AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel India: ಸಿಕ್ಕಿಂನ ಈ ಮನೋಹರ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಚಿತ್ರ ಮಾಹಿತಿ

Sikkim tourist places: ಈಶಾನ್ಯ ಭಾರತದ ರಾಜ್ಯವಾಗಿರುವ ಸಿಕ್ಕಿಂ ಸುಂದರವಾದ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಒಂದುವೇಳೆ ನೀವು ಅಲ್ಲಿಗೆ ಪ್ರವಾಸದ ಯೋಜನೆ ಮಾಡಿದ್ದಲ್ಲಿ ಈ ಸ್ಥಳಗಳನ್ನು ಮಿಸ್ ಮಾಡಲೇಬೇಡಿ. ಗ್ಯಾಂಗ್ಟಾಕ್, ಬುದ್ಧ ಪಾರ್ಕ್, ಜುಲುಕ್ ಹಾಗೂ ಪೆಲ್ಲಿಂಗ್ ಸಿಕ್ಕಿಂನಲ್ಲಿ ಬಹುಪ್ರಸಿದ್ಧವಾದ ಸ್ಥಳಗಳಾಗಿವೆ. ಅವುಗಳ ಸಚಿತ್ರ ವಿವರಣೆ ಇಲ್ಲಿದೆ.

shivaprasad.hs
|

Updated on: Apr 24, 2022 | 9:33 AM

Share
ಸಿಕ್ಕಿಂ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪರ್ವತಗಳು ಮತ್ತು ಹಸಿರಿನ ನಡುವೆ ನೆಲೆಗೊಂಡಿರುವ ಈ ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸವನ್ನು ಆನಂದಿಸಲು ಯೋಜಿಸಿದ್ದರೆ, ಅದಕ್ಕೆ ಪೂರಕವಾಗುವ ಮಾಹಿತಿ ಇಲ್ಲಿದೆ. ನೀವು ಯಾವೆಲ್ಲಾ ತಾಣಗಳನ್ನು ಮಿಸ್ ಮಾಡಲೇಬಾರದು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

1 / 5
ಪೆಲ್ಲಿಂಗ್: ಇದು ಸಿಕ್ಕಿಂನ ಒಂದು ಸುಂದರ ತಾಣ. ಸುಮಾರು 7200 ಅಡಿ ಎತ್ತರದಲ್ಲಿರುವ ಈ ನಗರದಲ್ಲಿ ನೀವು ಸಾಹಸ ಕ್ರೀಡೆಗಳನ್ನು ಆಡಬಹುದು, ಚಾರಣ ಮಾಡಬಹುದು. ಪ್ರಶಾಂತವಾಗಿರುವ ಪೆಲ್ಲಿಂಗ್​ನ ವಾತಾವರಣಕ್ಕೆ ನೀವು ಮನಸೋಲೋದು ಗ್ಯಾರಂಟಿ.

2 / 5
ಜುಲುಕ್: ಈ ನಗರಕ್ಕೆ ಭೇಟಿ ನೀಡಿದರೆ ನಿಮ್ಮ ಸಿಕ್ಕಿಂ ಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ ಎಂದೇ ಹೇಳಬಹುದು. ಇದು ಪೂರ್ವ ಹಿಮಾಲಯದ ಮಡಿಲಲ್ಲಿರುವ ಸುಂದರ ನಗರ. ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರಖ್ಯಾತವಾಗಿದ್ದು, ಪ್ರವಾಸಿಗರು ಭೇಟಿ ನೀಡಲು ಹಾತೊರೆಯುತ್ತಾರೆ.

3 / 5
ಗ್ಯಾಂಗ್ಟಾಕ್: ಸಿಕ್ಕಿಂನ ರಾಜಧಾನಿಯಾಗಿರುವ ಗ್ಯಾಂಗ್ಟಾಕ್​ನ ಹೆಸರು ಕೇಳದವರು ವಿರಳ. ಈ ನಗರಕ್ಕೆ ಭೇಟಿ ನೀಡಿದರೆ ನೀವು ರಾಜ್ಯದ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯಬಹುದು. ಮೋಡಗಳಿಂದ ಆವೃತವಾಗಿರುವ ಈ ನಗರ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ನೀವು ಫಿದಾ ಆಗೋದು ಪಕ್ಕಾ.

4 / 5
ಬುದ್ಧ ಪಾರ್ಕ್: ಸಿಕ್ಕಿಂನಲ್ಲಿ ಬುದ್ಧನ ಚಿಂತನೆಗಳನ್ನು ಅನುಸರಿಸುವ ಜನರು ಹೆಚ್ಚಿದ್ದಾರೆ. ಸಿಕ್ಕಿಂನಲ್ಲಿ ಬುದ್ಧನ ಪ್ರತಿಮೆಯನ್ನು ಒಳಗೊಂಡ ‘ಬುದ್ಧ ಪಾರ್ಕ್’ ಬಹುಪ್ರಸಿದ್ಧವಾಗಿದೆ. ನಿಮ್ಮ ಸಿಕ್ಕಿಂ ಭೇಟಿಯಲ್ಲಿ ಇದನ್ನು ಮಿಸ್ ಮಾಡಲೇಬೇಡಿ.

5 / 5
Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ