಮದಲ್ಲಿ ತಂಗಿದ್ದರು.
ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಇಂದು (ಜೂ.27) ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ ನೀಡಿ, ಒಂಬುತ್ತು ಗುರುಗಳ ಗದ್ದುಗೆ ದರ್ಶನ ಪಡೆದರು.
ಇಂಚಗೇರಿ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಾಧವಾನಂದ ಶ್ರೀಗಳ ದೇಗುಲಕ್ಕೆ ದರ್ಶನ ಪಡೆದರು. ಬಳಿಕ ಮಠದ ಪೀಠಾಧಿಪತಿ ರೇವಣ ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದರು.
ರೇವಣ ಸಿದ್ದೇಶ್ವರ ಶ್ರೀಗಳು ಮೋಹನ್ ಭಾಗವತ್ ಅವರಿಗೆ ರಾನಡೆ ಅವರ ಗುರುಗಳಾದ ಭಾಹಸಾಹೇಬ್ ಮಹಾರಾಜರ ಭಾವಚಿತ್ರ ನೀಡಿ ಸನ್ಮಾನಿಸಿದರು.
ಬಳಿಕ ಮೋಹನ್ ಭಾಗವತ್ ಅವರು ಶ್ರೀಗಳ ಜೊತೆಗೆ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಇಂಚಗೇರಿ ಸಾಂಪ್ರದಾಯದ ದೇವರ ನಿಂಬರಗಿಯತ್ತ ತೆರಳಿದರು.
ಮೋಹನ್ ಭಾಗವತ್ ಅವರು ದೇವರ ನಿಂಬರಗಿಯಿಂದ ಮಹಾರಾಷ್ಟ್ರದ ಉಮದಿ ಆಶ್ರಮಗಳತ್ತ ಪ್ರಯಾಣ ಬೆಳೆಸಿದ್ದಾರೆ.
Published On - 12:30 pm, Thu, 27 June 24